ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮದ ಆಧಾರದಲ್ಲಿ ದೇಶ ವಿಭಜಿಸಬೇಡಿ: ಫಾರೂಕ್ ಅಬ್ದುಲ್ಲಾ

Published 1 ಮೇ 2024, 15:50 IST
Last Updated 1 ಮೇ 2024, 15:50 IST
ಅಕ್ಷರ ಗಾತ್ರ

ರಜೌರಿ/ಜಮ್ಮು: ಪ್ರಧಾನಿ ಮೋದಿ ಧರ್ಮದ ಆಧಾರದಲ್ಲಿ ದೇಶ ವಿಭಜಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಮುಸ್ಲಿಮರು ಯಾರ ಹಕ್ಕುಗಳನ್ನೂ ಕಸಿದುಕೊಳ್ಳುವುದಿಲ್ಲ ಎಂದು ಹೇಳಿದರು.

‘ಧರ್ಮದ ಆಧಾರದಲ್ಲಿ ವಿಭಜಿಸುವುದರಿಂದ ಬಿರುಗಾಳಿ ಉಂಟಾಗಿ ದೇಶದ ಅಸ್ತಿತ್ವಕ್ಕೆ ತೊಡಕುಂಟಾಗಲಿದೆ. ಜನರನ್ನು ವಿಭಜಿಸುವುದಕ್ಕಿಂತ ದೇಶವನ್ನು ಒಗ್ಗೂಡಿಸುವ ಬಗ್ಗೆ ಮಾತನಾಡುವುದು ಉತ್ತಮ’ ಎಂದು ತಿಳಿಸಿದರು.

ರಜೌರಿ ಜಿಲ್ಲೆಯ ತನಮಂಡಿಯಲ್ಲಿ ಚುನಾವಣೆ ಪ್ರಚಾರ ನಡೆಸಿದ ಅವರು, ‘ನಾವು ಮುಸ್ಲಿಮರು, ಅಲ್ಲಾ ನಮಗೆ ಇತರ ಧರ್ಮಗಳನ್ನು ಗೌರವಿಸುವಂತೆ ಹೇಳಿದ್ದಾರೆ’ ಎಂದರು. 

‘ಮುಸ್ಲಿಂ ‍ಪ್ರಾಬಲ್ಯದ ಜಮ್ಮು ಮತ್ತು ಕಾಶ್ಮೀರದ ಜನ 1947ರಲ್ಲಿ ಪಾಕಿಸ್ತಾನದ ಬದಲು ಭಾರತವನ್ನು ಆಯ್ಕೆ ಮಾಡಿಕೊಂಡರು. ಏಕೆಂದರೆ ಹಿಂದೂಗಳು, ಮುಸ್ಲಿಮರು, ಸಿಖ್ಖರು, ಬೌದ್ಧರು ಮತ್ತು ಕ್ರಿಶ್ಚಿಯನ್ನರು ಎಲ್ಲರೂ ಭಾರತದ ಸಂವಿಧಾನದ ಪ್ರಕಾರ ಸಮಾನರು’ ಎಂದು ಅಭಿಪ್ರಾಯ ಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT