‘ಏಕರೂಪದ ಪಠ್ಯದ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವಲ್ಲಿಯೇ ತಪ್ಪಾಗಿದೆ. ಇದು ಬಹುರೂಪಿ ವ್ಯವಸ್ಥೆಯಲ್ಲಿನ ಸಾರವನ್ನು ಸಂಗ್ರಹಿಸಿ ಆಯ್ಕೆಯ ಅವಕಾಶ ಕಲ್ಪಿಸುವ ಪ್ರಯತ್ನ. ಒಬ್ಬರೋ, ಇಬ್ಬರೋ ಸಮಿತಿಯಲ್ಲಿ ಸೇರಿಕೊಳ್ಳದಿದ್ದರೆ ಏನೂ ಆಗುವುದಿಲ್ಲ. ಆಸಕ್ತ ಇತರ ತಜ್ಞರನ್ನು ಸೇರಿಸಿಕೊಂಡು ಯೋಜನೆ ಪೂರ್ಣಗೊಳಿಸಲಾಗುವುದು‘ ಎಂದು ಕುಲಪತಿ ಡಾ.ಸಿದ್ದೇಗೌಡ ಪ್ರತಿಕ್ರಿಯಿಸಿದರು.