<p><strong>ಶಹಾಪುರ: ‘</strong>ವಿಶ್ವಾರಾಧ್ಯರ ಜೀವನದ ಆದರ್ಶಗಳನ್ನು ಅನುಸರಿಸಿದರೆ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದ ವೃದ್ಧಿಯಾಗುತ್ತದೆ. ಆದರ್ಶ ಜೀವನದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹಿರೇಮಠದ ಅಭಿನವ ಮಹಾಂತ ಶಿವಾಚಾರ್ಯರು ತಿಳಿಸಿದರು.</p>.<p>ತಾಲ್ಲೂಕಿನ ದೋರನಹಳ್ಳಿ ಪಟ್ಟಣದ ಮಹಾಂತೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಹಿರೇಮಠದಲ್ಲಿ ನಡೆದ ಪುರಾಣ ಮಹೋತ್ಸವದಲ್ಲಿ ಅವರು ಮಾತನಾಡಿದರು.</p>.<p>‘ವಿಶ್ವಾರಾಧ್ಯರು ಮಹಾತ್ಮರು, ಭಕ್ತಿ ಮತ್ತು ಸೇವೆಯ ಪ್ರತೀಕವಾಗಿ ಭಕ್ತರ ಹೃದಯದಲ್ಲಿ ನೆಲೆಸಿರುವ ಮಹಾನುಭಾವರು. ಭಕ್ತರ ನಂಬಿಕೆಯಂತೆ, ವಿಶ್ವಾರಾಧ್ಯರು ಕೇವಲ ಒಬ್ಬ ಸಂತನಲ್ಲ, ಜನರ ದುಃಖವನ್ನು ನಿವಾರಿಸಿ, ಸತ್ಪಥದಲ್ಲಿ ನಡೆಯಲು ಪ್ರೇರೇಪಿಸಿದ ದೈವ ಚೈತನ್ಯ. ಎಲ್ಲರಿಗೂ ಒಳಿತು ಮಾಡುವ ಮನೋಭಾವ ಅವರದ್ದಾಗಿತ್ತು’ ಎಂದರು.</p>.<p>ಮಠದ ಭಕ್ತರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಹಾಪುರ: ‘</strong>ವಿಶ್ವಾರಾಧ್ಯರ ಜೀವನದ ಆದರ್ಶಗಳನ್ನು ಅನುಸರಿಸಿದರೆ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದ ವೃದ್ಧಿಯಾಗುತ್ತದೆ. ಆದರ್ಶ ಜೀವನದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹಿರೇಮಠದ ಅಭಿನವ ಮಹಾಂತ ಶಿವಾಚಾರ್ಯರು ತಿಳಿಸಿದರು.</p>.<p>ತಾಲ್ಲೂಕಿನ ದೋರನಹಳ್ಳಿ ಪಟ್ಟಣದ ಮಹಾಂತೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಹಿರೇಮಠದಲ್ಲಿ ನಡೆದ ಪುರಾಣ ಮಹೋತ್ಸವದಲ್ಲಿ ಅವರು ಮಾತನಾಡಿದರು.</p>.<p>‘ವಿಶ್ವಾರಾಧ್ಯರು ಮಹಾತ್ಮರು, ಭಕ್ತಿ ಮತ್ತು ಸೇವೆಯ ಪ್ರತೀಕವಾಗಿ ಭಕ್ತರ ಹೃದಯದಲ್ಲಿ ನೆಲೆಸಿರುವ ಮಹಾನುಭಾವರು. ಭಕ್ತರ ನಂಬಿಕೆಯಂತೆ, ವಿಶ್ವಾರಾಧ್ಯರು ಕೇವಲ ಒಬ್ಬ ಸಂತನಲ್ಲ, ಜನರ ದುಃಖವನ್ನು ನಿವಾರಿಸಿ, ಸತ್ಪಥದಲ್ಲಿ ನಡೆಯಲು ಪ್ರೇರೇಪಿಸಿದ ದೈವ ಚೈತನ್ಯ. ಎಲ್ಲರಿಗೂ ಒಳಿತು ಮಾಡುವ ಮನೋಭಾವ ಅವರದ್ದಾಗಿತ್ತು’ ಎಂದರು.</p>.<p>ಮಠದ ಭಕ್ತರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>