ಭೀಮಾ ನದಿ ಪಾತ್ರದ ಗ್ರಾಮಗಳಾದ ನಾಲವಡಗಿ, ಬಬಲಾದ, ಗೊಂದೆನೂರ, ನಾಯ್ಕಲ್, ಬಿರನಾಳ ವ್ಯಾಪ್ತಿಯಲ್ಲಿ ನಾಟಿ ಮಾಡಿದ್ದ ಭತ್ತದ ತೆನೆ ಕಟ್ಟುವ ಹಂತದಲ್ಲಿ ಇರುವಾಗ ಮಳೆಯಾದ ಕಾರಣ ಭತ್ತ ನೆಲಕ್ಕುರುಳಿದೆ. ಪ್ರಾಥಮಿಕ ವರದಿಯಂತೆ 167 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಹಾನಿಯಾಗಿದೆ. ಮುಡಬೂಳ, ಅಣಬಿ, ಶಿರವಾಳ, ಮದ್ರಿಕಿ, ಗೋಗಿ ಮುಂತಾದ ಪ್ರದೇಶದಲ್ಲಿ 130 ಹೆಕ್ಟೇರ್ ಹತ್ತಿ ಬೆಳೆ ನಷ್ಟವಾಗಿದೆ.