ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಭೋವಿ ಸಮು
ದಾಯಕ್ಕೆ ಟಿಕೆಟ್ ನೀಡಬೇಕು. ಚಿತ್ರದುರ್ಗ ಹಾಗೂ ಕೋಲಾರದಲ್ಲಿ ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆಯನ್ನು ಬಿಜೆಪಿ ಎದುರು ಇಟ್ಟಿದ್ದೇವೆ. ಒಂದು ಕ್ಷೇತ್ರದಲ್ಲೂ ಅವಕಾಶ ಕಲ್ಪಿಸದೇ ಇದ್ದರೆ ಮತದಾನದ ಸಂದರ್ಭದಲ್ಲಿ ಎದುರಾಗಬಹುದಾದ ತೊಂದರೆಗಳಿಗೆ ಬಿಜೆಪಿಯೇ ಹೊಣೆ ಹೊರಬೇಕಾದೀತು’ ಎಂದರು.