<p><strong>ಬೆಂಗಳೂರು:</strong> ‘ಹೌದು, ನನಗೀಗ 76 ವರ್ಷ. ಆದರೆ, ನನ್ನ ಕೈ–ಕಾಲುಗಳು ಇನ್ನೂ ಗಟ್ಟಿಯಾಗಿವೆ. ಮುಂದಿನ ಚುನಾವಣೆಯಲ್ಲೂ ನಾನು ಸ್ಪರ್ಧಿಸುತ್ತೇನೆ. ಈ ವಿಷಯವನ್ನು ನಿಮ್ಮ ಮೂಲಕ ರಾಜ್ಯದ ಜನರಿಗೂ ತಿಳಿಸಲು ಬಯಸುತ್ತೇನೆ’</p>.<p>‘ರಾಜಕಾರಣಿಗಳಿಗೆ 75 ವರ್ಷಗಳಾದ ಬಳಿಕ ನಿವೃತ್ತಿ ಬೇಕು ಎನ್ನುವ ಜನಾಭಿಪ್ರಾಯ ಇದೆ. ನಿಮಗೂ ವಯಸ್ಸಾಯ್ತಲ್ಲ’ ಎಂಬ ಪ್ರಶ್ನೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಕೊಟ್ಟ ನೇರ ಉತ್ತರವಿದು.</p>.<p><strong>ಇದನ್ನೂ ಓದಿ:<a href="https://www.prajavani.net/stories/stateregional/b-s-yeddyurappa-interview-622625.html" target="_blank">ಜೆಡಿಎಸ್ ಜತೆ ಎಂದಿಗೂ ಕೈ ಜೋಡಿಸಲ್ಲ: ಯಡಿಯೂರಪ್ಪ</a></strong></p>.<p>‘ಪ್ರಜಾವಾಣಿ’ ಹಾಗೂ ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಿಂದ ಬುಧವಾರ ಏರ್ಪಡಿಸಿದ್ದ ಮುಕ್ತ ಸಂವಾದದಲ್ಲಿ ಪಾಲ್ಗೊಂಡ ಅವರು, ‘ರಾಜಕಾರಣಕ್ಕೆ ವಯಸ್ಸೇನೂ ಭಾರವಲ್ಲ’ ಎಂದು ಸ್ಪಷ್ಟವಾಗಿ ಹೇಳಿದರು.</p>.<p>‘ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಕನಸೂ ಇದೆಯೇ’ ಎಂದು ಕೆಣಕಿದಾಗ, ‘ಮುಖ್ಯಮಂತ್ರಿ ಆಗುವೆನೋ ಇಲ್ಲವೋ ಚುನಾವಣೆಗಂತೂ ಸ್ಪರ್ಧಿಸುವೆ. ಜನರ ಆಶೀರ್ವಾದ ಸಿಕ್ಕರೆ ಆ ಹುದ್ದೆಗೂ ಏರುತ್ತೇನೆ’ ಎಂದು ಉತ್ತರಿಸಿದರು.</p>.<p>‘ವಯಸ್ಸು 75, 76, 77 ಎಷ್ಟೇ ಆಗಿರಲಿ, ಆ ಅನುಭವ ದೇಶದ ಹಿತಕ್ಕೆ ಬಳಕೆಯಾಗುತ್ತದೆ’ ಎಂದರು.</p>.<p>‘ನಿಮ್ಮನ್ನು ರಾಜ್ಯಪಾಲರನ್ನಾಗಿ ಮಾಡಿದರೇ’ ಎಂಬ ಪ್ರಶ್ನೆ ಯಡಿಯೂರಪ್ಪ ಅವರನ್ನು ತುಸು ಕೆರಳಿಸಿತು.</p>.<p>‘ಈ ಜನ್ಮದಲ್ಲಿ ಅಂತಹ ಕೆಲಸ ಮಾಡುವುದಿಲ್ಲ. ಯಾವ ರಾಜ್ಯಕ್ಕೂ ರಾಜ್ಯಪಾಲನಾಗಿ ಹೋಗುವುದಿಲ್ಲ. ರಾಜ್ಯದ ಅಭಿವೃದ್ಧಿಯೇ ನನಗೆ ಮುಖ್ಯ. ಇಲ್ಲಿಯೇ ಇದ್ದು ರೈತರ ಪರಹೋರಾಡುವೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಹೌದು, ನನಗೀಗ 76 ವರ್ಷ. ಆದರೆ, ನನ್ನ ಕೈ–ಕಾಲುಗಳು ಇನ್ನೂ ಗಟ್ಟಿಯಾಗಿವೆ. ಮುಂದಿನ ಚುನಾವಣೆಯಲ್ಲೂ ನಾನು ಸ್ಪರ್ಧಿಸುತ್ತೇನೆ. ಈ ವಿಷಯವನ್ನು ನಿಮ್ಮ ಮೂಲಕ ರಾಜ್ಯದ ಜನರಿಗೂ ತಿಳಿಸಲು ಬಯಸುತ್ತೇನೆ’</p>.<p>‘ರಾಜಕಾರಣಿಗಳಿಗೆ 75 ವರ್ಷಗಳಾದ ಬಳಿಕ ನಿವೃತ್ತಿ ಬೇಕು ಎನ್ನುವ ಜನಾಭಿಪ್ರಾಯ ಇದೆ. ನಿಮಗೂ ವಯಸ್ಸಾಯ್ತಲ್ಲ’ ಎಂಬ ಪ್ರಶ್ನೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಕೊಟ್ಟ ನೇರ ಉತ್ತರವಿದು.</p>.<p><strong>ಇದನ್ನೂ ಓದಿ:<a href="https://www.prajavani.net/stories/stateregional/b-s-yeddyurappa-interview-622625.html" target="_blank">ಜೆಡಿಎಸ್ ಜತೆ ಎಂದಿಗೂ ಕೈ ಜೋಡಿಸಲ್ಲ: ಯಡಿಯೂರಪ್ಪ</a></strong></p>.<p>‘ಪ್ರಜಾವಾಣಿ’ ಹಾಗೂ ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಿಂದ ಬುಧವಾರ ಏರ್ಪಡಿಸಿದ್ದ ಮುಕ್ತ ಸಂವಾದದಲ್ಲಿ ಪಾಲ್ಗೊಂಡ ಅವರು, ‘ರಾಜಕಾರಣಕ್ಕೆ ವಯಸ್ಸೇನೂ ಭಾರವಲ್ಲ’ ಎಂದು ಸ್ಪಷ್ಟವಾಗಿ ಹೇಳಿದರು.</p>.<p>‘ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಕನಸೂ ಇದೆಯೇ’ ಎಂದು ಕೆಣಕಿದಾಗ, ‘ಮುಖ್ಯಮಂತ್ರಿ ಆಗುವೆನೋ ಇಲ್ಲವೋ ಚುನಾವಣೆಗಂತೂ ಸ್ಪರ್ಧಿಸುವೆ. ಜನರ ಆಶೀರ್ವಾದ ಸಿಕ್ಕರೆ ಆ ಹುದ್ದೆಗೂ ಏರುತ್ತೇನೆ’ ಎಂದು ಉತ್ತರಿಸಿದರು.</p>.<p>‘ವಯಸ್ಸು 75, 76, 77 ಎಷ್ಟೇ ಆಗಿರಲಿ, ಆ ಅನುಭವ ದೇಶದ ಹಿತಕ್ಕೆ ಬಳಕೆಯಾಗುತ್ತದೆ’ ಎಂದರು.</p>.<p>‘ನಿಮ್ಮನ್ನು ರಾಜ್ಯಪಾಲರನ್ನಾಗಿ ಮಾಡಿದರೇ’ ಎಂಬ ಪ್ರಶ್ನೆ ಯಡಿಯೂರಪ್ಪ ಅವರನ್ನು ತುಸು ಕೆರಳಿಸಿತು.</p>.<p>‘ಈ ಜನ್ಮದಲ್ಲಿ ಅಂತಹ ಕೆಲಸ ಮಾಡುವುದಿಲ್ಲ. ಯಾವ ರಾಜ್ಯಕ್ಕೂ ರಾಜ್ಯಪಾಲನಾಗಿ ಹೋಗುವುದಿಲ್ಲ. ರಾಜ್ಯದ ಅಭಿವೃದ್ಧಿಯೇ ನನಗೆ ಮುಖ್ಯ. ಇಲ್ಲಿಯೇ ಇದ್ದು ರೈತರ ಪರಹೋರಾಡುವೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>