‘ಗ್ರಾಮದಲ್ಲಿ ನನ್ನ ಕುಟುಂಬವಿದ್ದು, ಐವರು ಮಕ್ಕಳಿದ್ದಾರೆ. ಹಲವು ತಿಂಗಳ ಹಿಂದೆಯೇ ಗ್ರಾಮಸ್ಥರು ನಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಅಂಗಡಿಗೆ ತೆರಳಿದರೆ, ಕುಟುಂಬದ ಸದಸ್ಯರಿಗೆ ಯಾವ ವಸ್ತುಗಳನ್ನು ನೀಡದೇ ಅವಮಾನಿಸಲಾಗುತ್ತದೆ. ನನ್ನ ಜಮೀನುಗಳಿಗೆ ಯಾರೂ ಕೆಲಸಕ್ಕೆ ಬರುವುದಿಲ್ಲ. ದ್ವಿಚಕ್ರ ವಾಹನದಲ್ಲಿ ಹೊರಟರೆ, ಅವಾಚ್ಯ ಪದಗಳಿಂದ ನಿಂದಿಸುತ್ತಾರೆ. ದೈಹಿಕ ಮತ್ತು ಮಾನಸಿಕ ಕಿರುಕುಳದಿಂದ ತುಂಬಾ ನೋವು ಆಗಿದೆ’ ಎಂದು ಭೀಮಣ್ಣಗೌಡ ತಿಳಿಸಿದ್ದಾರೆ.