ಹುಣಸಗಿ: ಪಟ್ಟಣದ ವರಹಳ್ಳೆರಾಯ ದೇವಸ್ಥಾನದಲ್ಲಿ ಗುರುವಾರ ವೇದವತಿ ಮಹಿಳಾ ಭಜನಾ ಮಂಡಳಿಯ ವತಿಯಿಂದ ಶ್ರೀರಾಮನವಮಿ ಆಚರಿಸಲಾಯಿತು.
ಬೆಳಿಗ್ಗೆ ಅರ್ಚಕ ಪ್ರಲ್ಹಾದಾಚಾರ್ಯ ಜೋಷಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬಳಿಕ ಭಜನಾ ಮಂಡಳಿಯ ಮಹಿಳೆಯರು ತೊಟ್ಟಿಲು ಪೂಜೆ ನೆರವೇರಿಸಿದರು. ಹರಿನಾಮ ಸ್ಮರಣೆ ಹಾಗೂ ಭಜನೆ ಮಾಡಿದರು. ಭಕ್ತರಿಗೆ ಕೋಸಂಬರಿ, ಪಾನಕ ವಿತರಿಸಲಾಯಿತು.
ಭಜನಾ ಮಂಡಳಿಯ ಅಧ್ಯಕ್ಷೆ ಭಾಗ್ಯಶ್ರೀ ದೇಶಪಾಂಡೆ, ಉಪಾಧ್ಯಕ್ಷೆ ಸುವರ್ಣಲತಾ, ಕಲ್ಪನಾ, ವಿದ್ಯಾವತಿ, ಮಾಲಾ, ಪದ್ಮಾವತಿ, ಸುಲೋಚನಾ, ಅಂಜನಾ, ಸರೋಜನಿ, ಸವಿತಾ ಶೆಟ್ಟಿ, ರೂಪಾ ಇದ್ದರು.
ರಘುನಾಥಪುರದ ಕೋದಂಡ ರಾಮ ದೇವಸ್ಥಾನದಲ್ಲಿ ರಾಮನವಮಿ ಆಚರಿಸಲಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.