<p>ಗುಲ್ಬರ್ಗ: ಬದಲಾವಣೆಗಾಗಿ ನಾವು (`ಟುಗೆದರ್ ವಿ ಕ್ಯಾನ್ ಚೇಂಜ್~) ಸ್ವಯಂಸೇವಾ ಸಂಘಟನೆಯು ಜುಲೈ 5ರಿಂದ ಡಿಸೆಂಬರ್ ಕೊನೆಯ ವಾರದವರೆಗೆ ಸುಮಾರು 2ಲಕ್ಷ ಸಸಿ ನೆಡುವ ಗುರಿ ಹೊಂದಿದೆ ಎಂದು ಸಂಚಾಲಕ ಬ್ಯಾನರ್ಜಿ ವೈಷ್ಣವಿ ತಿಳಿಸಿದರು.<br /> <br /> ಇಲ್ಲಿನ ದರ್ಗಾ ರಸ್ತೆಯ ಐಡಿಯಲ್ ಉರ್ದು ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆ ಆವರಣದಲ್ಲಿ `ಬದಲಾವಣೆಗಾಗಿ ನಾವು~ ಸಂಘಟನೆಯು ಇನ್ಫೋಸಿಸ್ ಫೌಂಡೇಶನ್ ಮತ್ತು ಐಡಿಯಲ್ ಸ್ಕೂಲ್ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ನಗರದ ವಿವಿಧ ಭಾಗಗಳಲ್ಲಿ ಈಗಾಗಲೇ ಶೇ 40ರಷ್ಟು ಸಸಿ ನೆಡಲಾಗಿದೆ. ಗಿಡ ಬೆಳೆಸುವ ಮೂಲಕ ಹಸಿರು ಕಂಗೊಳಿಸುವಂತೆ ಮಾಡುವ ಕ್ರಮಕ್ಕೆ ಹಸಿರು ನಿಶಾನೆ ತೋರಲಾಗಿದೆ ಎಂದು ವಿವರಿಸಿದರು.<br /> <br /> `ಸಸಿ ನೆಡುವುದರಿಂದ ಆಗುವ ಪ್ರಯೋಜನ~ ಕುರಿತು ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಉತ್ತಮವಾಗಿ ಮಾತನಾಡಿದ ವಿದ್ಯಾರ್ಥಿಗಳಾದ ಅಯಾಜ್, ಇಶರತ್, ಸುಲೇನ್ ಆದಿಲ್ ಅವರಿಗೆ ಟುಗೆದರ್ ವಿ ಕ್ಯಾನ್ ಚೇಂಜ್ ಸಂಘಟನೆ ವತಿಯಿಂದ ಬಹುಮಾನ ವಿತರಿಸಲಾಯಿತು. <br /> <br /> ಡಾ. ಹಬೀಬ್ ರೆಹಮಾನ್ ಮಾತನಾಡಿದರು. ಹಮೀದ್ ಅಕಮ್ಮಲ್, ಅಜೀಜ್ ಉಲ್ಲ ಸರ್ಮಸ್ತ್, ಅಬ್ದುಲ್ ಖದಿಕ್ ಚ್ಯೆಂಗೆ, ಮಗ್ಬಲ್ ಅಹೇಮದ್ ಫರೀದಿ, ಇನ್ಫೋಸಿಸ್ ಪ್ರತಿಷ್ಠಾನದ ಶ್ರೀನಿವಾಸ ದೇಶಮುಖ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗುಲ್ಬರ್ಗ: ಬದಲಾವಣೆಗಾಗಿ ನಾವು (`ಟುಗೆದರ್ ವಿ ಕ್ಯಾನ್ ಚೇಂಜ್~) ಸ್ವಯಂಸೇವಾ ಸಂಘಟನೆಯು ಜುಲೈ 5ರಿಂದ ಡಿಸೆಂಬರ್ ಕೊನೆಯ ವಾರದವರೆಗೆ ಸುಮಾರು 2ಲಕ್ಷ ಸಸಿ ನೆಡುವ ಗುರಿ ಹೊಂದಿದೆ ಎಂದು ಸಂಚಾಲಕ ಬ್ಯಾನರ್ಜಿ ವೈಷ್ಣವಿ ತಿಳಿಸಿದರು.<br /> <br /> ಇಲ್ಲಿನ ದರ್ಗಾ ರಸ್ತೆಯ ಐಡಿಯಲ್ ಉರ್ದು ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆ ಆವರಣದಲ್ಲಿ `ಬದಲಾವಣೆಗಾಗಿ ನಾವು~ ಸಂಘಟನೆಯು ಇನ್ಫೋಸಿಸ್ ಫೌಂಡೇಶನ್ ಮತ್ತು ಐಡಿಯಲ್ ಸ್ಕೂಲ್ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ನಗರದ ವಿವಿಧ ಭಾಗಗಳಲ್ಲಿ ಈಗಾಗಲೇ ಶೇ 40ರಷ್ಟು ಸಸಿ ನೆಡಲಾಗಿದೆ. ಗಿಡ ಬೆಳೆಸುವ ಮೂಲಕ ಹಸಿರು ಕಂಗೊಳಿಸುವಂತೆ ಮಾಡುವ ಕ್ರಮಕ್ಕೆ ಹಸಿರು ನಿಶಾನೆ ತೋರಲಾಗಿದೆ ಎಂದು ವಿವರಿಸಿದರು.<br /> <br /> `ಸಸಿ ನೆಡುವುದರಿಂದ ಆಗುವ ಪ್ರಯೋಜನ~ ಕುರಿತು ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಉತ್ತಮವಾಗಿ ಮಾತನಾಡಿದ ವಿದ್ಯಾರ್ಥಿಗಳಾದ ಅಯಾಜ್, ಇಶರತ್, ಸುಲೇನ್ ಆದಿಲ್ ಅವರಿಗೆ ಟುಗೆದರ್ ವಿ ಕ್ಯಾನ್ ಚೇಂಜ್ ಸಂಘಟನೆ ವತಿಯಿಂದ ಬಹುಮಾನ ವಿತರಿಸಲಾಯಿತು. <br /> <br /> ಡಾ. ಹಬೀಬ್ ರೆಹಮಾನ್ ಮಾತನಾಡಿದರು. ಹಮೀದ್ ಅಕಮ್ಮಲ್, ಅಜೀಜ್ ಉಲ್ಲ ಸರ್ಮಸ್ತ್, ಅಬ್ದುಲ್ ಖದಿಕ್ ಚ್ಯೆಂಗೆ, ಮಗ್ಬಲ್ ಅಹೇಮದ್ ಫರೀದಿ, ಇನ್ಫೋಸಿಸ್ ಪ್ರತಿಷ್ಠಾನದ ಶ್ರೀನಿವಾಸ ದೇಶಮುಖ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>