<p><strong>ಯಾದಗಿರಿ: </strong>ಯಾದಗಿರಿ ಕೋಟೆ ಅಭಿವೃದ್ಧಿಗೆ ಬಿಡುಗಡೆಯಾಗಿರುವ ಅನುದಾನ ಸದ್ಬಳಕೆಯಾಗುತ್ತಿಲ್ಲ. ಕೋಟೆ ಪ್ರದೇಶದ ಕೆಲವಡೆ ಒತ್ತುವರಿ ಮಾಡಿಕೊಂಡು ಮನೆಕಟ್ಟಲಾಗಿದೆ.<br /> <br /> ಹೈದರಾಬಾದ್ ಕರ್ನಾಟಕ ಪ್ರದೇಶದ ಪ್ರವಾಸೋದ್ಯಮ ಸ್ಥಳಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ಕಾರ ₹50 ಕೋಟಿ ಹಣ ಮೀಸಲಿಟ್ಟಿದೆ. ಆದರಲ್ಲಿ ₹25 ಕೋಟಿ ಈಗಾಗಲೇ ಬಿಡುಗಡೆಯಾಗಿದ್ದು, ಅಲ್ಲಲ್ಲಿ ಕಾಮಗಾರಿ ನಡೆಯುತ್ತಿವೆ.<br /> <br /> ಆದರೆ ನಗರದ ಕೋಟೆ ಪ್ರದೇಶದ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದ್ದು, ಅಭಿವೃದ್ಧಿಗಾಗಿ ಬಿಡುಗಡೆಯಾದ ₹2 ಕೋಟಿಯಲ್ಲಿ, ₹1 ಕೋಟಿ ಖರ್ಚಾಗಿದ್ದರೂ ಸದ್ಭಳಕೆಯಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.<br /> <br /> <strong>ಕೋಟೆಯ ಐತಿಹ್ಯ:</strong> ನಗರದ ಕೋಟೆಯಲ್ಲಿ ಕಲ್ಯಾಣಿ ಚಾಲುಕ್ಯರು, ಯಾದವರು, ಚೋಳರು, ಬಹಮನಿ ಸುಲ್ತಾನರು, ಆದಿಲ್ಶಾಹಿ ಹಾಗೂ ನಿಜಾಮರು ರಾಜ್ಯಭಾರ ನಡೆಸಿದ್ದಾರೆ.<br /> <br /> ಯಾದಗಿರಿ ಕೋಟೆಯಲ್ಲಿ ಐದು ಶಾಸನಗಳು ಪತ್ತೆಯಾಗಿವೆ. ಕೋಟೆಯ ದ್ವಾರದ ಮೇಲಿರುವ ಒಂದು ಸಾಲಿನ ಶಾಸನವನ್ನು ಕೋಟೆ ಸಗರದ ಜಗನ್ನಾಥ ನಿರ್ಮಾಣ ಮಾಡಿದ್ದಾರೆಂದು ಬರೆದಿದೆ. ಉಳಿದ ಶಾಸನಗಳನ್ನು ಒಂದನೇ ಇಬ್ರಾಹಿಂ ಆದಿಲ್ ಷಾ ಸೇರಿದಂತೆ ವಿವಿಧ ರಾಜ ಮಹಾರಾಜರು ಬರೆಸಿದ್ದಾರೆ.<br /> <br /> ಯಾದಗಿರಿ ಕೋಟೆಯಲ್ಲಿ ಹಿಂದೂ, ಜೈನ, ಮುಸ್ಲಿಂ ಹಾಗೂ ಶೈವ ಧರ್ಮದ ಕುರುಹುಗಳಿವೆ. ಇದರ ಜೊತೆ ಭುವನೇಶ್ವರಿ ದೇವಿ, ರಾಮಲಿಂಗೇಶ್ವರ ಎಂಬ ಶೈವ ದೇವಸ್ಥಾನ, ಈಶ್ವರ, ಕಾಳಿಕಾ ಹಾಗೂ ಆಂಜನೇಯರ ದೇವಸ್ಥಾನಗಳು, ಮಸೀದಿ, ಅಕ್ಕ- ತಂಗಿಯರ ಬಾವಿ, ಸಿಡಿಲು ಬಾವಿ, ತೋಪುಗಳು, ಕೋಟೆ ಗೋಡೆಗಳು, ಮಳೆ ನೀರಿನಿಂದ ತುಂಬಿದ ಡೋಣೆಗಳು ಕೂಡಿದ ಸುಂದರ ತಾಣ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.<br /> <br /> ಆದರೆ ಇವೆಲ್ಲವು ನಿರ್ವಹಣೆ ಇಲ್ಲದೆ ಹಾಳಾ ಗುತ್ತಿದೆ. ಕೋಟೆಗೆ ಹೋಗುವ ಮೆಟ್ಟಲುಗಳ ಆಸುಪಾಸಿನಲ್ಲಿ ಮತ್ತು ಸ್ವಲ್ಪ ಮೇಲ್ಭಾಗದ ಸ್ಥಳವು ಸ್ಥಳೀಯ ಜನರ ಶೌಚಾಲಯದ ತಾಣವಾಗಿದೆ.<br /> <br /> ಅನೈತಿಕ ಚಟುವಟಿಕೆಗೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಕೋಟೆ ಪ್ರದೇಶದ ಕೆಲವು ಕಡೆ ಇಸ್ಪೀಟ್ ಆಡುತ್ತಿದ್ದಾರೆ ಎನ್ನುತ್ತಾರೆ ಕನ್ನಡ ಉಪನ್ಯಾಸಕ ಡಾ.ಭೀಮರಾಯ ಲಿಂಗೇರಿ.<br /> ಐತಿಹಾಸಿಕ ಪರಂಪರೆ ಮತ್ತು ತಾಣಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಅನುದಾನ ಖರ್ಚಾದರೂ, ಇಲ್ಲಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಭಿವೃದ್ಧಿಯಾಗಿಲ್ಲ.<br /> <br /> ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಹಣದಲ್ಲಿ ಮೆಟ್ಟಿಲುಗಳ ದುರಸ್ತಿ, ನೀರಿನ ಟ್ಯಾಂಕ ಮತ್ತು ಕೆಲವೆಡೆ ಗ್ರಿಲ್ ನಿರ್ಮಿಸಲಾಗಿದೆ. ಕಾಮಗಾರಿ ಮುಗಿಯುವುದರೊಳಗೆ ಕೆಲವು ಹಾಳಾಗಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ: </strong>ಯಾದಗಿರಿ ಕೋಟೆ ಅಭಿವೃದ್ಧಿಗೆ ಬಿಡುಗಡೆಯಾಗಿರುವ ಅನುದಾನ ಸದ್ಬಳಕೆಯಾಗುತ್ತಿಲ್ಲ. ಕೋಟೆ ಪ್ರದೇಶದ ಕೆಲವಡೆ ಒತ್ತುವರಿ ಮಾಡಿಕೊಂಡು ಮನೆಕಟ್ಟಲಾಗಿದೆ.<br /> <br /> ಹೈದರಾಬಾದ್ ಕರ್ನಾಟಕ ಪ್ರದೇಶದ ಪ್ರವಾಸೋದ್ಯಮ ಸ್ಥಳಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ಕಾರ ₹50 ಕೋಟಿ ಹಣ ಮೀಸಲಿಟ್ಟಿದೆ. ಆದರಲ್ಲಿ ₹25 ಕೋಟಿ ಈಗಾಗಲೇ ಬಿಡುಗಡೆಯಾಗಿದ್ದು, ಅಲ್ಲಲ್ಲಿ ಕಾಮಗಾರಿ ನಡೆಯುತ್ತಿವೆ.<br /> <br /> ಆದರೆ ನಗರದ ಕೋಟೆ ಪ್ರದೇಶದ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದ್ದು, ಅಭಿವೃದ್ಧಿಗಾಗಿ ಬಿಡುಗಡೆಯಾದ ₹2 ಕೋಟಿಯಲ್ಲಿ, ₹1 ಕೋಟಿ ಖರ್ಚಾಗಿದ್ದರೂ ಸದ್ಭಳಕೆಯಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.<br /> <br /> <strong>ಕೋಟೆಯ ಐತಿಹ್ಯ:</strong> ನಗರದ ಕೋಟೆಯಲ್ಲಿ ಕಲ್ಯಾಣಿ ಚಾಲುಕ್ಯರು, ಯಾದವರು, ಚೋಳರು, ಬಹಮನಿ ಸುಲ್ತಾನರು, ಆದಿಲ್ಶಾಹಿ ಹಾಗೂ ನಿಜಾಮರು ರಾಜ್ಯಭಾರ ನಡೆಸಿದ್ದಾರೆ.<br /> <br /> ಯಾದಗಿರಿ ಕೋಟೆಯಲ್ಲಿ ಐದು ಶಾಸನಗಳು ಪತ್ತೆಯಾಗಿವೆ. ಕೋಟೆಯ ದ್ವಾರದ ಮೇಲಿರುವ ಒಂದು ಸಾಲಿನ ಶಾಸನವನ್ನು ಕೋಟೆ ಸಗರದ ಜಗನ್ನಾಥ ನಿರ್ಮಾಣ ಮಾಡಿದ್ದಾರೆಂದು ಬರೆದಿದೆ. ಉಳಿದ ಶಾಸನಗಳನ್ನು ಒಂದನೇ ಇಬ್ರಾಹಿಂ ಆದಿಲ್ ಷಾ ಸೇರಿದಂತೆ ವಿವಿಧ ರಾಜ ಮಹಾರಾಜರು ಬರೆಸಿದ್ದಾರೆ.<br /> <br /> ಯಾದಗಿರಿ ಕೋಟೆಯಲ್ಲಿ ಹಿಂದೂ, ಜೈನ, ಮುಸ್ಲಿಂ ಹಾಗೂ ಶೈವ ಧರ್ಮದ ಕುರುಹುಗಳಿವೆ. ಇದರ ಜೊತೆ ಭುವನೇಶ್ವರಿ ದೇವಿ, ರಾಮಲಿಂಗೇಶ್ವರ ಎಂಬ ಶೈವ ದೇವಸ್ಥಾನ, ಈಶ್ವರ, ಕಾಳಿಕಾ ಹಾಗೂ ಆಂಜನೇಯರ ದೇವಸ್ಥಾನಗಳು, ಮಸೀದಿ, ಅಕ್ಕ- ತಂಗಿಯರ ಬಾವಿ, ಸಿಡಿಲು ಬಾವಿ, ತೋಪುಗಳು, ಕೋಟೆ ಗೋಡೆಗಳು, ಮಳೆ ನೀರಿನಿಂದ ತುಂಬಿದ ಡೋಣೆಗಳು ಕೂಡಿದ ಸುಂದರ ತಾಣ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.<br /> <br /> ಆದರೆ ಇವೆಲ್ಲವು ನಿರ್ವಹಣೆ ಇಲ್ಲದೆ ಹಾಳಾ ಗುತ್ತಿದೆ. ಕೋಟೆಗೆ ಹೋಗುವ ಮೆಟ್ಟಲುಗಳ ಆಸುಪಾಸಿನಲ್ಲಿ ಮತ್ತು ಸ್ವಲ್ಪ ಮೇಲ್ಭಾಗದ ಸ್ಥಳವು ಸ್ಥಳೀಯ ಜನರ ಶೌಚಾಲಯದ ತಾಣವಾಗಿದೆ.<br /> <br /> ಅನೈತಿಕ ಚಟುವಟಿಕೆಗೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಕೋಟೆ ಪ್ರದೇಶದ ಕೆಲವು ಕಡೆ ಇಸ್ಪೀಟ್ ಆಡುತ್ತಿದ್ದಾರೆ ಎನ್ನುತ್ತಾರೆ ಕನ್ನಡ ಉಪನ್ಯಾಸಕ ಡಾ.ಭೀಮರಾಯ ಲಿಂಗೇರಿ.<br /> ಐತಿಹಾಸಿಕ ಪರಂಪರೆ ಮತ್ತು ತಾಣಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಅನುದಾನ ಖರ್ಚಾದರೂ, ಇಲ್ಲಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಭಿವೃದ್ಧಿಯಾಗಿಲ್ಲ.<br /> <br /> ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಹಣದಲ್ಲಿ ಮೆಟ್ಟಿಲುಗಳ ದುರಸ್ತಿ, ನೀರಿನ ಟ್ಯಾಂಕ ಮತ್ತು ಕೆಲವೆಡೆ ಗ್ರಿಲ್ ನಿರ್ಮಿಸಲಾಗಿದೆ. ಕಾಮಗಾರಿ ಮುಗಿಯುವುದರೊಳಗೆ ಕೆಲವು ಹಾಳಾಗಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>