ಶುದ್ಧ ಕುಡಿಯುವ ನೀರು ಪೂರೈಕೆ, ಒಳಚರಂಡಿ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೆ ಶ್ರಮ ವಹಿಸಲಾಗಿದೆ. ಆದರೆ, ಕೆಲವು ಕಡೆ ಹೆಚ್ಚು ಕಮ್ಮಿ ಆಗಿದೆ. ಈಗ ಗವಿಯಪ್ಪ ಅವರು ಯಾವ ರೀತಿ ಕೆಲಸ ಮಾಡುತ್ತಾರೆ ಎನ್ನುವುದನ್ನು ನಾವು ಎದುರು ನೋಡುತ್ತೇವೆ ಎಂದರು.
ವರ್ಷಕ್ಕೆ ಮೂರು ತಿಂಗಳು ಗ್ರಾಮ ವಾಸ
ಸಿದ್ದಾರ್ಥ ಸಿಂಗ್ ಮಾತನಾಡಿ, ವರ್ಷದಲ್ಲಿ ಮೂರು ತಿಂಗಳು ಗ್ರಾಮ ವಾಸ ಮಾಡಿ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ಆನಂದ್ ಸಿಂಗ್ ಅವರ ಅಭಿವೃದ್ಧಿ ಕೆಲಸಗಳನ್ನು ನೋಡಿ ಜನ ನನಗೆ 70 ಸಾವಿರದ ಸಮೀಪ ಮತಗಳನ್ನು ಹಾಕಿದ್ದಾರೆ. ಸೋತರೂ ಕೂಡ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುವೆ. ಜನರಿಗಾಗಿ ನಮ್ಮ ಪಕ್ಷದ ಕಚೇರಿ, ರಾಣಿಪೇಟೆ ಕಚೇರಿಯ ಬಾಗಿಲುಗಳು ಸದಾ ತೆರೆದಿರುತ್ತವೆ. ಪಕ್ಷದ ಸಂಘಟನೆ ಜೊತೆಗೆ ವಕೀಲಿ ವೃತ್ತಿ ಕೂಡ ಮುಂದುವರೆಸುವೆ. ಸದಾ ಜನರೊಂದಿಗೆ ಸಂಪರ್ಕದಲ್ಲಿರುವೆ ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಮತದಾರರ ತೀರ್ಪೆ ಅಂತಿಮ. ಜನರ ತೀರ್ಪು ಗೌರವಿಸುತ್ತೇನೆ. ಸೋಲು–ಗೆಲುವು ಸಹಜ. ನನ್ನ ಜವಾಬ್ದಾರಿಯನ್ನು ನಾನು ನಿಭಾಯಿಸುತ್ತೇನೆ. ಪಕ್ಷದ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರು, ಮುಖಂಡರಿಗೆ ಕೃತಜ್ಞತೆ ಹೇಳುತ್ತೇನೆ ಎಂದರು.