ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಹೆಚ್ಚುತ್ತಿವೆ ಅಕ್ಕಿ, ಎಣ್ಣೆ ಕಳವು ಪ್ರಕರಣ: ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ!

Published : 5 ಡಿಸೆಂಬರ್ 2023, 6:50 IST
Last Updated : 5 ಡಿಸೆಂಬರ್ 2023, 6:50 IST
ಫಾಲೋ ಮಾಡಿ
Comments
ಆಹಾರ ಸರಬರಾಜು ಇಲಾಖೆಯ ಉಪನಿರ್ದೇಶಕ ಶಿರಸ್ತೇದಾರ್‌ ನಿರೀಕ್ಷಕರಿಗೆ ನೋಟಿಸ್‌ ನೀಡಲಾಗಿದೆ. ಮುಂದಿನ ಕ್ರಮವನ್ನು ಆ ಇಲಾಖೆಯ ಆಯುಕ್ತರು ಕೈಗೊಳ್ಳಲಿದ್ದಾರೆ. ಅಕ್ಷರ ದಾಸೋಹ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಸಿಇಒಗೆ ಅವರಿಗೆ ಸೂಚಿಸುತ್ತೇನೆ
ಸುಶೀಲಾ ಬಿ ಜಿಲ್ಲಾಧಿಕಾರಿ
ಜಿಪಿಎಸ್‌ ವಾಹನಗಳಿಲ್ಲ
ಜಿಲ್ಲೆಯಲ್ಲಿ ಪಡಿತರ ಸಾಗಿಸುವ 56 ಲಾರಿಗಳಿದ್ದು ಒಂದೇ ಒಂದು ಲಾರಿಗೂ ಜಿಪಿಎಸ್ ಅಳವಡಿಸಿಲ್ಲ. ಜಿಪಿಎಸ್ ಅಳವಡಿಕೆ ಮಾಡಿ ವಾಹನಗಳ ಮೇಲೆ ಕಣ್ಣಿಡಬೇಕಿದ್ದ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಇದುವರೆಗೂ ಜಿಪಿಎಸ್ ಅಳವಡಿಕೆ ಮಾಡಲು ಟೆಂಡರ್ ಅನ್ನೂ ಕರೆಯದೇ ಚೆಲ್ಲಾಟವಾಡುತ್ತಿದ್ದಾರೆ. ಇದು ಇನ್ನೂ ಆಯುಕ್ತರ ಹಂತದಲ್ಲಿದೆ ಎನ್ನುವ ಮಾತುಗಳು ಅಧಿಕಾರಿಗಳ ವಲಯದಲ್ಲಿ ಕೇಳಿ ಬರುತ್ತಿವೆ. ಜಿಪಿಎಸ್ ಇಲ್ಲದ ಕಾರಣಕ್ಕೆ ಇದೇ ವರ್ಷ ಮೇ ತಿಂಗಳಲ್ಲಿ ಶಹಾಪುರ ನಗರದಿಂದ ಲಾರಿ ಸಮೇತ ಪಡಿತರ ಕಳ್ಳವು ಆಗಿತ್ತು. ಬಳಿಕ ಲಾರಿಯಲ್ಲಿದ್ದ ಪಡಿತರ ಕದ್ದೊಯ್ದು ಕೇವಲ ಖಾಲಿ ಲಾರಿ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದರು. ಪಡಿತರ ಸಾಗಣೆ ಮಾಡುತ್ತಿದ್ದ ಲಾರಿಗೆ ಜಿಪಿಎಸ್ ಇಲ್ಲದಿರುವುದೇ ಇದಕ್ಕೆ ಕಾರಣ ಎನ್ನುವುದು ಜಗಜ್ಜಾಹೀರಾಗಿತ್ತು. ಬಳಿಕ ಪಡಿತರ ಸಾಗಣೆಯ ಟೆಂಡರ್‌ ಪಡೆದಿದ್ದವರಿಂದಲೇ  ಕಳುವಾದಷ್ಟು ಅಕ್ಕಿಯನ್ನು ವಸೂಲಿ ಮಾಡಲಾಗಿತ್ತು. ‘ಆಹಾರ ಧಾನ್ಯ ಸಂಗ್ರಹಿಸುವ ಗೋದಾಮಿನಿಂದ ಸಗಟು ಚಿಲ್ಲರೆ ಸಾಗಾಟ ಮಾಡುವ ಸಾಗಾಟಗಾರರು ಪಡಿತರ ತೆಗೆದುಕೊಂಡು ಹೋಗುತ್ತಾರೆ. ಈ ರೀತಿ ಪಡಿತರ ಆಹಾರ ಧಾನ್ಯ ಸಾಗಣೆಗೆ ಉಪಯೋಗಿಸುವ ವಾಹನಗಳಿಗೆ ಕಡ್ಡಾಯವಾಗಿ ವಿರೂಪಗೊಳಿಸಲು ಸಾಧ್ಯವಾದಂಥ ಜಿಪಿಎಸ್‌ ಸಾಧನವನ್ನು ಇಲಾಖೆಯಿಂದಲೇ ಅಳವಡಿಸಬೇಕು. ಆದರೆ ಇರುವರೆಗೂ ಇಲಾಖೆ ಜಿಪಿಎಸ್ ಅಳವಡಿಕೆ ಮಾಡುವ ಗೋಜಿಗೆ ಹೋಗಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಗಿರಿಯಪ್ಪ ಆರೋಪಿಸುತ್ತಾರೆ.
ಅಕ್ಷರ ದಾಸೋಹ ಧಾನ್ಯವೂ ಕಳವು
ಇತ್ತೀಚೆಗೆ ಅಕ್ಷರ ದಾಸೋಹ ಧಾನ್ಯಗಳ ಕಳವು ಪ್ರಕರಣಗಳು ಈಚೆಗೆ ಹೆಚ್ಚಾಗಿವೆ. ಪೊಲೀಸ್ ಕೇಸ್ ದಾಖಲಿಸಿದ್ದೇವೆ. ಸೂಕ್ತ ಕ್ರಮ ಕೈಗೊಂಡಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಇಲ್ಲಿಯವರೆಗೆ ಯಾರ ವಿರುದ್ಧವೂ ಗಂಭೀರ ಕ್ರಮವಾಗಿಲ್ಲ! ‘ಶಹಾಪುರ ತಾಲ್ಲೂಕಿನ ನಿಗಮದ ಉಗ್ರಾಣದಿಂದಲೇ ಅಕ್ಕಿ ತುಂಬಿದ ಲಾರಿಯ ಕಳ್ಳತನವಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಾಗಿದೆ ಹೊರತು ಯಾವ ಕ್ರಮ ಆಗಿದೆ ಎಂದು ಗೊತ್ತಾಗಿಲ್ಲ. ಸುರಪುರದಲ್ಲಿ 3 ಸಾವಿರ ಕ್ವಿಂಟಲ್ ಪಡಿತರ ಅಕ್ಕಿ ಕಳ್ಳತನವಾಗಿದೆ ಎಂದು ಸುದ್ದಿಯಾಗಿತ್ತು. ಜೊತೆಗೆ ಅಕ್ಷರ ದಾಸೋಹಕ್ಕೆ ಸಂಬಂಧಿಸಿದಂತೆ 38 ಕ್ವಿಂಟಲ್ ಅಕ್ಕಿ ಕೂಡ ಕಳ್ಳತನವಾಗಿತ್ತು. ಆದರೆ ಯಾವ ಕ್ರಮವೂ ಆಗಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಕಳವು ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ’ ಎಂಬುದು ಸಾಮಾಜಿಕ ಕಾರ್ಯಕರ್ತ ಯಲ್ಲಯ್ಯ ನಾಯಕ ವನದುರ್ಗ ಆರೋಪ.
ಅಧಿಕಾರಿಯಿಂದಲೇ ಕಳವು ಮಾಹಿತಿ
‘ಬಿಸಿಯೂಟ ಯೋಜನೆಯ ಆಹಾರ ಧಾನ್ಯ ಅಡುಗೆ ಎಣ್ಣೆ ಶಾಲೆಗಳಿಗೆ ಸರಬರಾಜು ಮಾಡಿದ ನಂತರ ಉಳಿಕೆಯಾಗಬೇಕಾಗಿದ್ದ ಸುಮಾರು 128 ಲೀಟರ್‌ಗಿಂತ ಹೆಚ್ಚಿನ ಅಡುಗೆ ಎಣ್ಣೆ ಗೋದಾಮಿನಲ್ಲಿ ಕೊರತೆ ಉಂಟಾಗಿದೆ’ ಎಂದು ಈಚೆಗೆ ಅಧಿಕಾರಿಯೊಬ್ಬರು ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ‘ಸುರಪುರ ತಾಲ್ಲೂಕಿನ ಏಳು ಮಾರ್ಗಗಳಿಗೆ ಆಹಾರ ಧಾನ್ಯ ಅಡುಗೆ ಎಣ್ಣೆ ಸರಬರಾಜು ಮಾಡಿದ್ದು ಆದರೆ 128 ಲೀಟರ್ ಅಡುಗೆ ಎಣ್ಣೆ ಗೋದಾಮಿನಲ್ಲಿ ಉಳಿಯಬೇಕಿತ್ತು. ಆದರೆ ಇದನ್ನು ಪರಿಶೀಲಿಸಿದಾಗ ಕೊರತೆಯಾಗಿರುವುದು ಕಂಡು ಬಂದಿದೆ’ ಎಂದು  ಮೇಲಧಿಕಾರಿಗಳಿಗೆ ಬರೆದ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ. ಗೋದಾಮಿನಲ್ಲಿ ಕಳವು ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬುದಕ್ಕೆ ಇದು ತಾಜಾ ಉದಾಹರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT