ಕೇಂದ್ರ, ರಾಜ್ಯ ಸರ್ಕಾರಗಳ ನಿರ್ಲಕ್ಷ್ಯದಿಂದ ಸಾವಿನ ಸಂಖ್ಯೆ ಹೆಚ್ಚಳವಾಗಿದೆ. ದೇಶದ ವಿವಿಧ ಕಡೆ ಮತ್ತು ರಾಜ್ಯದಲ್ಲಿ ಉಪಚುನಾವಣೆಗಳನ್ನು ನಡೆಸುವ ಮೂಲಕ ಕೊರೊನಾ ಹಬ್ಬಲು ಸರ್ಕಾರಗಳೇ ನೇರ ಕಾರಣವಾಗಿದೆ. ಕೊರೊನಾ ಬಗ್ಗೆ ಮುಂಚಿತವಾಗಿ ಅಗತ್ಯ ಸಿಬ್ಬಂದಿ, ಔಷಧಿಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವಂತೆ ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದರು. ಅದನ್ನು ಕಡೆಗಣಿಸಿದ್ದ ಪರಿಣಾಮ ಸಾವಿರಾರು ಜನರ ಮರಣ ಹೋಮಕ್ಕೆ ಕಾರಣವಾಗಿದೆ ಎಂದು ಆಪಾದಿಸಿದರು.