ಮುಂಬೈ: ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ನಾಗಪುರ ಜಿಲ್ಲೆಯ ರಾಮ್ಟೆಕ್ ವಿಧಾನಸಭಾ ಕ್ಷೇತ್ರದ (ಎಸ್ಸಿ ಮೀಸಲು) ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಶ್ಮಿ ಬಾರ್ವೆ ಅವರ ಜಾತಿ ಪ್ರಮಾಣ ಪತ್ರ ಅಸಿಂಧುವಾಗಿದೆ. ಹೀಗಾಗಿ ‘ಡಮ್ಮಿ’ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ರಶ್ಮಿ ಅವರ ಪತಿ ಶ್ಯಾಮರಾವ್ ಬಾರ್ವೆ ಅವರನ್ನೇ ಅಧಿಕೃತ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಘೋಷಿಸಿದೆ.
ಕಾಂಗ್ರೆಸ್ ತ್ಯಜಿಸಿ ಶಿವಸೇನಾ ಸೇರಿದ್ದ ರಾಜು ಪಾರ್ವೆ ಮತ್ತು ಪ್ರಕಾಶ್ ಅಂಬೇಡ್ಕರ್ ಅವರ ‘ವಂಚಿತ್ ಬಹುಜನ ಅಘಾಡಿ’ಯ ಅಭ್ಯರ್ಥಿ ಮಾಜಿ ಐಎಎಸ್ ಅಧಿಕಾರಿ ಕಿಶೋರ್ ಗಜ್ಭಿಯೆ ಕಣದಲ್ಲಿರುವ ಇನ್ನಿಬ್ಬರು ಉಮೇದುವಾರರಾಗಿದ್ದಾರೆ.