<p><strong>ಯಾದಗಿರಿ:</strong> ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್ಡೌನ್ ಎರಡನೇ ದಿನವೂ ಸಂಪೂರ್ಣ ಸ್ತಬ್ಧವಾಗಿದೆ. ಬೆಳಿಗ್ಗೆಯಿಂದಲೇ ಪೊಲೀಸರು ರಸ್ತೆಗಿಳಿದ ಅನಾವಶ್ಯಕ ಸಂಚಾರ ಮಾಡುತ್ತಿದ್ದ ವಾಹನಗಳನ್ನು ತಡೆದು ದಾಖಲೆ ಮತ್ತು ತೆರಳುತ್ತಿರುವ ಕಾರಣ ಕೇಳಿ ಬಿಡುತ್ತಿದ್ದರು.</p>.<p>ನಗರದ ಪ್ರಮುಖ ವೃತ್ತಗಳಲ್ಲಿ ಪೊಲೀಸರು ನಿಂತು ಲಾಕ್ಡೌನ್ ಕರ್ತವ್ಯ ಮಾಡುತ್ತಿದ್ದರು. ಡಿವೈಎಸ್ಪಿ ಸೇರಿದಂತೆ ಸಂಚಾರಿ ಪೊಲೀಸರು ರಸ್ತೆಗಳಿದ ವಾಹನ ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದರು.</p>.<p class="Subhead"><strong>ಪೊಲೀಸರನ್ನು ನೋಡಿ ವಾಪಸ್:</strong> ನಗರದ ಶುಭಾಷ ವೃತ್ತ, ಶಾಸ್ತ್ರಿ ವೃತ್ತದಲ್ಲಿ ಪೊಲೀಸರು ಇರುವುದನ್ನು ನೋಡಿದ ಬೈಕ್ ಸವಾರರು ದೂರದಿಂದಲೇ ನೋಡಿ ಮರಳಿ ಬಂದ ದಾರಿಯಲ್ಲಿ ಹಿಂತಿರುಗುತ್ತಿದ್ದರು. ಅಲ್ಲಲ್ಲಿ ಪೊಲೀಸರು ವಾಹನ ಸವಾರರನ್ನು ನಿಲ್ಲಿಸಿ ಕಾರಣ ಕೇಳುತ್ತಿದ್ದರು.</p>.<p class="Subhead">ಎಳನೀರು ವ್ಯಾಪಾರ ನಿರಂತಕ: ಆಸ್ಪತ್ರೆ ಅಕ್ಕಪಕ್ಕ ಸೇರಿದಂತೆ ವಿವಿಧ ಕಡೆ ಎಳನೀರು ವ್ಯಾಪಾರ ನಿರಂತಕವಾಗಿ ನಡೆಯುತ್ತಿತ್ತು. ಆದರೂ ಗ್ರಾಹಕರಿಲ್ಲದೆ ಭಣಗುಡುತ್ತಿದ್ದವು.</p>.<p class="Subhead"><strong>ಬಿಕೋ ಎಂದ ರಸ್ತೆಗಳು</strong>: ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಕಾವಲಿನಿಂದ ವಾಹನ ಸವಾರರು ರಸ್ತೆಗಿಳಿಯದ ಪರಿಣಾಮ ಬಿಕೋ ಎನ್ನುತ್ತಿತ್ತು. ಅಲ್ಲೊಂದು ಇಲ್ಲೊಂದು ವಾಹನ ಸಂಚಾರ ಮಾಡುತ್ತಿತ್ತು. ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನದ 2 ಗಂಟೆ ವರೆಗೆ ಪೊಲೀಸರು ರಸ್ತೆಯಲ್ಲಿ ನಿಂತುಕೊಂಡಿದ್ದರು. ಆ ನಂತರ ನೆರಳಿನಲ್ಲಿ ಆಶ್ರಯ ಪಡೆದು ಸಂಚಾರ ನಿಯಂತ್ರಣ ಮಾಡುತ್ತಿದ್ದರು. ಬೆಳಿಗ್ಗೆ ರಸ್ತೆಗಳು ಖಾಲಿ ಇದ್ದಿದ್ದರಿಂದ ಎಮ್ಮೆಗಳು ರಸ್ತೆಯನ್ನು ಪೂರ್ತಿ ಆವರಿಸಿಕೊಂಡು ಮೇವು ತಿನ್ನಲು ತೆರಳುತ್ತಿದ್ದವು.</p>.<p class="Subhead"><strong>ಏಕಮುಖ ಸಂಚಾರಕ್ಕಾಗಿ ಬ್ಯಾರಿಕೇಡ್: </strong>ವಾಹನ ಸವಾರರನ್ನು ನಿಯಂತ್ರಿಸಲು ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ ಹಾಕಿ ಏಕಮುಖ ಸಂಚಾರ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದರಿಂದ ವಾಹನ ಸವಾರರು ಪೊಲೀಸರು ತಪ್ಪಿಸಿಕೊಳ್ಳಲು ಆಗದಂತೆ ಆಗಿದೆ.</p>.<p class="Subhead"><strong>ದಾಖಲೆ ಇಲ್ಲದವರ ಪರದಾಟ:</strong> ವೃತ್ತಗಳಲ್ಲಿ ಪೊಲೀಸರು ಅಡ್ಡಹಾಕಿ ವಾಹನ ಸವಾರರನ್ನು ಹಿಡಿದಾಗ ಸೂಕ್ತ ದಾಖಲೆ ಇಲ್ಲದಿದ್ದರಿಂದ ಪರದಾಟ ಸಾಮಾನ್ಯವಾಗಿತ್ತು.</p>.<p>ಅಲ್ಲದೆ ತಮಗೆ ಪರಿಚಯ ಇದ್ದವರಿಗೆ ಫೋನ್ ಮಾಡಿ ಮಾತನಾಡುತ್ತಿರುವುದು ಕಂಡು ಬಂತು.</p>.<p class="Subhead"><strong>ಕಾರು ಚಾಲಕ ವಿರುದ್ಧ ಪ್ರಕರಣ:</strong> ಪದವಿ ಕಾಲೇಜು ಬಳಿ ಪೊಲೀಸರು ಕಾರು ಚಾಲಕನನ್ನು ತಡೆದು ನಿಲ್ಲಿಸಲು ಪ್ರಯತ್ನಿಸಿದರೂ ನಿಲ್ಲಿಸದೇ ಬ್ಯಾರಿಕೇಡ್ ತಳ್ಳಿ ಪರಾರಿಯಾಗಿದ್ದು, ಬೆನ್ನಟ್ಟಿದ ಪೊಲೀಸರು ಕಾರು ನಿಲ್ಲಿಸಿ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಆತನ ವಿರುದ್ಧ ಕೋವಿಡ್ ನಿಯಮ ಉಲ್ಲಂಘನೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<p class="Subhead"><strong>118 ವಾಹನ ಜಪ್ತಿ: </strong>ಸಂಪೂರ್ಣ ಲಾಕ್ಡೌನ್ ವೇಳೆ ಅನಾವಶ್ಯಕವಾಗಿ ತಿರುಗಾಡುತ್ತಿದ್ದ ವಾಹನ ಸವಾರರ ವಿರುದ್ಧ ಪೊಲೀಸರು ಕ್ರಮ ಜರುಗಿಸಿದ್ದಾರೆ. 113 ದ್ವಿಚಕ್ರ, 2 ಮೂರು ಚಕ್ರ, 3 ನಾಲ್ಕು ಚಕ್ರದ ವಾಹನಗಳನ್ನು ಜಪ್ತಿ ಪಡಿಸಲಾಗಿದೆ. ಮಾಸ್ಕ್ ಹಾಕದೆ ಇರುವವರ ವಿರುದ್ಧ 199 ಪ್ರಕರಣಗಳನ್ನು ಹಾಗೂ ₹19,900 ದಂಡ ವಿಧಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್ಡೌನ್ ಎರಡನೇ ದಿನವೂ ಸಂಪೂರ್ಣ ಸ್ತಬ್ಧವಾಗಿದೆ. ಬೆಳಿಗ್ಗೆಯಿಂದಲೇ ಪೊಲೀಸರು ರಸ್ತೆಗಿಳಿದ ಅನಾವಶ್ಯಕ ಸಂಚಾರ ಮಾಡುತ್ತಿದ್ದ ವಾಹನಗಳನ್ನು ತಡೆದು ದಾಖಲೆ ಮತ್ತು ತೆರಳುತ್ತಿರುವ ಕಾರಣ ಕೇಳಿ ಬಿಡುತ್ತಿದ್ದರು.</p>.<p>ನಗರದ ಪ್ರಮುಖ ವೃತ್ತಗಳಲ್ಲಿ ಪೊಲೀಸರು ನಿಂತು ಲಾಕ್ಡೌನ್ ಕರ್ತವ್ಯ ಮಾಡುತ್ತಿದ್ದರು. ಡಿವೈಎಸ್ಪಿ ಸೇರಿದಂತೆ ಸಂಚಾರಿ ಪೊಲೀಸರು ರಸ್ತೆಗಳಿದ ವಾಹನ ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದರು.</p>.<p class="Subhead"><strong>ಪೊಲೀಸರನ್ನು ನೋಡಿ ವಾಪಸ್:</strong> ನಗರದ ಶುಭಾಷ ವೃತ್ತ, ಶಾಸ್ತ್ರಿ ವೃತ್ತದಲ್ಲಿ ಪೊಲೀಸರು ಇರುವುದನ್ನು ನೋಡಿದ ಬೈಕ್ ಸವಾರರು ದೂರದಿಂದಲೇ ನೋಡಿ ಮರಳಿ ಬಂದ ದಾರಿಯಲ್ಲಿ ಹಿಂತಿರುಗುತ್ತಿದ್ದರು. ಅಲ್ಲಲ್ಲಿ ಪೊಲೀಸರು ವಾಹನ ಸವಾರರನ್ನು ನಿಲ್ಲಿಸಿ ಕಾರಣ ಕೇಳುತ್ತಿದ್ದರು.</p>.<p class="Subhead">ಎಳನೀರು ವ್ಯಾಪಾರ ನಿರಂತಕ: ಆಸ್ಪತ್ರೆ ಅಕ್ಕಪಕ್ಕ ಸೇರಿದಂತೆ ವಿವಿಧ ಕಡೆ ಎಳನೀರು ವ್ಯಾಪಾರ ನಿರಂತಕವಾಗಿ ನಡೆಯುತ್ತಿತ್ತು. ಆದರೂ ಗ್ರಾಹಕರಿಲ್ಲದೆ ಭಣಗುಡುತ್ತಿದ್ದವು.</p>.<p class="Subhead"><strong>ಬಿಕೋ ಎಂದ ರಸ್ತೆಗಳು</strong>: ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಕಾವಲಿನಿಂದ ವಾಹನ ಸವಾರರು ರಸ್ತೆಗಿಳಿಯದ ಪರಿಣಾಮ ಬಿಕೋ ಎನ್ನುತ್ತಿತ್ತು. ಅಲ್ಲೊಂದು ಇಲ್ಲೊಂದು ವಾಹನ ಸಂಚಾರ ಮಾಡುತ್ತಿತ್ತು. ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನದ 2 ಗಂಟೆ ವರೆಗೆ ಪೊಲೀಸರು ರಸ್ತೆಯಲ್ಲಿ ನಿಂತುಕೊಂಡಿದ್ದರು. ಆ ನಂತರ ನೆರಳಿನಲ್ಲಿ ಆಶ್ರಯ ಪಡೆದು ಸಂಚಾರ ನಿಯಂತ್ರಣ ಮಾಡುತ್ತಿದ್ದರು. ಬೆಳಿಗ್ಗೆ ರಸ್ತೆಗಳು ಖಾಲಿ ಇದ್ದಿದ್ದರಿಂದ ಎಮ್ಮೆಗಳು ರಸ್ತೆಯನ್ನು ಪೂರ್ತಿ ಆವರಿಸಿಕೊಂಡು ಮೇವು ತಿನ್ನಲು ತೆರಳುತ್ತಿದ್ದವು.</p>.<p class="Subhead"><strong>ಏಕಮುಖ ಸಂಚಾರಕ್ಕಾಗಿ ಬ್ಯಾರಿಕೇಡ್: </strong>ವಾಹನ ಸವಾರರನ್ನು ನಿಯಂತ್ರಿಸಲು ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ ಹಾಕಿ ಏಕಮುಖ ಸಂಚಾರ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದರಿಂದ ವಾಹನ ಸವಾರರು ಪೊಲೀಸರು ತಪ್ಪಿಸಿಕೊಳ್ಳಲು ಆಗದಂತೆ ಆಗಿದೆ.</p>.<p class="Subhead"><strong>ದಾಖಲೆ ಇಲ್ಲದವರ ಪರದಾಟ:</strong> ವೃತ್ತಗಳಲ್ಲಿ ಪೊಲೀಸರು ಅಡ್ಡಹಾಕಿ ವಾಹನ ಸವಾರರನ್ನು ಹಿಡಿದಾಗ ಸೂಕ್ತ ದಾಖಲೆ ಇಲ್ಲದಿದ್ದರಿಂದ ಪರದಾಟ ಸಾಮಾನ್ಯವಾಗಿತ್ತು.</p>.<p>ಅಲ್ಲದೆ ತಮಗೆ ಪರಿಚಯ ಇದ್ದವರಿಗೆ ಫೋನ್ ಮಾಡಿ ಮಾತನಾಡುತ್ತಿರುವುದು ಕಂಡು ಬಂತು.</p>.<p class="Subhead"><strong>ಕಾರು ಚಾಲಕ ವಿರುದ್ಧ ಪ್ರಕರಣ:</strong> ಪದವಿ ಕಾಲೇಜು ಬಳಿ ಪೊಲೀಸರು ಕಾರು ಚಾಲಕನನ್ನು ತಡೆದು ನಿಲ್ಲಿಸಲು ಪ್ರಯತ್ನಿಸಿದರೂ ನಿಲ್ಲಿಸದೇ ಬ್ಯಾರಿಕೇಡ್ ತಳ್ಳಿ ಪರಾರಿಯಾಗಿದ್ದು, ಬೆನ್ನಟ್ಟಿದ ಪೊಲೀಸರು ಕಾರು ನಿಲ್ಲಿಸಿ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಆತನ ವಿರುದ್ಧ ಕೋವಿಡ್ ನಿಯಮ ಉಲ್ಲಂಘನೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<p class="Subhead"><strong>118 ವಾಹನ ಜಪ್ತಿ: </strong>ಸಂಪೂರ್ಣ ಲಾಕ್ಡೌನ್ ವೇಳೆ ಅನಾವಶ್ಯಕವಾಗಿ ತಿರುಗಾಡುತ್ತಿದ್ದ ವಾಹನ ಸವಾರರ ವಿರುದ್ಧ ಪೊಲೀಸರು ಕ್ರಮ ಜರುಗಿಸಿದ್ದಾರೆ. 113 ದ್ವಿಚಕ್ರ, 2 ಮೂರು ಚಕ್ರ, 3 ನಾಲ್ಕು ಚಕ್ರದ ವಾಹನಗಳನ್ನು ಜಪ್ತಿ ಪಡಿಸಲಾಗಿದೆ. ಮಾಸ್ಕ್ ಹಾಕದೆ ಇರುವವರ ವಿರುದ್ಧ 199 ಪ್ರಕರಣಗಳನ್ನು ಹಾಗೂ ₹19,900 ದಂಡ ವಿಧಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>