<p><strong>ಶ್ರೀನಗರ</strong>: ಜಮ್ಮು–ಕಾಶ್ಮೀರದ ಆಡಳಿತ ವ್ಯವಸ್ಥೆ ಮತ್ತು ಪೊಲೀಸರು ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದು, ಅದರ ಫಲವಾಗಿ ‘ಶತ್ರು’ ರಾಷ್ಟ್ರವಾದ ಪಾಕಿಸ್ತಾನದ ಕಣ್ಣು, ಕಿವಿಗಳಂತೆ ಈ ಹಿಂದೆ ಕೆಲಸ ಮಾಡಿದವರು ಕೂಡ ಈ ಬಾರಿ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸ್ ಮಹಾನಿರ್ದೇಶಕ ರಶ್ಮಿ ರಂಜನ್ ಸ್ವೈನ್ ಹೇಳಿದರು.</p>.<p>‘ಪ್ರಾಂತ್ಯದ ಜನರಲ್ಲಿ ಸ್ವಾತಂತ್ರ್ಯದ ಭಾವನೆ ಮೂಡಿದ್ದು, ಭಯ ಕಡಿಮೆಯಾಗಿದೆ. ಅದರಿಂದ ದಾಖಲೆ ಮತದಾನವಾಗಿದ್ದು, ಇಲ್ಲಿನ ರಾಜಕೀಯ ಸ್ವರೂಪದಲ್ಲಿ ಬದಲಾವಣೆ ಆಗಲಿದೆ’ ಎಂದು ಪಿಟಿಐಗೆ ತಿಳಿಸಿದರು.</p>.<p>‘ಹಿಂದೆ ಪಾಕಿಸ್ತಾನದ ನಕಲಿಗಳು, ಏಜೆಂಟರು ಮತ್ತು ಉಗ್ರರು ಚುನಾವಣಾ ಪ್ರಕ್ರಿಯೆಗೆ ನಾನಾ ರೀತಿ ಅಡ್ಡಿಪಡಿಸುತ್ತಿದ್ದರು. ಈ ಬಾರಿ ಪೊಲೀಸರು ಮತ್ತು ಆಡಳಿತ ಯಂತ್ರದ ಬಿಗಿ ಕ್ರಮಗಳಿಂದ ಚುನಾವಣೆ ಸುಸೂತ್ರವಾಗಿ ನಡೆಯಿತು’ ಎಂದರು.</p>.<p>‘ಜತೆಗೆ ನಿಷೇಧಿತ ಜಮಾತ್–ಎ–ಇಸ್ಲಾಮಿ ಸಂಘಟನೆಯು ಈ ಹಿಂದೆ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಜನರ ಮಾಹಿತಿ ಸಂಗ್ರಹಿಸಿ, ನಂತರ ಅವರನ್ನು ಗುರಿ ಮಾಡುತ್ತಿತ್ತು. ಈ ಬಾರಿ ಅದರ ಸದಸ್ಯರೇ ಬಹಿರಂಗವಾಗಿ ಮತದಾನದಲ್ಲಿ ಪಾಲ್ಗೊಂಡಿದ್ದರು. ಇದು ಪ್ರಾಂತ್ಯದ ಜನರ ಮನೋಭಾವದಲ್ಲಿ ಬಹುದೊಡ್ಡ ಬದಲಾವಣೆ ಆಗಿರುವುದನ್ನು ತೋರಿಸುತ್ತದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ</strong>: ಜಮ್ಮು–ಕಾಶ್ಮೀರದ ಆಡಳಿತ ವ್ಯವಸ್ಥೆ ಮತ್ತು ಪೊಲೀಸರು ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದು, ಅದರ ಫಲವಾಗಿ ‘ಶತ್ರು’ ರಾಷ್ಟ್ರವಾದ ಪಾಕಿಸ್ತಾನದ ಕಣ್ಣು, ಕಿವಿಗಳಂತೆ ಈ ಹಿಂದೆ ಕೆಲಸ ಮಾಡಿದವರು ಕೂಡ ಈ ಬಾರಿ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸ್ ಮಹಾನಿರ್ದೇಶಕ ರಶ್ಮಿ ರಂಜನ್ ಸ್ವೈನ್ ಹೇಳಿದರು.</p>.<p>‘ಪ್ರಾಂತ್ಯದ ಜನರಲ್ಲಿ ಸ್ವಾತಂತ್ರ್ಯದ ಭಾವನೆ ಮೂಡಿದ್ದು, ಭಯ ಕಡಿಮೆಯಾಗಿದೆ. ಅದರಿಂದ ದಾಖಲೆ ಮತದಾನವಾಗಿದ್ದು, ಇಲ್ಲಿನ ರಾಜಕೀಯ ಸ್ವರೂಪದಲ್ಲಿ ಬದಲಾವಣೆ ಆಗಲಿದೆ’ ಎಂದು ಪಿಟಿಐಗೆ ತಿಳಿಸಿದರು.</p>.<p>‘ಹಿಂದೆ ಪಾಕಿಸ್ತಾನದ ನಕಲಿಗಳು, ಏಜೆಂಟರು ಮತ್ತು ಉಗ್ರರು ಚುನಾವಣಾ ಪ್ರಕ್ರಿಯೆಗೆ ನಾನಾ ರೀತಿ ಅಡ್ಡಿಪಡಿಸುತ್ತಿದ್ದರು. ಈ ಬಾರಿ ಪೊಲೀಸರು ಮತ್ತು ಆಡಳಿತ ಯಂತ್ರದ ಬಿಗಿ ಕ್ರಮಗಳಿಂದ ಚುನಾವಣೆ ಸುಸೂತ್ರವಾಗಿ ನಡೆಯಿತು’ ಎಂದರು.</p>.<p>‘ಜತೆಗೆ ನಿಷೇಧಿತ ಜಮಾತ್–ಎ–ಇಸ್ಲಾಮಿ ಸಂಘಟನೆಯು ಈ ಹಿಂದೆ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಜನರ ಮಾಹಿತಿ ಸಂಗ್ರಹಿಸಿ, ನಂತರ ಅವರನ್ನು ಗುರಿ ಮಾಡುತ್ತಿತ್ತು. ಈ ಬಾರಿ ಅದರ ಸದಸ್ಯರೇ ಬಹಿರಂಗವಾಗಿ ಮತದಾನದಲ್ಲಿ ಪಾಲ್ಗೊಂಡಿದ್ದರು. ಇದು ಪ್ರಾಂತ್ಯದ ಜನರ ಮನೋಭಾವದಲ್ಲಿ ಬಹುದೊಡ್ಡ ಬದಲಾವಣೆ ಆಗಿರುವುದನ್ನು ತೋರಿಸುತ್ತದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>