ಶಹಾಪುರ: ತಾಲ್ಲೂಕಿನ ಸಗರ ಗ್ರಾಮದ ಹಜರತ್ ಮುನವರ್ ಭಾಷಾ ದರ್ಗಾದ ಜಾತ್ರೆ ಅಂಗವಾಗಿ ಜಾತ್ರೆಯಲ್ಲಿ ವಿವಿಧ ಬಗೆಯಲ್ಲಿ ತಯಾರಿಸಿದ ಜಿಲೇಬಿ ಗ್ರಾಹಕರನ್ನು ಸೆಳೆದವು.
ಹಿಂದೂ-ಮುಸ್ಲಿಂರ ಭಾವೈಕ್ಯತೆಯ ತಾಣವಾಗಿರುವ ಇಲ್ಲಿನ ಜಾತ್ರೆಗೆ ಭಕ್ತರು ಆಗಮಿಸಿ ದರ್ಗಾದಲ್ಲಿ ದರ್ಶನ ಪಡೆದು ನಂತರ ಜಿಲೇಬಿ ಸೇವಿಸಿದರೆ ಒಳ್ಳೆಯದಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಗ್ರಾಮದ ಚಾವಡಿ ಮುಂದೆ ಮೂರು ಗಂಟೆ ಮಾತ್ರ ಜಿಲೇಬಿ ಸಿಗುತ್ತದೆ. ಜಾತ್ರೆಯಲ್ಲಿ ವಿಶಿಷ್ಟವಾಗಿ ತಯಾರಿಸುವ ಸಜ್ಜೆ ಜಿಲೇಬಿಗೆ ಭಕ್ತರು ಹೆಚ್ಚು ಇಷ್ಟ ಪಡುತ್ತಾರೆ ಎನ್ನುತ್ತಾರೆ ಗ್ರಾಮದ ಮಂಜುನಾಥ ಬಿರಾದಾರ.