ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls | ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಔರಂಗಜೇಬನ ಆಡಳಿತ: ಯೋಗಿ ಆದಿತ್ಯನಾಥ್

Published 4 ಮೇ 2024, 12:48 IST
Last Updated 4 ಮೇ 2024, 12:48 IST
ಅಕ್ಷರ ಗಾತ್ರ

ಭೋಪಾಲ್: ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಮೊಘಲ್ ದೊರೆ ಔರಂಗಜೇಬನ ರೀತಿಯಲ್ಲಿ ಕ್ರೂರ ಆಡಳಿತ ನಡೆಸಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಆರೋಪಿಸಿದರು.

ಬಿಜೆಪಿ ಅಭ್ಯರ್ಥಿ ಜ್ಯೋತಿರಾದಿತ್ಯ ಸಿಂಧಿಯಾ ಪರ ಪ್ರಚಾರದಲ್ಲಿ ಪಾಲ್ಗೊಂಡ ಅವರು, ಕಾಂಗ್ರೆಸ್‌ನ ಪ್ರಣಾಳಿಕೆಯು ‘ಜಿಝ್‌ಯಾ’ (ಮಧ್ಯಕಾಲೀನ ಭಾರತದಲ್ಲಿ ಮುಸ್ಲಿಮೇತರರ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆ) ಬಗ್ಗೆ ಮಾತನಾಡುತ್ತದೆ’ ಎಂದು ದೂರಿದರು.

‘ನಿಷ್ಠುರ ಆಡಳಿತ ನಡೆಸಿದ್ದ ಮೊಘಲ್‌ ದೊರೆ ಔರಂಗಜೇಬನ ಬಗ್ಗೆ ನೀವು ಕೇಳಿರಬಹುದು. ಸಭ್ಯ ಮುಸ್ಲಿಂ ಕುಟುಂಬಗಳಲ್ಲಿ ಯಾರೂ ತಮ್ಮ ಮಕ್ಕಳಿಗೆ ಆ ಹೆಸರು ಇಡುವುದಿಲ್ಲ. ಆತ ‘ಜಿಝ್‌ಯಾ’ ವಿಧಿಸಿದ್ದ. ಹಾಗಂದರೆ ಏನು? ಕಾಂಗ್ರೆಸ್‌ ಹೇಳುತ್ತಿರುವ ಪಿತ್ರಾರ್ಜಿತ ಆಸ್ತಿ ತೆರಿಗೆಯೇ ಅದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT