13 ವರ್ಷಗಳ ನಂತರ ಜಿಲ್ಲೆಗೆ ಹೊಸ ನ್ಯಾಯಾಲಯ ನಿರ್ಮಾಣವಾಗಿದೆ. ಆದರೆ ಫೆ.17ರಂದು ಹಮ್ಮಿಕೊಂಡಿದ್ದ ಉದ್ಘಾಟನಾ ಕಾರ್ಯಕ್ರಮ ಮುಂದೂಡಿಕೆಯಾಗಿದೆ. ಇದರಿಂದ ವಕೀಲರಿಗೆ ನಿರಾಸೆಯಾಗಿದೆ. ಶೀಘ್ರ ಉದ್ಘಾಟನೆ ದಿನಾಂಕ ನಿಗದಿ ಮಾಡಬೇಕು
. ಸಿ.ಎಸ್.ಮಾಲಿಪಾಟೀಲ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ
9 ಕೋರ್ಟ್ ಹಾಲ್ ಸಿದ್ದ
ಮಿನಿವಿಧಾನಸೌಧ ಹಿಂಭಾಗದಲ್ಲಿ ನೂತನವಾಗಿ ನಿರ್ಮಿಸಿರುವ ನ್ಯಾಯಾಲಯ ಸಂಕೀರ್ಣದಲ್ಲಿ 9 ಕೋರ್ಟ್ಗಳಿವೆ. ಎಲ್ಲ ವಿಭಾಗಕ್ಕೂ ಪ್ರತ್ಯೇಕ ಇರುವುದರಿಂದ ವಕೀಲರಿಗೆ ಕಕ್ಷಿದಾರರಿಗೆ ಅನುಕೂಲವಾಗಿತ್ತು. ಇನ್ನೇನು ಫೆಬ್ರುವರಿ 17ರಂದು ಉದ್ಘಾಟನೆಯಾಗಬೇಕು ಎನ್ನುವಾಗ ಕಾರ್ಯಕ್ರಮ ರದ್ದುಗೊಂಡಿದೆ. ಇದರಿಂದ ನಿರಾಸೆಯಾಗಿದೆ ಎಂದು ವಕೀಲರು ಹೇಳುವ ಮಾತಾಗಿದೆ. ‘ಯಾರದೋ ಮಾತು ಕೇಳಿ ನೂತನ ನ್ಯಾಯಾಲಯ ಉದ್ಘಾಟನೆ ರದ್ದು ಮಾಡಲಾಗಿದೆ. ಹಳೆ ಕೋರ್ಟ್ ಸಣ್ಣದಿದ್ದೂ ಹೊಸದಾಗಿ ನಿರ್ಮಿಸಿರುವ ನ್ಯಾಯಾಲಯ ವಿಶಾಲವಾಗಿದೆ. ಜಿಲ್ಲೆಯ ಜನರಿಗೆ ಅನುಕೂಲವಾಗುತ್ತಿತ್ತು. ಈಗ ಉದ್ಘಾಟನೆ ಮುಂದೂಡಿದ್ದರಿಂದ ಮತ್ತೆ ಯಾವಾಗ ಉದ್ಘಾಟನೆಗೊಳ್ಳಲಿದೆ ಎನ್ನುವುದು ತಿಳಿಯದಾಗಿದೆ’ ಎಂದು ವಕೀಲರೊಬ್ಬರು ಬೇಸರ ವ್ಯಕ್ತಪಡಿಸಿದರು.
ಹಳೆ ಕೋರ್ಟ್ನಲ್ಲಿ ಶೌಚಾಲಯಕ್ಕೆ ಪರದಾಟ ‘ಪ್ರಸ್ತುತ ನಗರದಲ್ಲಿರುವ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ. ವಿಶೇಷವಾಗಿ ಮಹಿಳಾ ಕಕ್ಷಿದಾರರು ಮಹಿಳಾ ವಕೀಲರು ಶೌಚಾಲಕ್ಕಾಗಿ ಪರದಾಡುವ ಸ್ಥಿತಿ ಇದೆ. ಹೊಸ ಕೋರ್ಟ್ನಲ್ಲಿ ಎಲ್ಲ ಸೌಲಭ್ಯಗಳಿದ್ದು ಅಲ್ಲಿಗೆ ಸ್ಥಳಾಂತರ ಆಗುವವರೆಗೆ ಪರದಾಟ ಮುಂದುವರೆಯಲಿದೆ’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ ಹೇಳುತ್ತಾರೆ.