ಕಿಯೋಸ್ಕ್ ಮೆಶಿನ್ ಬಳಸಿ ರೈತರ ಜಮೀನುಗಳಿಗೆ ಅಗತ್ಯವಿದ್ದಷ್ಟು ನೀರು ಹರಿಸುವ ವಿಶೇಷ ತಂತ್ರಜ್ಞಾನವಾದ ಸ್ಕಾಡಾ ಅಥವಾ ಸೂಪರಿವೈಸರಿ ಕಂಟ್ರೋಲ್ ಆಂಡ್ ಡೇಟಾ ಅಕ್ಯುಸಿಶಿನ್ ಪ್ರೊಜೆಕ್ಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಯಾದಗಿರಿಯಲ್ಲಿ ಉದ್ಘಾಟಿಸಿದ್ದಾರೆ. ಈ ವಿಶೇಷ ತಂತ್ರಜ್ಞಾನದ ಮೂಲಕ ರೈತರ ಜಮೀನಿಗೆ ಆಟೊಮೇಟೆಡ್ ಗೇಟ್ ವ್ಯವಸ್ಥೆಯಿಂದ ನೀರು ಹರಿಯುತ್ತದೆ.