ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ಶಾಂತಿಯುತ ಮತದಾನ

Last Updated 30 ಮೇ 2018, 14:22 IST
ಅಕ್ಷರ ಗಾತ್ರ

ಸುರಪುರ: ಸುರಪುರ ಎಸ್‌ಟಿ ಮೀಸಲು ಮತಕ್ಷೇತ್ರದ ಮತದಾನ ಪ್ರಕ್ರಿಯೆ ಶನಿವಾರ ಸೂಸೂತ್ರವಾಗಿ ನಡೆಯಿತು. ಇದೇ ಮೊದಲ ಬಾರಿಗೆ ಪರಿಚಯಿಸಿರುವ ಪಿಂಕ್ ಮತ್ತು ಮಾದರಿ ಮತಗಟ್ಟೆಗಳಲ್ಲಿ ಮತದಾರರ ಉತ್ಸಾಹ ಇಮ್ಮಡಿಗೊಂಡಿತ್ತು.

ಬೆಳಿಗ್ಗೆ ಕೆಲ ಮತಗಟ್ಟೆಗಳಲ್ಲಿ ಮತಯಂತ್ರ ದೋಷ, ಜೋಡಣೆ ಸಮಸ್ಯೆ ಇತರ ಕಾರಣಗಳಿಗಾಗಿ ಮತದಾನ ವಿಳಂಬವಾಗಿ ಆರಂಭವಾಯಿತು. ನಗರಸಭೆ ಮತಗಟ್ಟೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಮತಯಂತ್ರದಲ್ಲಿ ದೋಷ ಕಂಡು ಬಂದಿದ್ದರಿಂದ ಅರ್ಧ ಗಂಟೆಯ ನಂತರ ಮತದಾನ ಆರಂಭವಾಯಿತು. ಸರ್ಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ಜೋಡಣೆ ಸಮಸ್ಯೆಯಿಂದ ಅರ್ಧ ಗಂಟೆ ಮತದಾನ ವಿಳಂಬವಾಯಿತು.

ಚಿಗರಿಹಾಳ ಗ್ರಾಮದಲ್ಲಿ ಮತ ಹಾಕಿಸುವ ಸಂಬಂಧ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಕಲ್ಲು ತೂರಾಟ ನಡೆಯಿತು. 5 ಜನ ಗಾಯಗೊಂಡರು. ಇದರಿಂದ ಮತದಾನ ಮಾಡಲು ಮತದಾರರು ಹಿಂಜರಿದರು. ಹೆಚ್ಚಿನ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆಯ ನಂತರ ಮತದಾನ ಆರಂಭವಾಯಿತು. ಏದಲಬಾವಿಯಲ್ಲಿ ಕುರುಬ ಮತ್ತು ನಾಯಕ ಸಮೂದಾಯದವರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಆಗಮಿಸಿದ ಶಾಸಕ ರಾಜಾ ವೆಂಕಟಪ್ಪನಾಯಕ ಪರಿಸ್ಥಿತಿ ತಿಳಿಗೊಳಿಸಿದರು.

ಮತದಾನ ವಂಚಿತ ಶಾಸಕ!

ಶಾಸಕ ರಾಜಾ ವೆಂಕಟಪ್ಪನಾಯಕ ಈ ಬಾರಿ ಚುನಾವಣೆಯಲ್ಲಿಯೂ ಮತದಾನ ಮಾಡಲು ಸಾಧ್ಯವಾಗಲಿಲ್ಲ.
ಮತದಾನ ಪ್ರಕ್ರಿಯೆ ಪರಿಶೀಲಿಸಲು ಶನಿವಾರ ಬೆಳಿಗ್ಗೆಯೇ ನಾರಾಯಣಪುರಕ್ಕೆ ತೆರಳಿದ್ದರು.

ಇಲ್ಲಿನ ನಗರದ ಗ್ರಂಥಾಲಯ ಮತಗಟ್ಟೆಯಲ್ಲಿ ಅವರ ಮತ ಬರುತ್ತದೆ. ಸಂಜೆ 6 ಗಂಟೆಯೊಳಗೆ ಅವರಿಗೆ ನಗರಕ್ಕೆ ವಾಪಾಸು ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ಬಾರಿಯೂ ತಮ್ಮ ಮತ ಚಲಾಯಿಸುವಲ್ಲಿ ಅವರು ವಂಚಿತರಾದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ಮತದಾನ ಪ್ರಕ್ರಿಯೆ ಪರಿಶೀಲಿಸಲು ತೆರಳಿದ್ದಾಗ ಸಮಯಕ್ಕೆ ಸರಿಯಾಗಿ ಮತಗಟ್ಟೆಗೆ ಬರಲಾಗದೇ ಮತದಾನದಿಂದ ವಂಚಿತರಾಗಿದ್ದರು.

ಸೂತಕದಲ್ಲೂ ಮತದಾನ: ಇಲ್ಲಿನ ರಂಗಂಪೇಟೆಯ ಶ್ರವಣಕುಮಾರ ಚಿಲ್ಲಾಳ ಅವರ ಪತ್ನಿ ವಸಂತಬಾಯಿ (50) ಶನಿವಾರ ನಿಧನರಾದರು. ಪತ್ನಿ ವಿಯೋಗದ ನೋವಿನಲ್ಲೂ ಶ್ರವಣಕುಮಾರ ಮತಗಟ್ಟೆ ಮತಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT