‘ಕೇರಳ ಯೋಜನೆಯ ಬಗ್ಗೆ ಪತ್ರಿಕೆಯಲ್ಲಿ ಓದಿದ್ದೆವು. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಗ್ರಾಮದ ಇಂದ್ರಪ್ರಸ್ಥ ಎಂಬ ಖಾಸಗಿ ಶಾಲೆಯಲ್ಲಿ ಇದನ್ನು ಅಳವಡಿಸಿರುವ ಮಾಹಿತಿ ಲಭಿಸಿತು. ಸರ್ಕಾರಿ ಶಾಲೆಯಲ್ಲಿ ಯಾಕೆ ಇದನ್ನು ಅಳವಡಿಸಿಕೊಳ್ಳಬಾರದು ಎಂದು ಯೋಜನೆ ರೂಪಿಸಿ, ಇದನ್ನು ಜಾರಿಗೆ ತಂದಿದ್ದೇವೆ’ ಎಂದು ಸಿಬ್ಬಂದಿ ಲಲಿತಾ ದಾಸರ, ಗ್ಯಾನಪ್ಪ ಡೊಣ್ಣಿ, ಜರೀನಾ ರಿಸಲ್ದಾರ, ರವಿ ಪಡೆಸೂರ ತಿಳಿಸಿದರು.