ಯಾದಗಿರಿ ನಗರದ ದೊಡ್ಡ ಕೆರೆಯ ಹತ್ತಿರದ ಹೊಲದಲ್ಲಿ ಹತ್ತಿಗೆ ಗೊಬ್ಬರ ಹಾಕುತ್ತಿರುವ ರೈತರು
ಪ್ರಜಾವಾಣಿ ಚಿತ್ರ/ ರಾಜಕುಮಾರ ನಳ್ಳಿಕರ್
ಜಿಲ್ಲೆಯಲ್ಲಿ ಕಳಪೆ ಬಿತ್ತನೆ ಬೀಜ ರಸಗೊಬ್ಬರ ಕ್ರಿಮಿನಾಶಕ ಮಾದರಿಗಳನ್ನು ಸಂಗ್ರಹಿಸಲಾಗಿದ್ದು 3 ಬೀಜ 1 ಕ್ರಿಮಿನಾಶಕ ಕಳಪೆ ಎಂದು ಕಂಡು ಬಂದಿದೆ. ಕಾನೂನಾತ್ಮಕ ಕ್ರಮ ವಹಿಸಲಾಗಿದೆ. ಇದರಲ್ಲಿ ಯಾವುದೇ ರಾಜಿ ಇಲ್ಲ
ಕೆ.ಎಚ್.ರವಿ ಜಂಟಿ ಕೃಷಿ ನಿರ್ದೇಶಕ
ಎರಡು ಅಂಗಡಿ ಅಮಾನತು
ನಕಲಿ ಬಿತ್ತನೆ ಬೀಜ ಹಾಗೂ ದುಬಾರಿ ಬೆಲೆಗೆ ಮಾರಾಟಕ್ಕೆ ಸಂಬಂಧಿಸಿದಂತೆ ಶಹಾಪುರದ ಎರಡು ಅಂಗಡಿಗಳ ಪರವಾನಗಿಯನ್ನು ಅಮಾನತು ಮಾಡಲಾಗಿದೆ. ಶಹಾಪುರದ ರಾಕೇಶ ಪಾಟೀಲ ಅಗ್ರೋ ಕೇಂದ್ರ ಹಾಗೂ ದೇವಾನಂದ ಮಾಲೀಕತ್ವದ ಅನ್ನದಾತ ಕ್ರಾಪ್ ಕೇರ್ ಪರವಾನಗಿಯನ್ನು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಅಮಾನತು ಮಾಡಿದ್ದರು. ಇದು ನಕಲಿ ಬಿತ್ತನೆ ಬೀಜ ಹಾಗೂ ದುಬಾರಿ ಬೆಲೆಗೆ ಬೀಜ ಮಾರಾಟಕ್ಕೆ ನಿದರ್ಶನವಾಗಿದೆ. ಪರವಾನಗಿ ಪಡೆಯದೇ ಬಿತ್ತನೆ ಬೀಜ ಮಾರಾಟ ನಡೆದಿರುವ ಪ್ರಕರಣಗಳು ಕಂಡು ಬಂದಿವೆ.