<p>ಕಕ್ಕೇರಾ: ಪುರಸಭೆ ವ್ಯಾಪ್ತಿಯ ಗ್ರಾಮಗಳ ರೈತರ ಫಂಪ್ಸೆಟ್ಗಳಿಗೆ ನಿರಂತರ ವಿದ್ಯುತ್ ಒದಗಿಸಿದಿದ್ದರೆ ಬೆಳೆಗಳು ಹಾಳಾಗುವ ಸಂಭವವಿದೆ ಎಂದು ರಾಜ್ಯ ರೈತ ಸಂಘ ಹಸಿರು ಸೇನೆಯ ಪದಾಧಿಕಾರಿಗಳು ವಾಲ್ಮೀಕಿ ವೃತ್ತದಲ್ಲಿ ಶನಿವಾರ ಪ್ರತಿಭಟನೆ ಮಾಡಿ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.</p>.<p>ಈ ವೇಳೆ ಮಾತನಾಡಿದ ಮುಖಂಡ ಬುಚ್ಚಪ್ಪನಾಯಕ, ಹೊಸೂರು ಪೈದೊಡ್ಡಿ, ಗೊಲಪಲ್ಲೇರದೊಡ್ಡಿ, ಬನದೊಡ್ಡಿ, ಗುಗಲಗಟ್ಟಿ ಸೇರಿ ಇತರ ಗ್ರಾಮಗಳ ವ್ಯಾಪ್ತಿಯ ಪಂಪ್ಸೆಟ್ಗಳಿಗೆ ಸಮರ್ಪಕ ವಿದ್ಯುತ್ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು ನಿರಂತರ ವಿದ್ಯುತ್ ನೀಡಬೇಕು, ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ತಿಳಿಸಿದರು.</p>.<p>ಸ್ಥಳಕ್ಕೆ ಭೇಟಿ ನೀಡಿದ ಜೆಸ್ಕಾಂ ಎಇಇ ವಿಷ್ಣು, ರೈತರಿಂದ ಮನವಿ ಪತ್ರ ಸ್ವೀಕರಿಸಿ ‘ನಿರಂತರ ಹಾಗೂ ಸಮರ್ಪಕ ವಿದ್ಯುತ್ ನೀಡಲು ಕ್ರಮಕೈಗೊಳ್ಳಲಾಗುವುದು‘ ಎಂದು ತಿಳಿಸಿದರು.</p>.<p>ಅಂಬ್ರಯ್ಯಸ್ವಾಮಿ, ತಿಪ್ಪಣ್ಣ ಜಂಪಾ, ಹಣಮಂತ ಬನದೊಡ್ಡಿ, ಮುದಕಪ್ಪ ಹೊಸೂರ, ಪರಮಣ್ಣ ಹಡಪದ, ದೇವಿಂದ್ರಪ್ಪ ಕುಂಬಾರ, ಸಂಗಪ್ಪ ಹೊಸೂರ, ಲಕ್ಷ್ಮಣ ಬಂಗೇರ, ಶಿವಪ್ಪ ಕುಂಬಾರ, ಸೋಮರಾಯ ದೊರೆ, ರಾಯಪ್ಪ ಹೊಸೂರ, ಹಣಮಂತ ಗೋನಾಟ್ಲ, ವೆಂಕಟೇಶ ಕಾರಲಕುಂಟಿ, ಸಂಗಯ್ಯಸ್ವಾಮಿ, ಹಣಮಂತ ಸುಂಕಾಪುರ, ದುರಗಪ್ಪ ಮಕಾಶಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಕ್ಕೇರಾ: ಪುರಸಭೆ ವ್ಯಾಪ್ತಿಯ ಗ್ರಾಮಗಳ ರೈತರ ಫಂಪ್ಸೆಟ್ಗಳಿಗೆ ನಿರಂತರ ವಿದ್ಯುತ್ ಒದಗಿಸಿದಿದ್ದರೆ ಬೆಳೆಗಳು ಹಾಳಾಗುವ ಸಂಭವವಿದೆ ಎಂದು ರಾಜ್ಯ ರೈತ ಸಂಘ ಹಸಿರು ಸೇನೆಯ ಪದಾಧಿಕಾರಿಗಳು ವಾಲ್ಮೀಕಿ ವೃತ್ತದಲ್ಲಿ ಶನಿವಾರ ಪ್ರತಿಭಟನೆ ಮಾಡಿ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.</p>.<p>ಈ ವೇಳೆ ಮಾತನಾಡಿದ ಮುಖಂಡ ಬುಚ್ಚಪ್ಪನಾಯಕ, ಹೊಸೂರು ಪೈದೊಡ್ಡಿ, ಗೊಲಪಲ್ಲೇರದೊಡ್ಡಿ, ಬನದೊಡ್ಡಿ, ಗುಗಲಗಟ್ಟಿ ಸೇರಿ ಇತರ ಗ್ರಾಮಗಳ ವ್ಯಾಪ್ತಿಯ ಪಂಪ್ಸೆಟ್ಗಳಿಗೆ ಸಮರ್ಪಕ ವಿದ್ಯುತ್ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು ನಿರಂತರ ವಿದ್ಯುತ್ ನೀಡಬೇಕು, ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ತಿಳಿಸಿದರು.</p>.<p>ಸ್ಥಳಕ್ಕೆ ಭೇಟಿ ನೀಡಿದ ಜೆಸ್ಕಾಂ ಎಇಇ ವಿಷ್ಣು, ರೈತರಿಂದ ಮನವಿ ಪತ್ರ ಸ್ವೀಕರಿಸಿ ‘ನಿರಂತರ ಹಾಗೂ ಸಮರ್ಪಕ ವಿದ್ಯುತ್ ನೀಡಲು ಕ್ರಮಕೈಗೊಳ್ಳಲಾಗುವುದು‘ ಎಂದು ತಿಳಿಸಿದರು.</p>.<p>ಅಂಬ್ರಯ್ಯಸ್ವಾಮಿ, ತಿಪ್ಪಣ್ಣ ಜಂಪಾ, ಹಣಮಂತ ಬನದೊಡ್ಡಿ, ಮುದಕಪ್ಪ ಹೊಸೂರ, ಪರಮಣ್ಣ ಹಡಪದ, ದೇವಿಂದ್ರಪ್ಪ ಕುಂಬಾರ, ಸಂಗಪ್ಪ ಹೊಸೂರ, ಲಕ್ಷ್ಮಣ ಬಂಗೇರ, ಶಿವಪ್ಪ ಕುಂಬಾರ, ಸೋಮರಾಯ ದೊರೆ, ರಾಯಪ್ಪ ಹೊಸೂರ, ಹಣಮಂತ ಗೋನಾಟ್ಲ, ವೆಂಕಟೇಶ ಕಾರಲಕುಂಟಿ, ಸಂಗಯ್ಯಸ್ವಾಮಿ, ಹಣಮಂತ ಸುಂಕಾಪುರ, ದುರಗಪ್ಪ ಮಕಾಶಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>