<p><strong>ಯಾದಗಿರಿ:</strong> ಜಿಲ್ಲೆಯಲ್ಲಿ ಶುಕ್ರವಾರವೂ ಜಿಟಿಜಿಟಿ ಮಳೆ ಮುಂದುವರಿದಿದ್ದು, ಇದರಿಂದ 26 ಮನೆಗಳಿಗೆ ಹಾನಿಯಾಗಿದೆ. </p><p>ಕಳೆದ ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದು, ಸೂರ್ಯನ ದರ್ಶನ ಆಗಿಲ್ಲ. ಆಗಾಗ ಮಳೆ ಸುರಿಯುತ್ತಿದೆ. </p><p>ನಗರದ ಲಕ್ಷ್ಮೀ ನಗರ ಸರ್ಕಾರಿ ಪ್ರಾಥಮಿಕ ಶಾಲೆಗೆ ಮಳೆ ನೀರು ನುಗ್ಗಿದೆ. ಶುಕ್ರವಾರ ಬೆಳಿಗ್ಗೆ ಬಿಡುವು ನೀಡಿದ್ದ ಮಳೆ ಮಧ್ಯಾಹ್ನದಿಂದ ಮತ್ತೆ ಮಳೆ ಸುರಿದಿದೆ.</p><p>ಯಾದಗಿರಿ ತಾಲ್ಲೂಕಿನಲ್ಲಿ 15 ಮನೆಗಳು, ಶಹಾಪುರ ತಾಲ್ಲೂಕಿನಲ್ಲಿ 1, ಸುರಪುರ ತಾಲ್ಲೂಕಿನಲ್ಲಿ 5, ಗುರುಮಠಕಲ್ ತಾಲ್ಲೂಕಿನಲ್ಲಿ 2, ವಡಗೇರಾ ತಾಲ್ಲೂಕಿನಲ್ಲಿ 3 ಸೇರಿದಂತೆ 26 ಮನೆಗಳಿಗೆ ಹಾನಿಯಾಗಿದೆ. </p><p>ಯರಗೋಳ ವರದಿ</p><p>ಯಾದಗಿರಿ ತಾಲ್ಲೂಕಿನ ಯರಗೋಳ ಸುತ್ತಲಿನ ಗ್ರಾಮಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಬಿಡದೆ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಗ್ರಾಮೀಣ ಜನರ ಜೀವನ ತಲ್ಲಣಗೊಂಡಿದೆ. ಗ್ರಾಮೀಣ ಪ್ರದೇಶದ ಜನರ ಬದುಕು ಅತಂತ್ರವಾಗಿದೆ.</p><p>ಕೃಷಿಕರ ಬಿತ್ತನೆ ಚಟುವಟಿಕೆಗಳು ಕುಂಠಿತಗೊಂಡಿವೆ. ಶಾಲಾ, ಕಾಲೇಜುಗಳ ಮೇಲ್ಛಾವಣಿ, </p><p>ಗೋಡೆಗಳಿಂದ ನೀರು ಜಿನುಗುತ್ತಿದ್ದು, ರಜೆ ಘೋಷಣೆ ಮಾಡಲಾಗಿದೆ.</p><p>‘ಹಲವು ಗ್ರಾಮಗಳಲ್ಲಿ ಮನೆಯ ಗೋಡೆಗಳು, ಮೇಲ್ಛಾವಣಿ ಕುಸಿದಿವೆ’ಎಂದು ಗ್ರಾಮ ಲೆಕ್ಕಿಗರಾದ ದೇವಿಕಾ, ರಾಧಿಕಾ, ರಾಘವೇಂದ್ರ, ಅಪೂರ್ವ, ಶಕುಂತಲಾ, ಬಸಣ್ಣ 'ಪ್ರಜಾವಾಣಿ'ಗೆ ಮಾಹಿತಿ ನೀಡಿದರು.</p><p>ತುಂತುರು ಮಳೆ ಜೊತೆಗೆ ತಂಪಾದ ಗಾಳಿ ಬೀಸುತ್ತಿದ್ದು ಮಕ್ಕಳು, ವೃದ್ಧರಿಗೆ ಶೀತ, ಜ್ವರ ಕಾಣಿಸಿಕೊಳ್ಳುತ್ತಿದೆ. ಹಾಲು, ಪತ್ರಿಕೆ, ತರಕಾರಿ ಹಂಚುವ ಯುವಕರ ಪಾಡು ಹೇಳತೀರದಾಗಿದೆ. ಸಣ್ಣ, ಪುಟ್ಟ ಹಳ್ಳಗಳು ತುಂಬಿದ್ದು, ಕೆರೆಗಳಿಗೆ ನೀರು ಹರಿದು ಬರುತ್ತಿವೆ.</p><p>ಗ್ರಾಮದ ಚರಂಡಿಗಳು, ರಸ್ತೆಗಳಲ್ಲಿ ಕೆಸರು ನೀರು ಹರಿಯುತ್ತಿದೆ. ಸಾರ್ವಜನಿಕರಿಗೆ, ಬೈಕ್ ಸವಾರರಿಗೆ ದೊಡ್ಡ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸೊಳ್ಳೆಗಳು, ಕ್ರಿಮಿ ಕೀಟಗಳ ಕಾಟ ಹೆಚ್ಚಾಗಿದೆ. ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು, ಸಾರ್ವಜನಿಕರು ಕತ್ತಲಲ್ಲಿ ದಿನ ಕಳೆಯುವಂತಾಗಿದೆ.</p><p>ಹೊನಗೇರಾ, ಖಾನಳ್ಳಿ, ಚಾಮನಹಳ್ಳಿ, ಅಲ್ಲಿಪುರ, ಕಂಚಗಾರಹಳ್ಳಿ, ವಡ್ನಳ್ಳಿ, ಬೆಳಗೇರಾ, ಬಾಚವಾರ, ಚಾಮನಹಳ್ಳಿ, ಹೆಡಗಿಮದ್ರಾ, ಠಾಣಗುಂದಿ, ಅಬ್ಬೆತುಮಕೂರು, ಬೊಮ್ಮ ಚಟ್ನಹಳ್ಳಿ, ಮುದ್ನಾಳ, ಖಾನಳ್ಳಿ, ವಡ್ಡನಹಳ್ಳಿ, ಕ್ಯಾಸಪ್ಪನಹಳ್ಳಿ, ಬಸವಂತಪುರ, ಅರಿಕೇರಾ (ಬಿ), ಹೋರುಂಚಾ, ಯಡ್ಡಳ್ಳಿ, ಸಮಣಾಪುರ, ಕೆ.ಹೊಸಳ್ಳಿ, ಬಂದಳ್ಳಿ, ಹತ್ತಿಕುಣಿ, ಕೋಟಗೇರಾ, ಮಾಟನಹಳ್ಳಿ ಗ್ರಾಮಗಳಲ್ಲಿ ತುಂತುರು ಮಳೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ಜಿಲ್ಲೆಯಲ್ಲಿ ಶುಕ್ರವಾರವೂ ಜಿಟಿಜಿಟಿ ಮಳೆ ಮುಂದುವರಿದಿದ್ದು, ಇದರಿಂದ 26 ಮನೆಗಳಿಗೆ ಹಾನಿಯಾಗಿದೆ. </p><p>ಕಳೆದ ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದು, ಸೂರ್ಯನ ದರ್ಶನ ಆಗಿಲ್ಲ. ಆಗಾಗ ಮಳೆ ಸುರಿಯುತ್ತಿದೆ. </p><p>ನಗರದ ಲಕ್ಷ್ಮೀ ನಗರ ಸರ್ಕಾರಿ ಪ್ರಾಥಮಿಕ ಶಾಲೆಗೆ ಮಳೆ ನೀರು ನುಗ್ಗಿದೆ. ಶುಕ್ರವಾರ ಬೆಳಿಗ್ಗೆ ಬಿಡುವು ನೀಡಿದ್ದ ಮಳೆ ಮಧ್ಯಾಹ್ನದಿಂದ ಮತ್ತೆ ಮಳೆ ಸುರಿದಿದೆ.</p><p>ಯಾದಗಿರಿ ತಾಲ್ಲೂಕಿನಲ್ಲಿ 15 ಮನೆಗಳು, ಶಹಾಪುರ ತಾಲ್ಲೂಕಿನಲ್ಲಿ 1, ಸುರಪುರ ತಾಲ್ಲೂಕಿನಲ್ಲಿ 5, ಗುರುಮಠಕಲ್ ತಾಲ್ಲೂಕಿನಲ್ಲಿ 2, ವಡಗೇರಾ ತಾಲ್ಲೂಕಿನಲ್ಲಿ 3 ಸೇರಿದಂತೆ 26 ಮನೆಗಳಿಗೆ ಹಾನಿಯಾಗಿದೆ. </p><p>ಯರಗೋಳ ವರದಿ</p><p>ಯಾದಗಿರಿ ತಾಲ್ಲೂಕಿನ ಯರಗೋಳ ಸುತ್ತಲಿನ ಗ್ರಾಮಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಬಿಡದೆ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಗ್ರಾಮೀಣ ಜನರ ಜೀವನ ತಲ್ಲಣಗೊಂಡಿದೆ. ಗ್ರಾಮೀಣ ಪ್ರದೇಶದ ಜನರ ಬದುಕು ಅತಂತ್ರವಾಗಿದೆ.</p><p>ಕೃಷಿಕರ ಬಿತ್ತನೆ ಚಟುವಟಿಕೆಗಳು ಕುಂಠಿತಗೊಂಡಿವೆ. ಶಾಲಾ, ಕಾಲೇಜುಗಳ ಮೇಲ್ಛಾವಣಿ, </p><p>ಗೋಡೆಗಳಿಂದ ನೀರು ಜಿನುಗುತ್ತಿದ್ದು, ರಜೆ ಘೋಷಣೆ ಮಾಡಲಾಗಿದೆ.</p><p>‘ಹಲವು ಗ್ರಾಮಗಳಲ್ಲಿ ಮನೆಯ ಗೋಡೆಗಳು, ಮೇಲ್ಛಾವಣಿ ಕುಸಿದಿವೆ’ಎಂದು ಗ್ರಾಮ ಲೆಕ್ಕಿಗರಾದ ದೇವಿಕಾ, ರಾಧಿಕಾ, ರಾಘವೇಂದ್ರ, ಅಪೂರ್ವ, ಶಕುಂತಲಾ, ಬಸಣ್ಣ 'ಪ್ರಜಾವಾಣಿ'ಗೆ ಮಾಹಿತಿ ನೀಡಿದರು.</p><p>ತುಂತುರು ಮಳೆ ಜೊತೆಗೆ ತಂಪಾದ ಗಾಳಿ ಬೀಸುತ್ತಿದ್ದು ಮಕ್ಕಳು, ವೃದ್ಧರಿಗೆ ಶೀತ, ಜ್ವರ ಕಾಣಿಸಿಕೊಳ್ಳುತ್ತಿದೆ. ಹಾಲು, ಪತ್ರಿಕೆ, ತರಕಾರಿ ಹಂಚುವ ಯುವಕರ ಪಾಡು ಹೇಳತೀರದಾಗಿದೆ. ಸಣ್ಣ, ಪುಟ್ಟ ಹಳ್ಳಗಳು ತುಂಬಿದ್ದು, ಕೆರೆಗಳಿಗೆ ನೀರು ಹರಿದು ಬರುತ್ತಿವೆ.</p><p>ಗ್ರಾಮದ ಚರಂಡಿಗಳು, ರಸ್ತೆಗಳಲ್ಲಿ ಕೆಸರು ನೀರು ಹರಿಯುತ್ತಿದೆ. ಸಾರ್ವಜನಿಕರಿಗೆ, ಬೈಕ್ ಸವಾರರಿಗೆ ದೊಡ್ಡ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸೊಳ್ಳೆಗಳು, ಕ್ರಿಮಿ ಕೀಟಗಳ ಕಾಟ ಹೆಚ್ಚಾಗಿದೆ. ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು, ಸಾರ್ವಜನಿಕರು ಕತ್ತಲಲ್ಲಿ ದಿನ ಕಳೆಯುವಂತಾಗಿದೆ.</p><p>ಹೊನಗೇರಾ, ಖಾನಳ್ಳಿ, ಚಾಮನಹಳ್ಳಿ, ಅಲ್ಲಿಪುರ, ಕಂಚಗಾರಹಳ್ಳಿ, ವಡ್ನಳ್ಳಿ, ಬೆಳಗೇರಾ, ಬಾಚವಾರ, ಚಾಮನಹಳ್ಳಿ, ಹೆಡಗಿಮದ್ರಾ, ಠಾಣಗುಂದಿ, ಅಬ್ಬೆತುಮಕೂರು, ಬೊಮ್ಮ ಚಟ್ನಹಳ್ಳಿ, ಮುದ್ನಾಳ, ಖಾನಳ್ಳಿ, ವಡ್ಡನಹಳ್ಳಿ, ಕ್ಯಾಸಪ್ಪನಹಳ್ಳಿ, ಬಸವಂತಪುರ, ಅರಿಕೇರಾ (ಬಿ), ಹೋರುಂಚಾ, ಯಡ್ಡಳ್ಳಿ, ಸಮಣಾಪುರ, ಕೆ.ಹೊಸಳ್ಳಿ, ಬಂದಳ್ಳಿ, ಹತ್ತಿಕುಣಿ, ಕೋಟಗೇರಾ, ಮಾಟನಹಳ್ಳಿ ಗ್ರಾಮಗಳಲ್ಲಿ ತುಂತುರು ಮಳೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>