<p>ಅನುಭವವು ಅರಳಿ ಅಲಂಕರಣಗೊಂಡರೆ ಕಲೆ; ಪ್ರಶ್ನಿಸಿ ಚಿಕಿತ್ಸೆಗೆ ಒಳಪಡಿಸಿದರೆ ಶಾಸ್ತ್ರ. ಅರಿಯದೆ ಸ್ಮರಣೆಯಾದರೆ ಅನಗತ್ಯ ಹೊರೆ. ಈ ಬಗ್ಗೆ ಶಿಕ್ಷಣ ಇಲಾಖೆಯನ್ನು ಎಚ್ಚರಿಸಿದವರು ದಿ. ಯಶ್ ಪಾಲ್. ಅವರು ಹೀಗೆ ಎಚ್ಚರಿಸಿದ ಸಂದರ್ಭವಾದರೂ ಬಂದದ್ದು ಹೇಗೆ?</p>.<p>‘ಮಕ್ಕಳ ಶಾಲಾಕಲಿಕೆ ಹಾಗಿರಲಿ, ಅವರು ಪ್ರತಿದಿನವೂ ಹೊರುವ ಪುಸ್ತಕದ ಚೀಲದ ಹೊರೆ ಇಳಿಸಿ’– ಎಂದು ರಾಜ್ಯಸಭೆಯಲ್ಲಿ ಆರ್. ಕೆ. ನಾರಾಯಣ್ ಅವರು ಪ್ರಶ್ನೆ ಕೇಳಿ ಎಲ್ಲರ ಗಮನವನ್ನು ಸೆಳೆದರು. ಸರ್ಕಾರವು ಈ ಕುರಿತಂತೆ ತನಿಖೆ ನಡೆಸಲು ‘ಯಶ್ ಪಾಲ್ ಸಮಿತಿ’ಯನ್ನು ನೇಮಿಸಿತು. ಪ್ರಶ್ನೆಯನ್ನು ಪರಿಶೀಲಿಸಿ ಪರಿಹಾರವನ್ನು ಸೂಚಿಸುವಂತೆ ಅವರನ್ನು ಕೋರಲಾಯಿತು.</p>.<p>ಯಶ್ ಪಾಲ್ ಅವರು ಅಧ್ಯಯನ ನಡೆಸಿ ತಮ್ಮ ವರದಿ ನೀಡಿದರು. ಸಾರಾಂಶ ಸಂಕ್ಷೇಪವಾಗಿ ಇದು: ಪುಸ್ತಕ ಆಧಿಕ್ಯದ ಹೊರೆ ಇರುವುದು ಖಾಸಗಿ ಶಾಲೆಗಳಲ್ಲಿ ಮಾತ್ರ. ಆದರೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳೆರಡರಲ್ಲೂ ಇರುವ ಇನ್ನೊಂದು ಹೊರೆ – ಮಾನಸಿಕ ಹೊರೆ. ಅದೆಂದರೆ ಅರ್ಥವಾಗದ ವಾಕ್ಯಗಳನ್ನು ಯಾಂತ್ರಿಕವಾಗಿ, ಪರೀಕ್ಷೆಗೆ ಉಪಯುಕ್ತ ಆಗುವ ಹಾಗೆ ನೆನಪಿಟ್ಟುಕೊಳ್ಳಬೇಕಾದ ಹೊರೆ. ಅತ್ಯಂತ ಜಾಣನೆನಿಸಿಕೊಂಡ ಅಂಕಿ ಗಳಿಸಿದ ಹುಡುಗ–ಹುಡುಗಿ ಯಾರೂ ಈ ಹೊರೆಯಿಂದ ಹೊರತಾಗಿಲ್ಲ. ಕಲಿಕೆಯನ್ನೆ ಅವರು ಆನಂದಿಸುತ್ತಿಲ್ಲ.<br /> ಇದಕ್ಕೆ ಪರಿಹಾರವೆಂದರೆ ಕಲಿಕೆಯನ್ನು ರೋಚಕ ಅನುಭವವಾಗಿಸುವುದು ಇದಕ್ಕೆ ಪ್ರೊ. ಯಶ್ ಪಾಲ್ ನೀಡಿದ ಘೋಷನುಡಿ. ‘ಕಲಿಕೆಯ ಆನಂದ’ (Joy of Learning).</p>.<p>ವಿಷಯತಜ್ಞರೂ ವಾದಪ್ರವೀಣರೂ ಆಗಿದ್ದ ಪ್ರೊ. ಯಶ್ ಪಾಲ್ ಅವರೊಡನೆ ಚರ್ಚೆ ಮಾಡುವ ಭಾಗ್ಯ ಪ್ರಸ್ತುತ ಲೇಖಕನಿಗೆ ದೊರಕಿತ್ತು. ಆಗ ಅವರು ತಮ್ಮ ವರದಿಯ ಬಗ್ಗೆ ಪ್ರಸ್ತಾಪಿಸಿ, ಈ ಕುರಿತು ಈಗಾಗಲೇ ಪರಿಹಾರ ಕ್ರಮಗಳನ್ನು ಆಲೋಚಿಸಿ ಜಾರಿಗೆ ತರುವ ಪ್ರಯತ್ನ ಮಾಡಿದುದಾಗಿ ಹೇಳಿದರು.</p>.<p>ವಿಜ್ಞಾನದ ಪರಿಕಲ್ಪನೆಗಳನ್ನು ಅನುಭವವೇದ್ಯವಾಗಿಸಿದಾಗ ಆಗುವ ರೋಚಕ ಅನುಭವವನ್ನು ಶ್ರೀಸಾಮಾನ್ಯರಿಗೂ ತಂದುಕೊಡುತ್ತಿದ್ದ ದೂರದರ್ಶನ ಕಾರ್ಯಕ್ರಮ – ‘ದಿ ಟರ್ನಿಂಗ್ ಪಾಯಿಂಟ್’. ಅದರ ವಿಶೇಷವೆಂದರೆ ವಿಜ್ಞಾನದ ಪ್ರಶ್ನೆಗಳನ್ನು ಅತ್ಯಂತ ಪರಿಚಿತ ನಿತ್ಯಾನುಭವ ಆಧರಿಸಿದ ಪ್ರಶ್ನೆಗಳನ್ನು ಕೈಗೆತ್ತಿಕೊಂಡು ಉತ್ತರವನ್ನು ಹುಡುಕುವ ಪ್ರಯತ್ನಕ್ಕೆ ತೊಡಗುತ್ತಿದ್ದುದು ಜನರ ಕೌತುಕವನ್ನು ತಣಿಸುತ್ತಿತ್ತು.</p>.<p>ಇದುವರೆಗೆ ಪರಿಣತರು ತಮ್ಮ ಪರಿಕಲ್ಪನೆಗೆ ಪೂರಕವಾದ ಪ್ರಶ್ನೆಗಳಿಗೆ ಉತ್ತರವನ್ನು ಹೇಳುತ್ತಿದ್ದರು. ಅದು ಜೀವನಕ್ಕೆ ಅನೇಕ ಬಾರಿ ಅಪ್ರಸ್ತುತ ಎನಿಸುತ್ತಿದ್ದುದೂ ಉಂಟು. ಆದರೆ ಈ ವಿಧಾನ ಹಾಗಲ್ಲ. ಅಜ್ಞರು ಕೇಳುವ ಪ್ರಶ್ನೆಗೆ ತಜ್ಞರು ಉತ್ತರ ಹೇಳಿ ಅಜ್ಞ–ತಜ್ಞರ ಬಾಂಧವ್ಯವನ್ನು ಬೆಸೆಯುವುದು ಹಾಗೂ ವಿಜ್ಞಾನದ ಸಾಮಾಜೀಕರಣ ಆಗುವುದು. ಇದಕ್ಕೆ ಮಾದರಿಯಾಗಿ ಉದಾಹರಿಸಬಲ್ಲ ಎರಡು ಪ್ರಶ್ನೆಗಳು.</p>.<p>1. ಇಸ್ತ್ರಿ ಮಾಡುವಾಗ ಇಸ್ತ್ರಿಪೆಟ್ಟಿಗೆ, ನೀರು, ಬಿಸಿ ಇವುಗಳ ಪಾತ್ರವೇನು? ಇಸ್ತ್ರಿಯ ದಕ್ಷತೆಯನ್ನು ಹೆಚ್ಚಿಸಲು ಈ ಕ್ರಮ ಹೇಗೆ ಉಪಯುಕ್ತವಾಗಿದೆ?</p>.<p>2) ಷೂ ಪಾಲಿಷ್ ಹಾಕುವಾಗ ಪಾಲಿಷ್ನಲ್ಲಿ, ಷೂನಲ್ಲಿ ಇರದ ಹೊಳಪು ಪಾಲಿಷ್ ಅನ್ನು ಷೂಗೆ ಸವರಿ ಉಜ್ಜಿದ ಮೇಲೆ ಬರುವುದಾದರೂ ಹೇಗೆ?<br /> ಇಲ್ಲಿಯ ಘಟಕಗಳು ಕ್ರಿಯೆ ಇವುಗಳ ಮಹತ್ವ, ಬಳಕೆಯ ತತ್ತ್ವ ಯಾವುದು?<br /> ಇಂತಹ ಪ್ರಶ್ನೆಗಳು ದೈನಂದಿನ ವಿದ್ಯಮಾನಗಳಲ್ಲಿ ಅಂತರ್ಗತವಾಗಿರುವ ವಿಜ್ಞಾನವನ್ನು ಅರಿಯಲು ಹಾಗೂ ನಿತ್ಯದ ಕೆಲಸಗಳನ್ನು ಚಿಕಿತ್ಸಾತ್ಮಕವಾಗಿ ಅರಿಯಲು ಪ್ರಶ್ನೆ ಕೇಳುವ ಪ್ರವೃತ್ತಿಯನ್ನು ರೂಢಿಸಿಕೊಳ್ಳಲು ಸಹಾಯಕ. ಸೂಕ್ಷ್ಮ ವೀಕ್ಷಣೆಯಿಂದ ಏಳುವ ಪ್ರಶ್ನೆಗಳು ಹಾಗೂ ಆ ಪ್ರಶ್ನೆಗಳಿಗೆ ಆಕರ್ಷಕವಾಗಿ, ಸಾಮಾನ್ಯಜ್ಞಾನಕ್ಕೆ ಸೋಜಿಗ ಎನಿಸಬಹುದಾದ ಅರ್ಥೈಸುವಿಕೆಗಳು ವಿಜ್ಞಾನವನ್ನು ‘ಸರ್ವಾಂತರ್ಯಾಮಿ’ ಆಗಿಸಬಲ್ಲವು. ಅಂತಹ ಅನುಭವದ ಪ್ರಶ್ನೆಗಳನ್ನು ಆಧರಿಸಿ, ‘ದಿ ಟರ್ನಿಂಗ್ ಪಾಯಿಂಟ್’ ಕಾರ್ಯಕ್ರಮದಲ್ಲಿನ ನಿರೂಪಕರ ಪೈಕಿ ಒಬ್ಬರಾದ ಪಾರ್ಥ ಘೋಷ್ ಅವರು ‘ಸ್ಟಾರ್ಮ್ ಓವರ್ ಎ ಟೀ ಕಫ್’ ಎಂಬ ಕೃತಿ ರಚಿಸಿದ್ದಾರೆ. ಆಸಕ್ತರು ಓದಬಹುದು.</p>.<p>ವಿಜ್ಞಾನದ ವಿದ್ಯಾರ್ಥಿಗಳು, ಅಧ್ಯಾಪಕರು ಸಹಭಾಗಿಯಾಗಿ ವಿಜ್ಞಾನವನ್ನು ಸವಿಯ ಬೇಕಾದರೆ, ಅದರ ಕಲಿಕೆ ಆನಂದಾನುಭವದ ಆಕರವಾಗಬೇಕಾದರೆ ಈ ಮಾದರಿಯನ್ನು ಅನುಸರಿಸಬಹುದಾದಂತಹ ಒಂದು ಉದಾಹರಣೆಯನ್ನು ಗಮನಿಸಿ: ವೇಗವಾಗಿ ಕಾರು ಚಲಿಸುವಾಗ ಮಳೆ ನಿಂತಿದ್ದರೂ ಕಾರಿನ ಗಾಜಿನ ಮೇಲೆ ನೀರಿನ ಹನಿಗಳು ರೂಪುಗೊಳ್ಳಲು ಕಾರಣವೇನೆಂದರೆ, ವಾಹನವು ಗಾಳಿಯ ಪದರವನ್ನು ಒತ್ತಿ ಗಾಳಿಯಲ್ಲಿರುವ ತೇವಾಂಶವನ್ನು ಪರ್ಯಾಪ್ತಗೊಳಿಸುವುದು.</p>.<p>ದ್ವಿಚಕ್ರ ವಾಹನದಲ್ಲಿ ಸಾಗುವಾಗಲೂ ‘ಮಳೆ ಇಲ್ಲದೆ’ ತೇವವಾಗುವ ಈ ವಿದ್ಯಮಾನ ಕಂಡು ಬರುತ್ತದೆ. ಮಳೆ ಬರುವಾಗ ಕೊಠಡಿಯೊಂದರ ಗಾಜಿನ ಮೇಲೆ ಮೋಡದ ರೀತಿಯ ರಚನೆಯುಂಟಾಗಿ ಗಾಜು ತನ್ನ ಪಾರದರ್ಶಕತೆಯನ್ನು ಕಳೆದುಕೊಳ್ಳುವುದು – ಈ ಮುನ್ನ ಹೇಳಿದ ಹಾಗೆ ಗಾಜಿನ ಹೊರ ಮೇಲ್ಮೈ ಮೇಲೆ ಅಲ್ಲ, ಗಾಜಿನ ಒಳ ಮೇಲ್ಮೈಯಲ್ಲಿ. ಇಲ್ಲಿ ಈ ರಚನೆ ಉಂಟಾದದ್ದು ಕೊಠಡಿಯಲ್ಲಿರುವ ಮಂದಿಯ ನಿಃಶ್ವಾಸದ ಗಾಳಿಯ ತೇವಾಂಶವು ಮುಚ್ಚಿದ ಕಿಟಕಿಯ ಗಾಜಿನವರೆಗೆ ತಲುಪಿ ತಂಪುಗೊಂಡು ಮೋಡದ ರಚನೆ ಆಗುವುದು.</p>.<p>ಪ್ರೊ. ಯಶ್ ಪಾಲ್ ಅವರು ನಮ್ಮೊಂದಿಗಿಲ್ಲ. ಆದರೆ ಅವರಿಂದ ಸ್ಫೂರ್ತಿಗೊಂಡು ಅನುಭಾವಾನ್ವೇಷಣೆಯ ಆನಂದ ಹವ್ಯಾಸ ಮಾಡಿಸಬಲ್ಲ ಅನೇಕರು ಇದ್ದಾರೆ. ಅವರಿಗೆ ನುಡಿ ನಮನ ಸಲ್ಲಿಸಿದರೆ ಸಾಲದು, ಆ ಧೋರಣೆ ವ್ಯಾಪಕವಾಗಬೇಕು!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅನುಭವವು ಅರಳಿ ಅಲಂಕರಣಗೊಂಡರೆ ಕಲೆ; ಪ್ರಶ್ನಿಸಿ ಚಿಕಿತ್ಸೆಗೆ ಒಳಪಡಿಸಿದರೆ ಶಾಸ್ತ್ರ. ಅರಿಯದೆ ಸ್ಮರಣೆಯಾದರೆ ಅನಗತ್ಯ ಹೊರೆ. ಈ ಬಗ್ಗೆ ಶಿಕ್ಷಣ ಇಲಾಖೆಯನ್ನು ಎಚ್ಚರಿಸಿದವರು ದಿ. ಯಶ್ ಪಾಲ್. ಅವರು ಹೀಗೆ ಎಚ್ಚರಿಸಿದ ಸಂದರ್ಭವಾದರೂ ಬಂದದ್ದು ಹೇಗೆ?</p>.<p>‘ಮಕ್ಕಳ ಶಾಲಾಕಲಿಕೆ ಹಾಗಿರಲಿ, ಅವರು ಪ್ರತಿದಿನವೂ ಹೊರುವ ಪುಸ್ತಕದ ಚೀಲದ ಹೊರೆ ಇಳಿಸಿ’– ಎಂದು ರಾಜ್ಯಸಭೆಯಲ್ಲಿ ಆರ್. ಕೆ. ನಾರಾಯಣ್ ಅವರು ಪ್ರಶ್ನೆ ಕೇಳಿ ಎಲ್ಲರ ಗಮನವನ್ನು ಸೆಳೆದರು. ಸರ್ಕಾರವು ಈ ಕುರಿತಂತೆ ತನಿಖೆ ನಡೆಸಲು ‘ಯಶ್ ಪಾಲ್ ಸಮಿತಿ’ಯನ್ನು ನೇಮಿಸಿತು. ಪ್ರಶ್ನೆಯನ್ನು ಪರಿಶೀಲಿಸಿ ಪರಿಹಾರವನ್ನು ಸೂಚಿಸುವಂತೆ ಅವರನ್ನು ಕೋರಲಾಯಿತು.</p>.<p>ಯಶ್ ಪಾಲ್ ಅವರು ಅಧ್ಯಯನ ನಡೆಸಿ ತಮ್ಮ ವರದಿ ನೀಡಿದರು. ಸಾರಾಂಶ ಸಂಕ್ಷೇಪವಾಗಿ ಇದು: ಪುಸ್ತಕ ಆಧಿಕ್ಯದ ಹೊರೆ ಇರುವುದು ಖಾಸಗಿ ಶಾಲೆಗಳಲ್ಲಿ ಮಾತ್ರ. ಆದರೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳೆರಡರಲ್ಲೂ ಇರುವ ಇನ್ನೊಂದು ಹೊರೆ – ಮಾನಸಿಕ ಹೊರೆ. ಅದೆಂದರೆ ಅರ್ಥವಾಗದ ವಾಕ್ಯಗಳನ್ನು ಯಾಂತ್ರಿಕವಾಗಿ, ಪರೀಕ್ಷೆಗೆ ಉಪಯುಕ್ತ ಆಗುವ ಹಾಗೆ ನೆನಪಿಟ್ಟುಕೊಳ್ಳಬೇಕಾದ ಹೊರೆ. ಅತ್ಯಂತ ಜಾಣನೆನಿಸಿಕೊಂಡ ಅಂಕಿ ಗಳಿಸಿದ ಹುಡುಗ–ಹುಡುಗಿ ಯಾರೂ ಈ ಹೊರೆಯಿಂದ ಹೊರತಾಗಿಲ್ಲ. ಕಲಿಕೆಯನ್ನೆ ಅವರು ಆನಂದಿಸುತ್ತಿಲ್ಲ.<br /> ಇದಕ್ಕೆ ಪರಿಹಾರವೆಂದರೆ ಕಲಿಕೆಯನ್ನು ರೋಚಕ ಅನುಭವವಾಗಿಸುವುದು ಇದಕ್ಕೆ ಪ್ರೊ. ಯಶ್ ಪಾಲ್ ನೀಡಿದ ಘೋಷನುಡಿ. ‘ಕಲಿಕೆಯ ಆನಂದ’ (Joy of Learning).</p>.<p>ವಿಷಯತಜ್ಞರೂ ವಾದಪ್ರವೀಣರೂ ಆಗಿದ್ದ ಪ್ರೊ. ಯಶ್ ಪಾಲ್ ಅವರೊಡನೆ ಚರ್ಚೆ ಮಾಡುವ ಭಾಗ್ಯ ಪ್ರಸ್ತುತ ಲೇಖಕನಿಗೆ ದೊರಕಿತ್ತು. ಆಗ ಅವರು ತಮ್ಮ ವರದಿಯ ಬಗ್ಗೆ ಪ್ರಸ್ತಾಪಿಸಿ, ಈ ಕುರಿತು ಈಗಾಗಲೇ ಪರಿಹಾರ ಕ್ರಮಗಳನ್ನು ಆಲೋಚಿಸಿ ಜಾರಿಗೆ ತರುವ ಪ್ರಯತ್ನ ಮಾಡಿದುದಾಗಿ ಹೇಳಿದರು.</p>.<p>ವಿಜ್ಞಾನದ ಪರಿಕಲ್ಪನೆಗಳನ್ನು ಅನುಭವವೇದ್ಯವಾಗಿಸಿದಾಗ ಆಗುವ ರೋಚಕ ಅನುಭವವನ್ನು ಶ್ರೀಸಾಮಾನ್ಯರಿಗೂ ತಂದುಕೊಡುತ್ತಿದ್ದ ದೂರದರ್ಶನ ಕಾರ್ಯಕ್ರಮ – ‘ದಿ ಟರ್ನಿಂಗ್ ಪಾಯಿಂಟ್’. ಅದರ ವಿಶೇಷವೆಂದರೆ ವಿಜ್ಞಾನದ ಪ್ರಶ್ನೆಗಳನ್ನು ಅತ್ಯಂತ ಪರಿಚಿತ ನಿತ್ಯಾನುಭವ ಆಧರಿಸಿದ ಪ್ರಶ್ನೆಗಳನ್ನು ಕೈಗೆತ್ತಿಕೊಂಡು ಉತ್ತರವನ್ನು ಹುಡುಕುವ ಪ್ರಯತ್ನಕ್ಕೆ ತೊಡಗುತ್ತಿದ್ದುದು ಜನರ ಕೌತುಕವನ್ನು ತಣಿಸುತ್ತಿತ್ತು.</p>.<p>ಇದುವರೆಗೆ ಪರಿಣತರು ತಮ್ಮ ಪರಿಕಲ್ಪನೆಗೆ ಪೂರಕವಾದ ಪ್ರಶ್ನೆಗಳಿಗೆ ಉತ್ತರವನ್ನು ಹೇಳುತ್ತಿದ್ದರು. ಅದು ಜೀವನಕ್ಕೆ ಅನೇಕ ಬಾರಿ ಅಪ್ರಸ್ತುತ ಎನಿಸುತ್ತಿದ್ದುದೂ ಉಂಟು. ಆದರೆ ಈ ವಿಧಾನ ಹಾಗಲ್ಲ. ಅಜ್ಞರು ಕೇಳುವ ಪ್ರಶ್ನೆಗೆ ತಜ್ಞರು ಉತ್ತರ ಹೇಳಿ ಅಜ್ಞ–ತಜ್ಞರ ಬಾಂಧವ್ಯವನ್ನು ಬೆಸೆಯುವುದು ಹಾಗೂ ವಿಜ್ಞಾನದ ಸಾಮಾಜೀಕರಣ ಆಗುವುದು. ಇದಕ್ಕೆ ಮಾದರಿಯಾಗಿ ಉದಾಹರಿಸಬಲ್ಲ ಎರಡು ಪ್ರಶ್ನೆಗಳು.</p>.<p>1. ಇಸ್ತ್ರಿ ಮಾಡುವಾಗ ಇಸ್ತ್ರಿಪೆಟ್ಟಿಗೆ, ನೀರು, ಬಿಸಿ ಇವುಗಳ ಪಾತ್ರವೇನು? ಇಸ್ತ್ರಿಯ ದಕ್ಷತೆಯನ್ನು ಹೆಚ್ಚಿಸಲು ಈ ಕ್ರಮ ಹೇಗೆ ಉಪಯುಕ್ತವಾಗಿದೆ?</p>.<p>2) ಷೂ ಪಾಲಿಷ್ ಹಾಕುವಾಗ ಪಾಲಿಷ್ನಲ್ಲಿ, ಷೂನಲ್ಲಿ ಇರದ ಹೊಳಪು ಪಾಲಿಷ್ ಅನ್ನು ಷೂಗೆ ಸವರಿ ಉಜ್ಜಿದ ಮೇಲೆ ಬರುವುದಾದರೂ ಹೇಗೆ?<br /> ಇಲ್ಲಿಯ ಘಟಕಗಳು ಕ್ರಿಯೆ ಇವುಗಳ ಮಹತ್ವ, ಬಳಕೆಯ ತತ್ತ್ವ ಯಾವುದು?<br /> ಇಂತಹ ಪ್ರಶ್ನೆಗಳು ದೈನಂದಿನ ವಿದ್ಯಮಾನಗಳಲ್ಲಿ ಅಂತರ್ಗತವಾಗಿರುವ ವಿಜ್ಞಾನವನ್ನು ಅರಿಯಲು ಹಾಗೂ ನಿತ್ಯದ ಕೆಲಸಗಳನ್ನು ಚಿಕಿತ್ಸಾತ್ಮಕವಾಗಿ ಅರಿಯಲು ಪ್ರಶ್ನೆ ಕೇಳುವ ಪ್ರವೃತ್ತಿಯನ್ನು ರೂಢಿಸಿಕೊಳ್ಳಲು ಸಹಾಯಕ. ಸೂಕ್ಷ್ಮ ವೀಕ್ಷಣೆಯಿಂದ ಏಳುವ ಪ್ರಶ್ನೆಗಳು ಹಾಗೂ ಆ ಪ್ರಶ್ನೆಗಳಿಗೆ ಆಕರ್ಷಕವಾಗಿ, ಸಾಮಾನ್ಯಜ್ಞಾನಕ್ಕೆ ಸೋಜಿಗ ಎನಿಸಬಹುದಾದ ಅರ್ಥೈಸುವಿಕೆಗಳು ವಿಜ್ಞಾನವನ್ನು ‘ಸರ್ವಾಂತರ್ಯಾಮಿ’ ಆಗಿಸಬಲ್ಲವು. ಅಂತಹ ಅನುಭವದ ಪ್ರಶ್ನೆಗಳನ್ನು ಆಧರಿಸಿ, ‘ದಿ ಟರ್ನಿಂಗ್ ಪಾಯಿಂಟ್’ ಕಾರ್ಯಕ್ರಮದಲ್ಲಿನ ನಿರೂಪಕರ ಪೈಕಿ ಒಬ್ಬರಾದ ಪಾರ್ಥ ಘೋಷ್ ಅವರು ‘ಸ್ಟಾರ್ಮ್ ಓವರ್ ಎ ಟೀ ಕಫ್’ ಎಂಬ ಕೃತಿ ರಚಿಸಿದ್ದಾರೆ. ಆಸಕ್ತರು ಓದಬಹುದು.</p>.<p>ವಿಜ್ಞಾನದ ವಿದ್ಯಾರ್ಥಿಗಳು, ಅಧ್ಯಾಪಕರು ಸಹಭಾಗಿಯಾಗಿ ವಿಜ್ಞಾನವನ್ನು ಸವಿಯ ಬೇಕಾದರೆ, ಅದರ ಕಲಿಕೆ ಆನಂದಾನುಭವದ ಆಕರವಾಗಬೇಕಾದರೆ ಈ ಮಾದರಿಯನ್ನು ಅನುಸರಿಸಬಹುದಾದಂತಹ ಒಂದು ಉದಾಹರಣೆಯನ್ನು ಗಮನಿಸಿ: ವೇಗವಾಗಿ ಕಾರು ಚಲಿಸುವಾಗ ಮಳೆ ನಿಂತಿದ್ದರೂ ಕಾರಿನ ಗಾಜಿನ ಮೇಲೆ ನೀರಿನ ಹನಿಗಳು ರೂಪುಗೊಳ್ಳಲು ಕಾರಣವೇನೆಂದರೆ, ವಾಹನವು ಗಾಳಿಯ ಪದರವನ್ನು ಒತ್ತಿ ಗಾಳಿಯಲ್ಲಿರುವ ತೇವಾಂಶವನ್ನು ಪರ್ಯಾಪ್ತಗೊಳಿಸುವುದು.</p>.<p>ದ್ವಿಚಕ್ರ ವಾಹನದಲ್ಲಿ ಸಾಗುವಾಗಲೂ ‘ಮಳೆ ಇಲ್ಲದೆ’ ತೇವವಾಗುವ ಈ ವಿದ್ಯಮಾನ ಕಂಡು ಬರುತ್ತದೆ. ಮಳೆ ಬರುವಾಗ ಕೊಠಡಿಯೊಂದರ ಗಾಜಿನ ಮೇಲೆ ಮೋಡದ ರೀತಿಯ ರಚನೆಯುಂಟಾಗಿ ಗಾಜು ತನ್ನ ಪಾರದರ್ಶಕತೆಯನ್ನು ಕಳೆದುಕೊಳ್ಳುವುದು – ಈ ಮುನ್ನ ಹೇಳಿದ ಹಾಗೆ ಗಾಜಿನ ಹೊರ ಮೇಲ್ಮೈ ಮೇಲೆ ಅಲ್ಲ, ಗಾಜಿನ ಒಳ ಮೇಲ್ಮೈಯಲ್ಲಿ. ಇಲ್ಲಿ ಈ ರಚನೆ ಉಂಟಾದದ್ದು ಕೊಠಡಿಯಲ್ಲಿರುವ ಮಂದಿಯ ನಿಃಶ್ವಾಸದ ಗಾಳಿಯ ತೇವಾಂಶವು ಮುಚ್ಚಿದ ಕಿಟಕಿಯ ಗಾಜಿನವರೆಗೆ ತಲುಪಿ ತಂಪುಗೊಂಡು ಮೋಡದ ರಚನೆ ಆಗುವುದು.</p>.<p>ಪ್ರೊ. ಯಶ್ ಪಾಲ್ ಅವರು ನಮ್ಮೊಂದಿಗಿಲ್ಲ. ಆದರೆ ಅವರಿಂದ ಸ್ಫೂರ್ತಿಗೊಂಡು ಅನುಭಾವಾನ್ವೇಷಣೆಯ ಆನಂದ ಹವ್ಯಾಸ ಮಾಡಿಸಬಲ್ಲ ಅನೇಕರು ಇದ್ದಾರೆ. ಅವರಿಗೆ ನುಡಿ ನಮನ ಸಲ್ಲಿಸಿದರೆ ಸಾಲದು, ಆ ಧೋರಣೆ ವ್ಯಾಪಕವಾಗಬೇಕು!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>