ಬಸಯ್ಯಸ್ವಾಮಿ ಮತ್ತು ಶಿಕ್ಷಕರು ಸೇರಿ ಉತ್ತಮವಾದ ರಾತ್ರಿ ಅಧ್ಯಯನ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಿಸುತ್ತಿದ್ದು ಇಲಾಖೆಯ ಸಂಪೂರ್ಣ ಸಹಕಾರ ಇದೆ. ಕಕ್ಕೇರಾ ಪ್ರೌಢಶಾಲೆ ಜಿಲ್ಲೆಗೆ ಮಾದರಿ.
– ಸಿ.ಎಸ್ ಮುದೋಳ, ಯಾದಗಿರಿ ಡಿಡಿಪಿಐ ಶಿಕ್ಷಕ
ಬಸಯ್ಯಸ್ವಾಮಿ ಅವರು ಬಂದ ಮೇಲೆ ನಮ್ಮ ಶಾಲೆ ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿದೆ. ರಾತ್ರಿ ಅಧ್ಯಯನ ಕೇಂದ್ರವನ್ನು ನಮ್ಮೂರಲ್ಲಿ ಅಲ್ಲದೇ ಪ್ರತಿ ಶಾಲೆಯಲ್ಲೂ ಆರಂಭಿಸಬೇಕು. ನಮ್ಮ ಶಿಕ್ಷಕರ ಶ್ರಮ ಮಾತಿನಲ್ಲಿ ವರ್ಣಿಸಲು ಸಾಲದು.
– ಹಣಮಂತ್ರಾಯ ಜಾಹಗೀರದಾರ, ಸ್ಥಳೀಯ ಮುಖಂಡ
‘ನಮ್ಮೂರ ಶಾಲೆ–ಬಾಗಿಲು ಮುಚ್ಚದ ಶಾಲೆ’ ಎಂಬ ವಿನೂತನ ಪದ್ಧತಿಯೊಂದಿಗೆ ಸತತ 3 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ಶಿಕ್ಷಕರ ಪರಿಶ್ರಮದಿಂದ ಉತ್ತಮ ಫಲಿತಾಂಶ ಬರುತ್ತದೆ .
– ಗುಂಡಪ್ಪ, ಸೋಲಾಪುರ ಸ್ಥಳೀಯ ಮುಖಂಡ
ಶಿಕ್ಷಕರ ಸಹಾಯದಿಂದ ರಾತ್ರಿ ಅಧ್ಯಯನ ಕೇಂದ್ರ ಮಡಲಾಗಿದ್ದು ಎಸ್ಡಿಎಂಸಿ ಗಣ್ಯರು ಪಾಲಕರ ಸಹಕಾರದಿಂದ ಸಾಧ್ಯವಾಗಿದೆ. ಉತ್ತಮ ಫಲಿತಾಂಶ ನಿರೀಕ್ಷೆಯಲ್ಲಿದ್ದೇವೆ.