<p><strong>ಸುರಪುರ</strong>: ‘ಸಂಗೀತಕ್ಕೆ ಸಮ್ಮೋಹನಗೊಳಿಸುವ ಶಕ್ತಿ ಇದೆ. ಸಂಗೀತ ಸರ್ವರಿಗೂ ಸಂತೋಷ ನೀಡುತ್ತದೆ. ಸಂಗೀತ ಕಲೆಗೆ ಸಮಸ್ತ ಜೀವರಾಶಿಯನ್ನು ಮೋಡಿ ಮಾಡುವ ಶಕ್ತಿಯಿದೆ’ ಎಂದು ದೇವಾಂಗ ಸಮಾಜದ ಅಧ್ಯಕ್ಷ ಶರಣಪ್ಪ ಗುಮ್ಮಾ ಹೇಳಿದರು.</p>.<p>ಸಮೀಪದ ರಂಗಂಪೇಟೆಯ ಈಶ್ವರಿ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಶನಿವಾರ ರುಕ್ಮಾಪುರದ ಸಗರನಾಡು ಕಲಾ ವೇದಿಕೆ ಹಮ್ಮಿಕೊಂಡಿದ್ದ ಸ್ವರ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಸಂಗೀತ ಮನುಷ್ಯನಿಗೆ ಒಳ್ಳೆಯ ವಿಚಾರಗಳು ಮೂಡುವಂತೆ ಮಾಡುತ್ತದೆ. ಸಂಗೀತವನ್ನು, ಸಂಗೀತ ಪ್ರತಿಭೆಗಳನ್ನು ಪೋಷಿಸಿ ಬೆಳೆಸಬೇಕು’ ಎಂದರು.</p>.<p>ಪಿಎಸ್ಐ ಕೃಷ್ಣಾ ಸುಬೇದಾರ್ ಮಾತನಾಡಿ, ‘ಮನುಷ್ಯನಿಗೆ ಸಂಗೀತ, ಕಲೆ, ಸಾಹಿತ್ಯ, ನೃತ್ಯ ಅವಶ್ಯಕವಾಗಿ ಬೇಕು. ಸಂಗೀತ, ಸಾಹಿತ್ಯ, ಕಲೆಗಳು ಮಾನವರನ್ನು ಸಂಸ್ಕಾರವಂತರನ್ನಾಗಿ ಮಾಡಲಿವೆ. ಮನಸ್ಸಿನ ನೋವನ್ನು ದೂರ ಮಾಡುವ ಶಕ್ತಿ ಸಂಗೀತ ಕ್ಷೇತ್ರಕ್ಕೆ ಇದೆ’ ಎಂದು ತಿಳಿಸಿದರು.</p>.<p>ಆಕಾಶವಾಣಿ ಕಲಾವಿದ ಶಿವಶರಣಯ್ಯಸ್ವಾಮಿ ಬಳ್ಳುಂಡಗಿ ಮಠ ಅಧ್ಯಕ್ಷತೆ ವಹಿಸಿದ್ದರು. ದತ್ತುರಾವ್ ಕುಲಕರ್ಣಿ ಮುಖ್ಯ ಅತಿಥಿಗಳಾಗಿದ್ದರು.</p>.<p>ದೇವಸ್ಥಾನದ ಅರ್ಚಕ ನಿಂಗಯ್ಯಸ್ವಾಮಿ ಹಿರೇಮಠ, ನಿಂಗಣ್ಣ ರಾಯಚೂರಕರ್, ಪ್ರಾಣೇಶರಾವ್ ಕುಲಕರ್ಣಿ, ಚನ್ನಪ್ಪ ಗುಂಡಾನೂರ್, ಸೋಮಶೇಖರ ಶಾಬಾದಿ ಭಾಗವಹಿಸಿದ್ದರು.</p>.<p>ಸಂಗೀತ ಕಲಾವಿದರಾದ ನರಸಿಂಹ ಬಂಡಿ, ಉಮೇಶ್ ಯಾದವ, ಜ್ಞಾನೇಶ್ವರ ಪಾಣಿಭಾತೆ, ಸುರೇಶ್ ಅಂಬೂರೆ, ಮಹೇಶ್ ಗೋಗಿ, ಶಿವಶಂಕರ ಅಲ್ಲೂರು, ಮಾನಪ್ಪ ಭಜಂತ್ರಿ, ಜ್ಞಾನೇಶ್ವರ ಪಾಣಿಭಾತೆ, ಇಸಾಕ್ ಮೊಹ್ಮದ್, ಗೋಪಾಲ್ ಗುಳೇದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.</p>.<p>ರಮೇಶ್ ಕುಲಕರ್ಣಿ ನಿರೂಪಿಸಿದರು. ಸಗರನಾಡು ಕಲಾ ವೇದಿಕೆ ಅಧ್ಯಕ್ಷ ರಾಜಶೇಖರ ಗೆಜ್ಜಿ ರುಕ್ಮಾಪುರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ</strong>: ‘ಸಂಗೀತಕ್ಕೆ ಸಮ್ಮೋಹನಗೊಳಿಸುವ ಶಕ್ತಿ ಇದೆ. ಸಂಗೀತ ಸರ್ವರಿಗೂ ಸಂತೋಷ ನೀಡುತ್ತದೆ. ಸಂಗೀತ ಕಲೆಗೆ ಸಮಸ್ತ ಜೀವರಾಶಿಯನ್ನು ಮೋಡಿ ಮಾಡುವ ಶಕ್ತಿಯಿದೆ’ ಎಂದು ದೇವಾಂಗ ಸಮಾಜದ ಅಧ್ಯಕ್ಷ ಶರಣಪ್ಪ ಗುಮ್ಮಾ ಹೇಳಿದರು.</p>.<p>ಸಮೀಪದ ರಂಗಂಪೇಟೆಯ ಈಶ್ವರಿ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಶನಿವಾರ ರುಕ್ಮಾಪುರದ ಸಗರನಾಡು ಕಲಾ ವೇದಿಕೆ ಹಮ್ಮಿಕೊಂಡಿದ್ದ ಸ್ವರ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಸಂಗೀತ ಮನುಷ್ಯನಿಗೆ ಒಳ್ಳೆಯ ವಿಚಾರಗಳು ಮೂಡುವಂತೆ ಮಾಡುತ್ತದೆ. ಸಂಗೀತವನ್ನು, ಸಂಗೀತ ಪ್ರತಿಭೆಗಳನ್ನು ಪೋಷಿಸಿ ಬೆಳೆಸಬೇಕು’ ಎಂದರು.</p>.<p>ಪಿಎಸ್ಐ ಕೃಷ್ಣಾ ಸುಬೇದಾರ್ ಮಾತನಾಡಿ, ‘ಮನುಷ್ಯನಿಗೆ ಸಂಗೀತ, ಕಲೆ, ಸಾಹಿತ್ಯ, ನೃತ್ಯ ಅವಶ್ಯಕವಾಗಿ ಬೇಕು. ಸಂಗೀತ, ಸಾಹಿತ್ಯ, ಕಲೆಗಳು ಮಾನವರನ್ನು ಸಂಸ್ಕಾರವಂತರನ್ನಾಗಿ ಮಾಡಲಿವೆ. ಮನಸ್ಸಿನ ನೋವನ್ನು ದೂರ ಮಾಡುವ ಶಕ್ತಿ ಸಂಗೀತ ಕ್ಷೇತ್ರಕ್ಕೆ ಇದೆ’ ಎಂದು ತಿಳಿಸಿದರು.</p>.<p>ಆಕಾಶವಾಣಿ ಕಲಾವಿದ ಶಿವಶರಣಯ್ಯಸ್ವಾಮಿ ಬಳ್ಳುಂಡಗಿ ಮಠ ಅಧ್ಯಕ್ಷತೆ ವಹಿಸಿದ್ದರು. ದತ್ತುರಾವ್ ಕುಲಕರ್ಣಿ ಮುಖ್ಯ ಅತಿಥಿಗಳಾಗಿದ್ದರು.</p>.<p>ದೇವಸ್ಥಾನದ ಅರ್ಚಕ ನಿಂಗಯ್ಯಸ್ವಾಮಿ ಹಿರೇಮಠ, ನಿಂಗಣ್ಣ ರಾಯಚೂರಕರ್, ಪ್ರಾಣೇಶರಾವ್ ಕುಲಕರ್ಣಿ, ಚನ್ನಪ್ಪ ಗುಂಡಾನೂರ್, ಸೋಮಶೇಖರ ಶಾಬಾದಿ ಭಾಗವಹಿಸಿದ್ದರು.</p>.<p>ಸಂಗೀತ ಕಲಾವಿದರಾದ ನರಸಿಂಹ ಬಂಡಿ, ಉಮೇಶ್ ಯಾದವ, ಜ್ಞಾನೇಶ್ವರ ಪಾಣಿಭಾತೆ, ಸುರೇಶ್ ಅಂಬೂರೆ, ಮಹೇಶ್ ಗೋಗಿ, ಶಿವಶಂಕರ ಅಲ್ಲೂರು, ಮಾನಪ್ಪ ಭಜಂತ್ರಿ, ಜ್ಞಾನೇಶ್ವರ ಪಾಣಿಭಾತೆ, ಇಸಾಕ್ ಮೊಹ್ಮದ್, ಗೋಪಾಲ್ ಗುಳೇದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.</p>.<p>ರಮೇಶ್ ಕುಲಕರ್ಣಿ ನಿರೂಪಿಸಿದರು. ಸಗರನಾಡು ಕಲಾ ವೇದಿಕೆ ಅಧ್ಯಕ್ಷ ರಾಜಶೇಖರ ಗೆಜ್ಜಿ ರುಕ್ಮಾಪುರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>