ಪ್ರತಿ ದಿನ ಮನೆಯಲ್ಲಿ ಅನ್ನದ ಪೊಟ್ಟಣಗಳನ್ನು ಮಾಡಿ ಭಿಕ್ಷುಕರಿಗೆ, ನಿರ್ಗತಿಕರಿಗೆ ಅವರಿದ್ದ ಸ್ಥಳಕ್ಕೆ ಹೋಗಿ ಕೊಡುತ್ತಾರೆ. ಅಶಕ್ತರಿಗೆ ತಮ್ಮ ಕೈಯಿಂದಲೆ ಉಣಿಸುತ್ತಾರೆ. ರೋಗ ಪೀಡಿತ ಅನಾಥರನ್ನು ಆಸ್ಪತ್ರೆಗೆ ಸೇರಿಸುತ್ತಾರೆ. ಇವರ ಸೇವೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಮೇಲಧಿಕಾರಿಗಳು ಇವರ ನಿಸ್ವಾರ್ಥ ಸೇವೆ ಕಂಡು, ಅನೇಕ ಬಾರಿ ಕರ್ತವ್ಯದಲ್ಲಿ ಇದ್ದಾಗಲೂ ಸಮಾಜ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.