ಭಾರತ ಸರ್ಕಾರದಜಲ ಜೀವನ ಮಿಷನ್ ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವ್ಯಾಪ್ತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಕೆಲಸ ಮಾಡಬೇಕು.ಈ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುವುದು.
ಅಭ್ಯರ್ಥಿಗಳು ಅರ್ಜಿಗಳನ್ನು ನಿಗದಿತ ನಮೂನೆಯಲ್ಲಿ ಮಾತ್ರ ಸಲ್ಲಿಸಬೇಕು. ಈ ಸಂಬಂಧ ಈ ಕೆಳಗೆ ಮಾಹಿತಿ ನೀಡಲಾಗಿದೆ.
ಹುದ್ದೆಗಳ ಹೆಸರು: ಆಡಳಿತಾತ್ಮಕ ಸಹಾಯಕ ಹಾಗೂ ಐಇಸಿ ಸಮನ್ವಯಕಾರರು
ಹುದ್ದೆಗಳ ಸಂಖ್ಯೆ: 19
ವಿದ್ಯಾರ್ಹತೆ: ಪದವಿ/ ಸ್ನಾತಕೋತ್ತರ ಪದವಿ
ವೇತನ: ₹ 25 ಸಾವಿರದಿಂದ ₹ 1ಲಕ್ಷದ ವರೆಗೆ
ವಯಸ್ಸು: ಕನಿಷ್ಠ–21, ಗರಿಷ್ಠ–45
ಅರ್ಜಿ ಸಲ್ಲಿಸುವ ವಿಳಾಸ:ಕಮಿಷನರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, 2ನೇ ಮಹಡಿ, ಕೆಹೆಚ್ಬಿ ಬಿಲ್ಡಿಂಗ್, ಕಾವೇರಿ ಭವನ, ಕೆ.ಜಿ.ರಸ್ತೆ, ಬೆಂಗಳೂರು-5600009.