ಪ್ರಾಣ ಹೋದ ನಂತರ ಮನುಷ್ಯನನ್ನುಯಾರು ಕೇಳುವುದಿಲ್ಲ. ಆದರೆ ಜೀವನದಲ್ಲಿ ಬದುಕಿದ ರೀತಿ ಹಾಗೂ ನಂಬಿದ ಸಿದ್ದಾಂತ ಜೊತೆಯಲ್ಲಿ ಸಮಾಜಮುಖಿಯಾಗಿ ನಿರ್ವಹಿಸಿದ ಕೆಲಸವನ್ನು ಸಮಾಜವು ಎಂದು ಮರೆಯಲು ಸಾಧ್ಯವಿಲ್ಲವೆಂದು ಅವರು ಅಭಿಪ್ರಾಯಪಟ್ಟರು. ನ್ಯಾಯಾಧೀಶರಾದ ಎಂ.ಸಿ.ಬಿರೆದಾರ, ವಿಶ್ವಾರಾಧ್ಯ ಸತ್ಯಂಪೇಟೆ, ಶಿವಣ್ಣ ಇಜೇರಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಸ್ವಾಗತ ಡಾ.ಬಸವರಾಜ ಇಜೇರಿ, ನಿರ್ವಹಣೆ ಖಾಸಿಂಅಲಿ, ಸಿದ್ದುರಾಜ ವಂದಿಸಿದರು.