<p><strong>ಚನ್ನರಾಯಪಟ್ಟಣ:</strong> ಶ್ರೀರಾಮದೇವರ ಉತ್ತರ ನಾಲೆಯಿಂದ ಕಿಕ್ಕೇರಿ ಹೋಬಳಿಯ ಅಚ್ಚುಕಟ್ಟು ಪ್ರದೇಶಕ್ಕೆ ಸಮರ್ಪಕ ನೀರು ಹರಿಸಲು ಆಗ್ರಹಿಸಿ ಕೆ.ಆರ್.ಪೇಟೆ ತಾಲ್ಲೂಕು ಕಿಕ್ಕೇರಿ ಹೋಬಳಿಯ ವಿವಿಧ ಗ್ರಾಮಸ್ಥರು ಬುಧವಾರ ಇಲ್ಲಿ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.<br /> <br /> ವಿಧಾನಸಭೆಯ ಮಾಜಿ ಸ್ಪೀಕರ್ ಕೃಷ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು ಗಾಣದಹಳ್ಳಿ, ಗೊಂದಿಹಳ್ಳಿ, ಚಿನ್ನೇನಹಳ್ಳಿ, ಕೋಟಹಳ್ಳಿ, ಮಾದಾಪುರ, ದಾಂಡನಹಳ್ಳಿ, ಬೀದರಹಳ್ಳಿ, ಹೂಗಿನಹಳ್ಳಿ, ಗೋವಿಂದನಹಳ್ಳಿ, ಗೊಲ್ಲರಕೊಪ್ಪಲು, ತೆಂಗಿನಘಟ್ಟ, ಜುಜ್ಜಲಕ್ಯಾತನಹಳ್ಳಿ, ರಾಮನಹಳ್ಳಿ, ಕಾಳೇನಹಳ್ಳಿ ಗ್ರಾಮದ ಸಾವಿರಾರು ಎಕರೆ ಜಮೀನಿಗೆ ನೀರು ಹರಿಯುತ್ತಿಲ್ಲ.<br /> <br /> ಇದಕ್ಕೆ ನಾಲೆಯಲ್ಲಿ ಹೂಳು ತುಂಬಿರುವುದು ಕಾರಣ. 2008-09ರಲ್ಲಿ ಶ್ರೀರಾಮದೇವರ ಉತ್ತರನಾಲೆಯನ್ನು 200 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣಗೊಳಿಸಲಾಯಿತಾದರೂ ಈಗ ಉಪಯೋಗಕ್ಕೆ ಬಾರದಂತಾಗಿದೆ ಎಂದು ಟೀಕಿಸಿದರು.<br /> <br /> 2 ವರ್ಷಗಳಿಂದ ನಾಲೆಯಲ್ಲಿ ನೀರು ಸರಾಗವಾಗಿ ಹರಿಯಿತು. ಈ ವರ್ಷ ಏಕೆ ಸಮಸ್ಯೆ ಉದ್ಭವಿಸಿತು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಮಾಜಿ ಸ್ಪೀಕರ್ ಕೃಷ್ಣ, ತಕ್ಷಣ ನಾಲೆಯಲ್ಲಿ ಹೂಳು ಎತ್ತಿ ಸರಾಗವಾಗಿ ನೀರು ಹರಿಸಬೇಕು ಎಂದು ಆಗ್ರಹಿಸಿದರು.<br /> <br /> ಇನ್ನೂ ಮೂರು ದಿನಗಳದೊಳಗೆ ನಾಲೆಯಲ್ಲಿ ಹೂಳು ಎತ್ತಿಸಿ ಅಚ್ಚುಕಟು ಪ್ರದೇಶಕ್ಕೆ ನೀರು ಹರಿಸಲು ಕ್ರಮ ಕೈಗೊಳ್ಳುವುದಾಗಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ಎಂ.ಬಾಲಸುಬ್ರಹ್ಮಣ್ಯಂ ಅವರು ಭರವಸೆ ನೀಡಿದರು.<br /> <br /> ತೇಜಸ್ವಿ ಕಿರಣ್, ರಾಮೇಗೌಡ, ಪುಟ್ಟಸ್ವಾಮಿ, ಬೋಜೇಗೌಡ, ವೆಂಕಟಸುಬ್ಬೇಗೌಡ, ಮಂಜೇಗೌಡ, ಮಂಜು, ಡಿ.ಎಲ್. ದೇವರಾಜು, ಜವರೇಗೌಡ ನೇತೃತ್ವ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನರಾಯಪಟ್ಟಣ:</strong> ಶ್ರೀರಾಮದೇವರ ಉತ್ತರ ನಾಲೆಯಿಂದ ಕಿಕ್ಕೇರಿ ಹೋಬಳಿಯ ಅಚ್ಚುಕಟ್ಟು ಪ್ರದೇಶಕ್ಕೆ ಸಮರ್ಪಕ ನೀರು ಹರಿಸಲು ಆಗ್ರಹಿಸಿ ಕೆ.ಆರ್.ಪೇಟೆ ತಾಲ್ಲೂಕು ಕಿಕ್ಕೇರಿ ಹೋಬಳಿಯ ವಿವಿಧ ಗ್ರಾಮಸ್ಥರು ಬುಧವಾರ ಇಲ್ಲಿ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.<br /> <br /> ವಿಧಾನಸಭೆಯ ಮಾಜಿ ಸ್ಪೀಕರ್ ಕೃಷ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು ಗಾಣದಹಳ್ಳಿ, ಗೊಂದಿಹಳ್ಳಿ, ಚಿನ್ನೇನಹಳ್ಳಿ, ಕೋಟಹಳ್ಳಿ, ಮಾದಾಪುರ, ದಾಂಡನಹಳ್ಳಿ, ಬೀದರಹಳ್ಳಿ, ಹೂಗಿನಹಳ್ಳಿ, ಗೋವಿಂದನಹಳ್ಳಿ, ಗೊಲ್ಲರಕೊಪ್ಪಲು, ತೆಂಗಿನಘಟ್ಟ, ಜುಜ್ಜಲಕ್ಯಾತನಹಳ್ಳಿ, ರಾಮನಹಳ್ಳಿ, ಕಾಳೇನಹಳ್ಳಿ ಗ್ರಾಮದ ಸಾವಿರಾರು ಎಕರೆ ಜಮೀನಿಗೆ ನೀರು ಹರಿಯುತ್ತಿಲ್ಲ.<br /> <br /> ಇದಕ್ಕೆ ನಾಲೆಯಲ್ಲಿ ಹೂಳು ತುಂಬಿರುವುದು ಕಾರಣ. 2008-09ರಲ್ಲಿ ಶ್ರೀರಾಮದೇವರ ಉತ್ತರನಾಲೆಯನ್ನು 200 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣಗೊಳಿಸಲಾಯಿತಾದರೂ ಈಗ ಉಪಯೋಗಕ್ಕೆ ಬಾರದಂತಾಗಿದೆ ಎಂದು ಟೀಕಿಸಿದರು.<br /> <br /> 2 ವರ್ಷಗಳಿಂದ ನಾಲೆಯಲ್ಲಿ ನೀರು ಸರಾಗವಾಗಿ ಹರಿಯಿತು. ಈ ವರ್ಷ ಏಕೆ ಸಮಸ್ಯೆ ಉದ್ಭವಿಸಿತು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಮಾಜಿ ಸ್ಪೀಕರ್ ಕೃಷ್ಣ, ತಕ್ಷಣ ನಾಲೆಯಲ್ಲಿ ಹೂಳು ಎತ್ತಿ ಸರಾಗವಾಗಿ ನೀರು ಹರಿಸಬೇಕು ಎಂದು ಆಗ್ರಹಿಸಿದರು.<br /> <br /> ಇನ್ನೂ ಮೂರು ದಿನಗಳದೊಳಗೆ ನಾಲೆಯಲ್ಲಿ ಹೂಳು ಎತ್ತಿಸಿ ಅಚ್ಚುಕಟು ಪ್ರದೇಶಕ್ಕೆ ನೀರು ಹರಿಸಲು ಕ್ರಮ ಕೈಗೊಳ್ಳುವುದಾಗಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ಎಂ.ಬಾಲಸುಬ್ರಹ್ಮಣ್ಯಂ ಅವರು ಭರವಸೆ ನೀಡಿದರು.<br /> <br /> ತೇಜಸ್ವಿ ಕಿರಣ್, ರಾಮೇಗೌಡ, ಪುಟ್ಟಸ್ವಾಮಿ, ಬೋಜೇಗೌಡ, ವೆಂಕಟಸುಬ್ಬೇಗೌಡ, ಮಂಜೇಗೌಡ, ಮಂಜು, ಡಿ.ಎಲ್. ದೇವರಾಜು, ಜವರೇಗೌಡ ನೇತೃತ್ವ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>