ಗುರುಮಠಕಲ್: ಹೋಬಳಿ ಗ್ರಾಮಗಳಲ್ಲಿ ಗುರುವಾರ ರಾತ್ರಿ ಸುಮಾರು 2 ಗಂಟೆಗಳ ಕಾಲ ನಿರಂತರವಾಗಿ ಮಳೆ ಸುರಿದಿದೆ. ಹಿಂಗಾರು ಬಿತ್ತನೆಗೆ ಹದ ಗೊಳಿಸಲಾಗಿದ್ದ ಜಮೀನಿನಲ್ಲಿ ನೀರು ನಿಂತಿದ್ದು, ಇನ್ನೂ 20 ದಿನಗಳವರೆಗೆ ಹಿಂಗಾರು ಬಿತ್ತನೆಗೆ ಮಾಡಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಕೃಷಿಕರಾದ ರಾಮಣ್ಣ ಹಾಗೂ ಯಲ್ಲಪ್ಪ.