ಹವಾಮಾನ ಇಲಾಖೆಯ ಬೆಂಗಳೂರು ಜೂ.24 ರಿಂದ ಜೂ.26 ರವರೆಗೂ ಕರ್ನಾಟಕದ ಉತ್ತರ ಒಳನಾಡಿನ ಯಾದಗಿರಿ, ವಿಜಯಪುರ, ರಾಯಚೂರು ಹಾಗೂ ಕಲಬುರಗಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿದ್ದು, ಈಗಾಗಲೇ ಜಲಾಶಯದಲ್ಲಿ 492.25 ಮೀಟರ್ ನೀರಿನ ಮಟ್ಟದಲ್ಲಿ 490.97 ಮೀಟರಿಗೆ ನೀರು ಇದ್ದು 27.72 ಟಿಎಂಸಿ ಇದೆ. ಜಲಾಶಯ ಭರ್ತಿಗೆ 5.59 ಟಿಎಂಸಿ ನೀರಿನ ಅವಶ್ಯಕತೆ ಇದೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ಆಣೆಕಟ್ಟು ವಿಭಾಗದ ಪ್ರಭಾರ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಪ್ರಕಾಶ ತಿಳಿಸಿದರು.