ಯಾದಗಿರಿ: ಮೊಹರಂ ಕಡೆ ದಿನದ ಅಂಗವಾಗಿಅಲಾಯಿ ಕುಣಿಯಲು ತಮಟೆ ತರಲು ಪಕ್ಕದ ಮನೆಗೆ ಹೋದಾಗ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಹೊಸಹಳ್ಳಿ (ಎಸ್) ತಾಂಡಾದಲ್ಲಿ ನಡೆದಿದೆ.ಹೊಸಹಳ್ಳಿ ತಾಂಡಾದ ಬಾಲಪ್ಪ (45) ಕೊಲೆಯಾದ ವ್ಯಕ್ತಿ.
ಭಾನುವಾರ ಮೊಹರಂನ ಕೊನೆ ಇತ್ತು. ಈ ವೇಳೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕುಣಿತಕ್ಕೆತಮಟೆ ತರಲು ಪಕ್ಕದ ಮನೆಗೆ ಹೋದಾಗ ಐವರುಬಡಿಗೆಯಿಂದ ಹೊಡೆದು ಬಾಲಪ್ಪನ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತುಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಐವರ ವಿರುದ್ಧಪ್ರಕರಣ ದಾಖಲಾಗಿದೆ.