ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅನಿಲ ದೇಶಪಾಂಡೆ ಮಾತನಾಡಿ, ಜಿಲ್ಲೆಯಲ್ಲಿ ಬಹುದಿನ ಗಳಿಂದ ವಾರ್ತಾ ಅಧಿಕಾರಿಗಳ ಬೇಡಿಕೆ ಇತ್ತು. ಸರ್ಕಾರ ಹೆಚ್ಚುವರಿ ಪ್ರಭಾರ ಅಧಿಕಾರಿಗಳಾಗಿ ಜಿ. ಚಂದ್ರಕಾಂತ ಅವರನ್ನು ನಿಯೋಜಿಸಿರುವುದು ಸಂತಸದ ವಿಷಯ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ವಾರ್ತಾ ಇಲಾಖೆ ಹಿರಿಯ ಸಹಾ ಯಕ ನಿರ್ದೇಶಕ ಜಿ. ಚಂದ್ರಕಾಂತ, ಇಲಾಖೆಯ, ಸರ್ಕಾರ ಕಾರ್ಯಕ್ರಮಗಳು ಸೇರಿದಂತೆ ಪತ್ರಕರ್ತರಿಗೆ ಅವಶ್ಯಕವಾಗಿರುವ ಎಲ್ಲ ಸೌಲಭ್ಯ ಗಳನ್ನು ಒದಗಿಸ ಲಾಗುವುದು. ಒಳ್ಳೆಯ ಕಾರ್ಯ ಮಾಡಲು ತಮ್ಮ ಸಹಕಾರ ಅಗತ್ಯ ಎಂದರು. ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಸದಸ್ಯರು, ಇಲಾಖೆಯ ಸಿಬ್ಬಂದಿ ಹಾಜರಿದ್ದರು.