ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಮಾತನಾಡಿ, ‘ಎಸ್ಸೆಸ್ಸೆಲ್ಸಿ ಬಳಿಕ ನಾನು ಜೋಗತಿ ದೀಕ್ಷೆ ಪಡೆದುಕೊಂಡೆ. ಆ ಬಳಿಕ ಬಹಳಷ್ಟು ತೊಂದರೆ ಅನುಭವಿಸಿದೆ. ಜೋಗತಿ ನೃತ್ಯವನ್ನು ಕಲಿತು, ಅನೇಕ ಕಡೆ ಪ್ರದರ್ಶನ ನೀಡಿ ಅದರಿಂದ ಬದುಕು ಕಟ್ಟಿಕೊಂಡೆ. ದೇವರು ದೇವಸ್ಥಾನದಲ್ಲಿ ಇಲ್ಲ, ನಾವು ಮಾಡುವ ಕೆಲಸ, ಶ್ರದ್ಧೆ, ಭಯ, ಭಕ್ತಿಯಲ್ಲೇ ದೇವರು ಇದ್ದಾನೆ’ ಎಂದರು.