ಬಿಎಸ್ವೈಗೆ ವಿಶ್ರಾಂತಿ: ‘ದೇಶದಲ್ಲಿ ರಥಯಾತ್ರೆಯ ಮೂಲಕ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾ ಭಾರತಿಯಂತಹ ದಿಗ್ಗಜರನ್ನು ನರೇಂದ್ರ ಮೋದಿ ಮತ್ತು ಅಮಿತ್ ಶಾ ಮೂಲೆಗೆ ತಳ್ಳಿ ವಿಶ್ರಾಂತಿ ನೀಡಿದ್ದಾರೆ. ಈ ಚುನಾವಣೆ ಬಳಿಕ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೂ ವಿಶ್ರಾಂತಿಯ ಸೂಚನೆ ಬರಲಿದೆ’ ಎಂದು ಹೇಳಿದರು.