<p>ಧಾರವಾಡ: `12ನೇ ಶತಮಾನದಲ್ಲಿ ಬಸವಕಲ್ಯಾಣದಲ್ಲಿ ನಡೆದ ವಚನ ಸಾಹಿತ್ಯದ ಚಳವಳಿ ದೇಶ ಕಂಡ ಬಹುದೊಡ್ಡ ಕ್ರಾಂತಿಯಾಗಿದೆ~ ಎಂದು ಹಿರಿಯ ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ಅಭಿಪ್ರಾಯಪಟ್ಟರು.<br /> <br /> ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಸಭಾಂಗಣದಲ್ಲಿ ಯುಜಿಸಿಯ ಸ್ಯಾಪ್ ಅನುದಾನದಡಿ ಬುಧವಾರ ಹಮ್ಮಿಕೊಂಡಿದ್ದ ಎರಡು ದಿನಗಳ `ಶಿವಶರಣರ ವಿಚಾರಧಾರೆ~ ಕುರಿತು ರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಬಸವಕಲ್ಯಾಣದ ಕ್ರಾಂತಿ ಅದ್ಹೇಗೋ ಕಾಶ್ಮೀರವನ್ನೂ ಮುಟ್ಟಿ ರಾಜನಾಗಿದ್ದ ಮೋಳಿಗೆ ಮಾರಯ್ಯನನ್ನೂ ತಲುಪಿತು. ಅಷ್ಟರ ಮಟ್ಟಿಗೆ ಈ ಚಳವಳಿ ಪ್ರಭಾವಿಯಾಗಿದ್ದರಿಂದಲೇ ಇತರ ರಾಜ್ಯಗಳಿಂದಲೂ ಶರಣರು ಬಂದು ಭಾಗವಹಿಸಿದರು~ ಎಂದರು. <br /> <br /> `ವಚನ ಸಾಹಿತ್ಯವು ಬುದ್ಧನ ಚಿಂತನೆಗಳಿಂದ ಏನನ್ನು ಪಡೆಯಿತು ಎಂಬ ಬಗ್ಗೆ ಸಾಕಷ್ಟು ಸಂಶೋಧನೆಗಳ ನಡೆದಿಲ್ಲ. ಆ ಬಗ್ಗೆ ವಿಸ್ತೃತ ಅಧ್ಯಯನ ನಡೆಯಬೇಕಾಗಿದೆ~ ಎಂದೂ ಹೇಳಿದರು. <br /> <br /> ಮುಖ್ಯ ಅತಿಥಿಯಾಗಿದ್ದ ಗುಲ್ಬರ್ಗ ಕೇಂದ್ರೀಯ ವಿ.ವಿ. ಪ್ರಾಧ್ಯಾಪಕ ಡಾ.ನಟರಾಜ ಹುಳಿಯಾರ್, `ಶರಣ ಎಂಬ ಪದ ಆಧುನಿಕ ಪರಿಭಾಷೆಯಲ್ಲಿ ಗುರುತಿಸುವ `ಸಂಗಾತಿ~ ಪದವನ್ನು ಹೋಲುತ್ತದೆ. ಶಿವರಶರಣರು ಬರೆದ ವಚನಗಳು ಹೊಸ ವಿಮರ್ಶೆಯ ಲೋಕವನ್ನೇ ಸೃಷ್ಟಿಸಿತು~ ಎಂದರು.<br /> <br /> ನಂತರ ನಡೆದ ಗೋಷ್ಠಿಗಳಲ್ಲಿ `ಅಲ್ಲಮನ ಪ್ರಮುಖ ವಿಚಾರಗಳು~, `ಅಲ್ಲಮನ ತತ್ವಜ್ಞಾನ~, `ಅಲ್ಲಮನ ವಚನಗಳ ಭಾಷೆ, ಶೈಲಿ~, `ಬಸವಣ್ಣನ ಸಾಮಾಜಿಕ ಪ್ರಜ್ಞೆ~, `ಬಸವಣ್ಣನ ಆರ್ಥಿಕ ವಿಚಾರಗಳು~, `ಬಸವಣ್ಣನ ವಚನಗಳ ಭಾಷೆ, ಶೈಲಿ~, `ಚನ್ನಬಸವಣ್ಣನ ವಚನಗಳಲ್ಲಿ ದಾರ್ಶನಿಕತೆ~, `ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಾಮಾಜಿಕ ವಿಡಂಬನೆ~ ಕುರಿತು ತಜ್ಞರು ಪ್ರಬಂಧ ಮಂಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧಾರವಾಡ: `12ನೇ ಶತಮಾನದಲ್ಲಿ ಬಸವಕಲ್ಯಾಣದಲ್ಲಿ ನಡೆದ ವಚನ ಸಾಹಿತ್ಯದ ಚಳವಳಿ ದೇಶ ಕಂಡ ಬಹುದೊಡ್ಡ ಕ್ರಾಂತಿಯಾಗಿದೆ~ ಎಂದು ಹಿರಿಯ ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ಅಭಿಪ್ರಾಯಪಟ್ಟರು.<br /> <br /> ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಸಭಾಂಗಣದಲ್ಲಿ ಯುಜಿಸಿಯ ಸ್ಯಾಪ್ ಅನುದಾನದಡಿ ಬುಧವಾರ ಹಮ್ಮಿಕೊಂಡಿದ್ದ ಎರಡು ದಿನಗಳ `ಶಿವಶರಣರ ವಿಚಾರಧಾರೆ~ ಕುರಿತು ರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಬಸವಕಲ್ಯಾಣದ ಕ್ರಾಂತಿ ಅದ್ಹೇಗೋ ಕಾಶ್ಮೀರವನ್ನೂ ಮುಟ್ಟಿ ರಾಜನಾಗಿದ್ದ ಮೋಳಿಗೆ ಮಾರಯ್ಯನನ್ನೂ ತಲುಪಿತು. ಅಷ್ಟರ ಮಟ್ಟಿಗೆ ಈ ಚಳವಳಿ ಪ್ರಭಾವಿಯಾಗಿದ್ದರಿಂದಲೇ ಇತರ ರಾಜ್ಯಗಳಿಂದಲೂ ಶರಣರು ಬಂದು ಭಾಗವಹಿಸಿದರು~ ಎಂದರು. <br /> <br /> `ವಚನ ಸಾಹಿತ್ಯವು ಬುದ್ಧನ ಚಿಂತನೆಗಳಿಂದ ಏನನ್ನು ಪಡೆಯಿತು ಎಂಬ ಬಗ್ಗೆ ಸಾಕಷ್ಟು ಸಂಶೋಧನೆಗಳ ನಡೆದಿಲ್ಲ. ಆ ಬಗ್ಗೆ ವಿಸ್ತೃತ ಅಧ್ಯಯನ ನಡೆಯಬೇಕಾಗಿದೆ~ ಎಂದೂ ಹೇಳಿದರು. <br /> <br /> ಮುಖ್ಯ ಅತಿಥಿಯಾಗಿದ್ದ ಗುಲ್ಬರ್ಗ ಕೇಂದ್ರೀಯ ವಿ.ವಿ. ಪ್ರಾಧ್ಯಾಪಕ ಡಾ.ನಟರಾಜ ಹುಳಿಯಾರ್, `ಶರಣ ಎಂಬ ಪದ ಆಧುನಿಕ ಪರಿಭಾಷೆಯಲ್ಲಿ ಗುರುತಿಸುವ `ಸಂಗಾತಿ~ ಪದವನ್ನು ಹೋಲುತ್ತದೆ. ಶಿವರಶರಣರು ಬರೆದ ವಚನಗಳು ಹೊಸ ವಿಮರ್ಶೆಯ ಲೋಕವನ್ನೇ ಸೃಷ್ಟಿಸಿತು~ ಎಂದರು.<br /> <br /> ನಂತರ ನಡೆದ ಗೋಷ್ಠಿಗಳಲ್ಲಿ `ಅಲ್ಲಮನ ಪ್ರಮುಖ ವಿಚಾರಗಳು~, `ಅಲ್ಲಮನ ತತ್ವಜ್ಞಾನ~, `ಅಲ್ಲಮನ ವಚನಗಳ ಭಾಷೆ, ಶೈಲಿ~, `ಬಸವಣ್ಣನ ಸಾಮಾಜಿಕ ಪ್ರಜ್ಞೆ~, `ಬಸವಣ್ಣನ ಆರ್ಥಿಕ ವಿಚಾರಗಳು~, `ಬಸವಣ್ಣನ ವಚನಗಳ ಭಾಷೆ, ಶೈಲಿ~, `ಚನ್ನಬಸವಣ್ಣನ ವಚನಗಳಲ್ಲಿ ದಾರ್ಶನಿಕತೆ~, `ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಾಮಾಜಿಕ ವಿಡಂಬನೆ~ ಕುರಿತು ತಜ್ಞರು ಪ್ರಬಂಧ ಮಂಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>