<p><strong>ಸುರಪುರ:</strong> ‘ಎಲ್ಲಾ ಬೌದ್ಧ ಅನುಯಾಯಿಗಳು ಬೌದ್ಧ ಧಮ್ಮವನ್ನು ಪಾಲಿಸುವುದರ ಜತೆಗೆ ನಿತ್ಯವೂ ತ್ರಿಸರಣ ಪಂಚಶೀಲ ಪಠಣ ಮಾಡಬೇಕು. ಇದರಿಂದ ಆ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ’ ಎಂದು ಮುಖಂಡ ನಾಗಣ್ಣ ಕಲ್ಲದೇವನಹಳ್ಳಿ ಹೇಳಿದರು.</p>.<p>ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಪೌರ್ಣಿಮೆ ಅಂಗವಾಗಿ ಏರ್ಪಡಿಸಿದ್ದ ಧಮ್ಮ ವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಈಗಾಗಲೇ ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ಅಧ್ಯಕ್ಷ ವೆಂಕಟೇಶ ಹೊಸ್ಮನಿ ಪರಿಪೂರ್ಣ ಬೌದ್ಧ ಅನುಯಾಯಿಯಾಗಿ ತಮ್ಮ ಮನೆಯಲ್ಲಿದ್ದ ದೇವರ ಫೋಟೊಗಳನ್ನು ಕೃಷ್ಣಾ ನದಿಗೆ ಅರ್ಪಿಸಿದ್ದಾರೆ. ಅದರಂತೆ ಎಲ್ಲಾ ಬೌದ್ಧ ಅನುಯಾಯಿಗಳು ಪರಿವರ್ತನೆಯಾಗಬೇಕು’ ಎಂದರು.</p>.<p>ರಾಹುಲ ಹುಲಿಮನಿ ಮಾತನಾಡಿ, ‘ಈಗ ಎಲ್ಲರೂ ಪ್ರತಿನಿತ್ಯ ತಮ್ಮ ತಮ್ಮ ಮನೆಯಲ್ಲಿ ತ್ರಿಸರಣ ಪಂಚಶೀಲ ಪಠಣ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ನಾವು ಪ್ರತಿ ತಿಂಗಳು ನಡೆಸುತ್ತಿರುವ ಈ ಕಾರ್ಯಕ್ರಮ ನ್ಯೂಯಾರ್ಕ್ನ ಉಪಾಸಕರಿಗೂ ಮೆಚ್ಚುಗೆಯಾಗಿದೆ. ಅವರು ಇಲ್ಲಿಗೆ ಭೇಟಿ ನೀಡುವ ಉತ್ಸುಕತೆ ತೋರಿದ್ದಾರೆ’ ಎಂದರು.</p>.<p>ಉಪಾಸಕರು ಗೌತಮ ಬುದ್ಧರ ಪುತ್ಥಳಿಗೆ ಮೇಣದ ಬತ್ತಿ ಬೆಳಗಿ ಪುಷ್ಪಾರ್ಚನೆ ಮಾಡಿ ವಂದಿಸಿದರು. ನಂತರ ತ್ರಿಸರಣ ಪಂಚಶೀಲ ಪಠಣ ನಡೆಸಿದರು.</p>.<p>ಭೋಜನ ದಾನಿ ಶರಣು ಹಸನಾಪುರ ಅವರನ್ನು ಗೌರವಿಸಲಾಯಿತು.</p>.<p>ವೆಂಕಟೇಶ ಹೊಸ್ಮನಿ, ಭೀಮರಾಯ ಸಿಂಧಗೇರಿ, ಮಾಳಪ್ಪ ಕಿರದಳ್ಳಿ, ಶಿವರಾಜ ಪಾಣೆಗಾಂವ್, ರಾಜು ಶಖಾಪುರ, ಶಿವಶಂಕರ ಬೊಮ್ಮನಹಳ್ಳಿ, ಚಂದಪ್ಪ ಪಂಚಮ್, ಶ್ರೀಮಂತ ಚಲುವಾದಿ, ಹಣಮಂತ ಆರ್.ಕೆ.ಎನ್ ಕಾಲೋನಿ, ವೀರಭದ್ರಪ್ಪ ತಳವಾರಗೇರ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ:</strong> ‘ಎಲ್ಲಾ ಬೌದ್ಧ ಅನುಯಾಯಿಗಳು ಬೌದ್ಧ ಧಮ್ಮವನ್ನು ಪಾಲಿಸುವುದರ ಜತೆಗೆ ನಿತ್ಯವೂ ತ್ರಿಸರಣ ಪಂಚಶೀಲ ಪಠಣ ಮಾಡಬೇಕು. ಇದರಿಂದ ಆ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ’ ಎಂದು ಮುಖಂಡ ನಾಗಣ್ಣ ಕಲ್ಲದೇವನಹಳ್ಳಿ ಹೇಳಿದರು.</p>.<p>ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಪೌರ್ಣಿಮೆ ಅಂಗವಾಗಿ ಏರ್ಪಡಿಸಿದ್ದ ಧಮ್ಮ ವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಈಗಾಗಲೇ ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ಅಧ್ಯಕ್ಷ ವೆಂಕಟೇಶ ಹೊಸ್ಮನಿ ಪರಿಪೂರ್ಣ ಬೌದ್ಧ ಅನುಯಾಯಿಯಾಗಿ ತಮ್ಮ ಮನೆಯಲ್ಲಿದ್ದ ದೇವರ ಫೋಟೊಗಳನ್ನು ಕೃಷ್ಣಾ ನದಿಗೆ ಅರ್ಪಿಸಿದ್ದಾರೆ. ಅದರಂತೆ ಎಲ್ಲಾ ಬೌದ್ಧ ಅನುಯಾಯಿಗಳು ಪರಿವರ್ತನೆಯಾಗಬೇಕು’ ಎಂದರು.</p>.<p>ರಾಹುಲ ಹುಲಿಮನಿ ಮಾತನಾಡಿ, ‘ಈಗ ಎಲ್ಲರೂ ಪ್ರತಿನಿತ್ಯ ತಮ್ಮ ತಮ್ಮ ಮನೆಯಲ್ಲಿ ತ್ರಿಸರಣ ಪಂಚಶೀಲ ಪಠಣ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ನಾವು ಪ್ರತಿ ತಿಂಗಳು ನಡೆಸುತ್ತಿರುವ ಈ ಕಾರ್ಯಕ್ರಮ ನ್ಯೂಯಾರ್ಕ್ನ ಉಪಾಸಕರಿಗೂ ಮೆಚ್ಚುಗೆಯಾಗಿದೆ. ಅವರು ಇಲ್ಲಿಗೆ ಭೇಟಿ ನೀಡುವ ಉತ್ಸುಕತೆ ತೋರಿದ್ದಾರೆ’ ಎಂದರು.</p>.<p>ಉಪಾಸಕರು ಗೌತಮ ಬುದ್ಧರ ಪುತ್ಥಳಿಗೆ ಮೇಣದ ಬತ್ತಿ ಬೆಳಗಿ ಪುಷ್ಪಾರ್ಚನೆ ಮಾಡಿ ವಂದಿಸಿದರು. ನಂತರ ತ್ರಿಸರಣ ಪಂಚಶೀಲ ಪಠಣ ನಡೆಸಿದರು.</p>.<p>ಭೋಜನ ದಾನಿ ಶರಣು ಹಸನಾಪುರ ಅವರನ್ನು ಗೌರವಿಸಲಾಯಿತು.</p>.<p>ವೆಂಕಟೇಶ ಹೊಸ್ಮನಿ, ಭೀಮರಾಯ ಸಿಂಧಗೇರಿ, ಮಾಳಪ್ಪ ಕಿರದಳ್ಳಿ, ಶಿವರಾಜ ಪಾಣೆಗಾಂವ್, ರಾಜು ಶಖಾಪುರ, ಶಿವಶಂಕರ ಬೊಮ್ಮನಹಳ್ಳಿ, ಚಂದಪ್ಪ ಪಂಚಮ್, ಶ್ರೀಮಂತ ಚಲುವಾದಿ, ಹಣಮಂತ ಆರ್.ಕೆ.ಎನ್ ಕಾಲೋನಿ, ವೀರಭದ್ರಪ್ಪ ತಳವಾರಗೇರ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>