ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಮಕ್ಕಳನ್ನು ‘ಸೂಪರ್ 30’ ಹೆಸರಿನಲ್ಲಿ ಗುರುತಿಸಿ ಅವರು ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ತರಬೇತಿ ನೀಡಿದ್ದಲ್ಲದೆ, ಅವರಿಗೆ ಉಚಿತವಾಗಿ ಊಟ, ವಸತಿ ಸೌಲಭ್ಯವನ್ನು ಆನಂದಕುಮಾರ್ ನೀಡಿದ್ದರು. ಈವರೆಗೆ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಐಐಟಿ ಪ್ರವೇಶ ಪರೀಕ್ಷೆ ಉತ್ತೀರ್ಣರಾಗಿದ್ದಾರೆ.