<p><strong>ನವದೆಹಲಿ (ಪಿಟಿಐ):</strong> ಹಲವು ತಿಂಗಳುಗಳ ವದಂತಿಗಳಿಗೆ ಕೊನೆಗೂ ತೆರೆ ಎಳೆದಿರುವ ಸಮಾಜವಾದಿ ಪಕ್ಷದ ಉಚ್ಚಾಟಿತ ಮುಖಂಡರಾದ ಅಮರ್ ಸಿಂಗ್ ಹಾಗೂ ಜಯಪ್ರದಾ ಅವರು ಸೋಮವಾರ ಅಜಿತ್ ಸಿಂಗ್ ನೇತೃತ್ವದ ರಾಷ್ಟ್ರೀಯ ಲೋಕ ದಳ (ಆರ್ಎಲ್ಡಿ) ಸೇರಿದರು.<br /> <br /> ಅಮರ್ ಸಿಂಗ್ ಅವರು ಫತೇಪುರ ಕ್ಷೇತ್ರದಿಂದ, ಜಯಪ್ರದಾ ಅವರು ಬಿಜನೊರ್ನಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ.<br /> <br /> ಆರ್ಎಲ್ಡಿ ಮುಖ್ಯಸ್ಥ ಅಜಿತ್ ಸಿಂಗ್ ಅವರ ಗೃಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮರ್ ಸಿಂಗ್, ಚುನಾವಣಾ ರಾಜಕೀಯಕ್ಕಾಗಿ ತಾವು ಆರ್ಎಲ್ಡಿ ಸೇರಿಲ್ಲ ಎಂದು ಹೇಳಿದರು.<br /> <br /> ‘ನನ್ನ ಎರಡು ಮೂತ್ರಪಿಂಡಗಳು ನಿಷ್ಕ್ರಿಯಗೊಂಡ ಹೊರತಾಗಿಯೂ, ನಾನು ಮತ್ತು ಜಯಪ್ರದಾ ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ 1,000 ಕಿ.ಮೀ ಪಾದಯಾತ್ರೆ ಮಾಡಿದ್ದೇವೆ’ ಎಂದು ಹೇಳಿದರು.<br /> <br /> ‘ಉತ್ತರ ಪ್ರದೇಶವನ್ನು ವಿಭಜನೆ ಮಾಡದೇ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂಬುದನ್ನು ಕಂಡುಕೊಂಡಿದ್ದೇನೆ. ಪೂರ್ವಾಂಚಲ, ಬುಂದೇಲ್ಖಂಡ ಮತ್ತು ಹರಿತ್ ಪ್ರದೇಶ ರಚನೆಯ ಬಗ್ಗೆ ಅಜಿತ್ ಅವರಿಗೆ ಇರುವಷ್ಟು ಸ್ಪಷ್ಟತೆ ಇತರ ಪ್ರಮುಖ ಪಕ್ಷಗಳ ಮುಖಂಡರಿಗಿಲ್ಲ’ ಎಂದೂ ಅವರು ಅಭಿಪ್ರಾಯ ಪಟ್ಟರು.<br /> <br /> ಅಜಿತ್ ಅವರು ಯಾವಾಗಲೂ ತಮಗೆ ಬೆಂಬಲ ನೀಡುತ್ತಿದ್ದರು. ತಾವು ಹಾಗೂ ಅಮರ್ ಸಿಂಗ್ ಆರ್ಎಲ್ಡಿಯ ಬಲವರ್ಧನೆಗೆ ಅಗತ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ನಟಿ, ಸಂಸದೆ ಜಯಪ್ರದಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಹಲವು ತಿಂಗಳುಗಳ ವದಂತಿಗಳಿಗೆ ಕೊನೆಗೂ ತೆರೆ ಎಳೆದಿರುವ ಸಮಾಜವಾದಿ ಪಕ್ಷದ ಉಚ್ಚಾಟಿತ ಮುಖಂಡರಾದ ಅಮರ್ ಸಿಂಗ್ ಹಾಗೂ ಜಯಪ್ರದಾ ಅವರು ಸೋಮವಾರ ಅಜಿತ್ ಸಿಂಗ್ ನೇತೃತ್ವದ ರಾಷ್ಟ್ರೀಯ ಲೋಕ ದಳ (ಆರ್ಎಲ್ಡಿ) ಸೇರಿದರು.<br /> <br /> ಅಮರ್ ಸಿಂಗ್ ಅವರು ಫತೇಪುರ ಕ್ಷೇತ್ರದಿಂದ, ಜಯಪ್ರದಾ ಅವರು ಬಿಜನೊರ್ನಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ.<br /> <br /> ಆರ್ಎಲ್ಡಿ ಮುಖ್ಯಸ್ಥ ಅಜಿತ್ ಸಿಂಗ್ ಅವರ ಗೃಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮರ್ ಸಿಂಗ್, ಚುನಾವಣಾ ರಾಜಕೀಯಕ್ಕಾಗಿ ತಾವು ಆರ್ಎಲ್ಡಿ ಸೇರಿಲ್ಲ ಎಂದು ಹೇಳಿದರು.<br /> <br /> ‘ನನ್ನ ಎರಡು ಮೂತ್ರಪಿಂಡಗಳು ನಿಷ್ಕ್ರಿಯಗೊಂಡ ಹೊರತಾಗಿಯೂ, ನಾನು ಮತ್ತು ಜಯಪ್ರದಾ ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ 1,000 ಕಿ.ಮೀ ಪಾದಯಾತ್ರೆ ಮಾಡಿದ್ದೇವೆ’ ಎಂದು ಹೇಳಿದರು.<br /> <br /> ‘ಉತ್ತರ ಪ್ರದೇಶವನ್ನು ವಿಭಜನೆ ಮಾಡದೇ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂಬುದನ್ನು ಕಂಡುಕೊಂಡಿದ್ದೇನೆ. ಪೂರ್ವಾಂಚಲ, ಬುಂದೇಲ್ಖಂಡ ಮತ್ತು ಹರಿತ್ ಪ್ರದೇಶ ರಚನೆಯ ಬಗ್ಗೆ ಅಜಿತ್ ಅವರಿಗೆ ಇರುವಷ್ಟು ಸ್ಪಷ್ಟತೆ ಇತರ ಪ್ರಮುಖ ಪಕ್ಷಗಳ ಮುಖಂಡರಿಗಿಲ್ಲ’ ಎಂದೂ ಅವರು ಅಭಿಪ್ರಾಯ ಪಟ್ಟರು.<br /> <br /> ಅಜಿತ್ ಅವರು ಯಾವಾಗಲೂ ತಮಗೆ ಬೆಂಬಲ ನೀಡುತ್ತಿದ್ದರು. ತಾವು ಹಾಗೂ ಅಮರ್ ಸಿಂಗ್ ಆರ್ಎಲ್ಡಿಯ ಬಲವರ್ಧನೆಗೆ ಅಗತ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ನಟಿ, ಸಂಸದೆ ಜಯಪ್ರದಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>