ಮುಖಂಡರು ಮಾತನಾಡಿ, ‘ಟಿ.ಎಸ್. ನಾಗಾಭರಣ ಅವರು ಉದ್ದೇಶ ಪೂರ್ವಕವಾಗಿಯೇ ಲಿಂಗಾಯತರಿಗೆ ಅವಮಾನಿಸುವ ರೀತಿಯಲ್ಲಿ ಅಲ್ಲಮ ಚಿತ್ರ ಮಾಡಿ ಬಸವಣ್ಣನವರು ನೀಡಿದ ಇಷ್ಟಲಿಂಗವನ್ನು ಮರೆ ಮಾಚಿದ್ದಾರೆ’ ಎಂದು ಆರೋಪಿಸಿದರು.
‘ಬಸವಾದಿ ಶರಣರ ಜೀವ ನಾಧಾರಿತ ಅಲ್ಲಮ ಚಿತ್ರದಲ್ಲಿ ಶೂನ್ಯ ಪೀಠಾಧೀಶರಾದ ಅಲ್ಲಮಪ್ರಭುವಿಗೆ ಇಷ್ಟಲಿಂಗ ಹಾಕದೆ, ಕಲ್ಯಾಣದಲ್ಲಿಯ ಅರಸನಾಗಿದ್ದ ಬಿಜ್ಜಳನ ಕೊರಳಲ್ಲಿ ಲಿಂಗ ಹಾಕಲಾಗಿದೆ. ಅಲ್ಲದೆ ಕಲ್ಯಾಣ ಕ್ರಾಂತಿಗೆ ಕಾರಣವಾದ ಅಂತರ್ಜಾತಿ ವಿವಾಹವನ್ನು ವಿರೋಧಿಸಿದವರು ಅಲ್ಲಿಯ ವೈದಿಕರು. ಆದರೆ, ಸಿನಿಮಾದಲ್ಲಿ ಲಿಂಗಾಯತರು ವಿರೋಧಿ ಸಿದರೆಂದು ತಿರುಚಲಾಗಿದೆ.
ಇದು ಲಿಂಗಾಯತರಿಗೆ ಮತ್ತು ಬಸವ ತತ್ವಕ್ಕೆ ಮಾಡಿದ ಅವಮಾನ’ ಎಂದು ದೂರಿದರು.‘ಇಡೀ ಚಿತ್ರದಲ್ಲಿ ಎಲ್ಲಿಯೂ ಬಸವಣ್ಣ, ಅಲ್ಲಮಪ್ರಭು, ಅಕ್ಕ ಮಹಾ ದೇವಿ ಯಾರಿಗೂ ಇಷ್ಟ ಲಿಂಗವನ್ನು ಹಾಕದೆ ಇಡೀ ಚಿತ್ರವು ಬಸವ ಪರಂಪ ರೆಯ ವಿರೋಧಿಯಾಗಿ ಚಿತ್ರಿಸಲಾಗಿದೆ. ಆದ್ದರಿಂದ ಸರ್ಕಾರ ಕೂಡಲೆ ಈ ಚಿತ್ರವನ್ನು ನಿಷೇಧಿಸಬೇಕು. ಒಂದು ವೇಳೆ ನಿಷೇಧ ಮಾಡದಿದ್ದರೆ ರಾಜ್ಯ ದಾದ್ಯಂತ ಉಗ್ರ ಹೋರಾಟ ನಡೆಸ ಲಾಗುವುದು’ ಎಂದು ಎಚ್ಚರಿಸಿದರು.
ಮನವಿ ಪತ್ರವನ್ನು ಗ್ರೇಡ್ -2 ತಹಶೀಲ್ದಾರ್ ಸುಫೀಯಾ ಸುಲ್ತಾನ್ ಅವರಿಗೆ ಸಲ್ಲಿಸಲಾಯಿತು. ರಾಜು ಕುಂಬಾರ, ಚಂದ್ರಶೇಖರ ಡೊಣೂರ, ನಾಗಭೂಷಣ ಯಾಳಗಿ, ಸಂಗಾರಡ್ಡಿ ಬಿಜಾಸಪೂರ ಇದ್ದರು.