<p><strong>ಶ್ರವಣಬೆಳಗೊಳ: </strong>ತ್ಯಾಗಮೂರ್ತಿ ಬಾಹುಬಲಿಯ 88ನೇ ಮಹಾಮಸ್ತಕಾಭಿಷೇಕದ ಪೂರ್ವಭಾವಿಯಾಗಿ ಆಚರಿಸುವ ಪಂಚಕಲ್ಯಾಣ ಧಾರ್ಮಿಕ ವಿಧಿ, ವಿಧಾನಗಳಿಗೆ ಸಂಸ್ಕಾರ ಮಂಟಪದಲ್ಲಿ ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಗುರುವಾರ ಚಾಲನೆ ನೀಡಲಾಯಿತು.</p>.<p>ಬೆಳಿಗ್ಗೆ ಸುಪ್ರಭಾತ, ಜಪಾನುಷ್ಠಾನ, ಜಿನಾಭಿಷೇಕ, ಆರಾಧನೆಗಳು ಸಂಸ್ಕಾರ ಮಂಟಪದಲ್ಲಿ ನೆರವೇರಿದವು. ಇಂದ್ರ ಇಂದ್ರಾಣಿ ಪದವೀಧಾರಕರು, ಅಷ್ಟಕನ್ನಿಕೆಯರು ಮತ್ತು ಚಪ್ಪನ್ ಕನ್ನಿಕೆಯರು ಪೂಜಾ ವಿಧಿ–ವಿಧಾನಗಳಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ ಪಂಚಕಲ್ಯಾಣದ ವಿಧಿಯ ಮಂಡಲ ರಚನೆ ಮಾಡಿ, ಗರ್ಭ ಸಂಸ್ಕಾರ ಕ್ರಿಯೆಯ ಪೂಜಾ ವಿಧಿ ನೆರವೇರಿಸಲಾಯಿತು.</p>.<p>ನಂತರ ತೀರ್ಥಂಕರರ ತಾಯಿ ಮರುದೇವಿ ಕಾಣುವ 16 ಸ್ವಪ್ನಗಳ ದೃಶ್ಯಾವಳಿ, ಸೀಮಂತ ಕಾರ್ಯದ ವಿಧಿಗಳು, ಕುಬೇರನಿಂದ ರತ್ನವೃಷ್ಟಿ, ರಾಜಭವನದ ಉದ್ಘಾಟನೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳು ವೈಭವಯುತವಾಗಿ ನೆರವೇರಿದವು.</p>.<p>ಕಾರ್ಯಕ್ರಮಕ್ಕೂ ಮೊದಲು ಗರ್ಭ ಕಲ್ಯಾಣದ ಪ್ರಯುಕ್ತ ಭವ್ಯ ಮೆರವಣಿಗೆ ನಡೆಯಿತು. ವರ್ಧಮಾನ ಸಾಗರ ಮಹಾರಾಜರು, ಆಚಾರ್ಯರು ಹಾಗೂ ಸಂಘಸ್ಥ ತ್ಯಾಗಿಗಳು ಸಾನ್ನಿಧ್ಯ ವಹಿಸಿದ್ದರು.</p>.<p>ಪೂಜಾ ಕಾರ್ಯಗಳ ನೇತೃತ್ವವನ್ನು ಪ್ರತಿಷ್ಠಾಚಾರ್ಯರಾದ ಡಿ.ಪಾರ್ಶ್ವನಾಥ ಶಾಸ್ತ್ರಿ, ಎಸ್.ಪಿ.ಉದಯಕುಮಾರ್ ಶಾಸ್ತ್ರಿ, ಎಸ್.ಡಿ.ನಂದಕುಮಾರ್ ಮತ್ತು ತಂಡದವರು ವಹಿಸಿದ್ದರು.</p>.<p>ಪಟ್ಟಣದಲ್ಲಿ ₹ 3.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಬಸ್ ನಿಲ್ದಾಣವನ್ನು ಸಚಿವ ಎ.ಮಂಜು ಮತ್ತು ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾರ್ವಜನಿಕರ ಸೇವೆಗೆ ಸಮರ್ಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರವಣಬೆಳಗೊಳ: </strong>ತ್ಯಾಗಮೂರ್ತಿ ಬಾಹುಬಲಿಯ 88ನೇ ಮಹಾಮಸ್ತಕಾಭಿಷೇಕದ ಪೂರ್ವಭಾವಿಯಾಗಿ ಆಚರಿಸುವ ಪಂಚಕಲ್ಯಾಣ ಧಾರ್ಮಿಕ ವಿಧಿ, ವಿಧಾನಗಳಿಗೆ ಸಂಸ್ಕಾರ ಮಂಟಪದಲ್ಲಿ ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಗುರುವಾರ ಚಾಲನೆ ನೀಡಲಾಯಿತು.</p>.<p>ಬೆಳಿಗ್ಗೆ ಸುಪ್ರಭಾತ, ಜಪಾನುಷ್ಠಾನ, ಜಿನಾಭಿಷೇಕ, ಆರಾಧನೆಗಳು ಸಂಸ್ಕಾರ ಮಂಟಪದಲ್ಲಿ ನೆರವೇರಿದವು. ಇಂದ್ರ ಇಂದ್ರಾಣಿ ಪದವೀಧಾರಕರು, ಅಷ್ಟಕನ್ನಿಕೆಯರು ಮತ್ತು ಚಪ್ಪನ್ ಕನ್ನಿಕೆಯರು ಪೂಜಾ ವಿಧಿ–ವಿಧಾನಗಳಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ ಪಂಚಕಲ್ಯಾಣದ ವಿಧಿಯ ಮಂಡಲ ರಚನೆ ಮಾಡಿ, ಗರ್ಭ ಸಂಸ್ಕಾರ ಕ್ರಿಯೆಯ ಪೂಜಾ ವಿಧಿ ನೆರವೇರಿಸಲಾಯಿತು.</p>.<p>ನಂತರ ತೀರ್ಥಂಕರರ ತಾಯಿ ಮರುದೇವಿ ಕಾಣುವ 16 ಸ್ವಪ್ನಗಳ ದೃಶ್ಯಾವಳಿ, ಸೀಮಂತ ಕಾರ್ಯದ ವಿಧಿಗಳು, ಕುಬೇರನಿಂದ ರತ್ನವೃಷ್ಟಿ, ರಾಜಭವನದ ಉದ್ಘಾಟನೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳು ವೈಭವಯುತವಾಗಿ ನೆರವೇರಿದವು.</p>.<p>ಕಾರ್ಯಕ್ರಮಕ್ಕೂ ಮೊದಲು ಗರ್ಭ ಕಲ್ಯಾಣದ ಪ್ರಯುಕ್ತ ಭವ್ಯ ಮೆರವಣಿಗೆ ನಡೆಯಿತು. ವರ್ಧಮಾನ ಸಾಗರ ಮಹಾರಾಜರು, ಆಚಾರ್ಯರು ಹಾಗೂ ಸಂಘಸ್ಥ ತ್ಯಾಗಿಗಳು ಸಾನ್ನಿಧ್ಯ ವಹಿಸಿದ್ದರು.</p>.<p>ಪೂಜಾ ಕಾರ್ಯಗಳ ನೇತೃತ್ವವನ್ನು ಪ್ರತಿಷ್ಠಾಚಾರ್ಯರಾದ ಡಿ.ಪಾರ್ಶ್ವನಾಥ ಶಾಸ್ತ್ರಿ, ಎಸ್.ಪಿ.ಉದಯಕುಮಾರ್ ಶಾಸ್ತ್ರಿ, ಎಸ್.ಡಿ.ನಂದಕುಮಾರ್ ಮತ್ತು ತಂಡದವರು ವಹಿಸಿದ್ದರು.</p>.<p>ಪಟ್ಟಣದಲ್ಲಿ ₹ 3.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಬಸ್ ನಿಲ್ದಾಣವನ್ನು ಸಚಿವ ಎ.ಮಂಜು ಮತ್ತು ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾರ್ವಜನಿಕರ ಸೇವೆಗೆ ಸಮರ್ಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>