<p><strong>ಬಳ್ಳಾರಿ</strong>: ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರೇ ದೂರು ದಾಖಲಿಸಲು ಚುನಾವಣಾ ಆಯೋಗ ಸಿದ್ಧಪಡಿಸಿರುವ ಸಿ-ವಿಜಿಲ್ ಮೊಬೈಲ್ ಅಪ್ಲಿಕೇಶನ್ ಬಳಸಿ ರಾಜ್ಯದಲ್ಲಿ ಈವರೆಗೆ 16,067 ದೂರುಗಳು ದಾಖಲಾಗಿವೆ. ಅವುಗಳ ಪೈಕಿ 15,102 ಪ್ರಕರಣ ಇತ್ಯರ್ಥಗೊಂಡಿದೆ.</p>.<p>‘ಸಿ ವಿಜಿಲ್’ ಆ್ಯಪ್ನಲ್ಲಿ ಚುನಾವಣಾ ಆಕ್ರಮ, ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳ ಬಗ್ಗೆ ಚಿತ್ರ, ದೃಶ್ಯ ಸಮೇತ ದೂರನ್ನು ಅಪ್ಲೋಡ್ ಮಾಡಿದಲ್ಲಿ, ಎಲ್ಲವನ್ನೂ ಪರಿಶೀಲಿಸಿ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳುತ್ತದೆ. ತಪ್ಪಿತಸ್ಥ ಸ್ಪರ್ಧಿಗಳನ್ನು ಅನರ್ಹಗೊಳಿಸಲು ಚುನಾವಣಾ ಆಯೋಗಕ್ಕೆ ಇಲ್ಲಿ ನಿರ್ಣಾಯಕ ಸಾಕ್ಷ್ಯ ಲಭಿಸುತ್ತದೆ.</p>.<p>ಸಾರ್ವಜನಿಕರ ದೂರುಗಳಿಗೆ ಅಧಿಕಾರಿಗಳು 100 ನಿಮಿಷಗಳ ಒಳಗೆ ಕಾರ್ಯಪ್ರವೃತ್ತರಾಗಬೇಕು. ದಾಖಲಾದ ಒಟ್ಟು ಪ್ರಕರಣಗಳ ಪೈಕಿ 887 ಪ್ರಕರಣಗಳನ್ನು ಬೇರೆ ಬೇರೆ ಕಾರಣಗಳಿಗೆ ಚುನಾವಣಾ ಆಯೋಗ ಕೈಬಿಟ್ಟಿದೆ. 78 ಪ್ರಕರಣ ಇತ್ಯರ್ಥವಾಗಲು ಬಾಕಿ ಇವೆ. </p>.<p><strong>ಯಾವ ಜಿಲ್ಲೆಯಲ್ಲಿ ಎಷ್ಟು ದೂರು?</strong></p>.<p>‘ಸಿ ವಿಜಿಲ್‘ ಬಳಸಿ ದೂರು ನೀಡುವುದರಲ್ಲಿ ವಿಜಯಪುರ ಜಿಲ್ಲೆ ಮುಂದಿದ್ದು ಅತಿ ಹೆಚ್ಚು 3,295 ಪ್ರಕರಣ ಮತ್ತು ಅತಿ ಕಡಿಮೆ 12 ಪ್ರಕರಣ ವಿಜಯನಗರ ಜಿಲ್ಲೆಯಲ್ಲಿ ದಾಖಲಾಗಿವೆ.</p>.<p>‘ಈವರೆಗೆ ದಾಖಲಾಗಿರುವ ಪ್ರಕರಣಗಳಲ್ಲಿ ಹೆಚ್ಚಿನವು ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ಬ್ಯಾನರ್, ಬಾವುಟ, ಜನಪ್ರತಿನಿಧಿಗಳ ಹೆಸರುಗಳುಳ್ಳ ಫಲಕ ತೆರವು ಮಾಡಲು ಕೋರಿದ ದೂರುಗಳಾಗಿವೆ. ಚುನಾವಣಾ ಭರಾಟೆ ಜೋರಾದ ಬಳಿಕ ಗಂಭೀರ ಸ್ವರೂಪದ ದೂರುಗಳು ದಾಖಲಾಗಬಹುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><blockquote>ಚುನಾವಣಾ ಆಕ್ರಮಗಳ ಬಗ್ಗೆ ಜನ ಜಾಗೃತರಾಗಬೇಕು. ಅಕ್ರಮ ಕಂಡ ಕೂಡಲೇ ನಿರ್ಲಕ್ಷಿಸದೇ ದೂರುಗಳನ್ನು ದಾಖಲಿಸಬೇಕು. ಈ ಮೂಲಕ ಅಕ್ರಮ ರಹಿತ ಚುನಾವಣೆಗೆ ನೆರವಾಗಬೇಕು –</blockquote><span class="attribution"> ಸಕೀನಾ ಅಹ್ಮದ್ ‘ಸಿ ವಿಜಿಲ್‘ ನೋಡಲ್ ಅಧಿಕಾರಿ ಬಳ್ಳಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ</strong>: ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರೇ ದೂರು ದಾಖಲಿಸಲು ಚುನಾವಣಾ ಆಯೋಗ ಸಿದ್ಧಪಡಿಸಿರುವ ಸಿ-ವಿಜಿಲ್ ಮೊಬೈಲ್ ಅಪ್ಲಿಕೇಶನ್ ಬಳಸಿ ರಾಜ್ಯದಲ್ಲಿ ಈವರೆಗೆ 16,067 ದೂರುಗಳು ದಾಖಲಾಗಿವೆ. ಅವುಗಳ ಪೈಕಿ 15,102 ಪ್ರಕರಣ ಇತ್ಯರ್ಥಗೊಂಡಿದೆ.</p>.<p>‘ಸಿ ವಿಜಿಲ್’ ಆ್ಯಪ್ನಲ್ಲಿ ಚುನಾವಣಾ ಆಕ್ರಮ, ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳ ಬಗ್ಗೆ ಚಿತ್ರ, ದೃಶ್ಯ ಸಮೇತ ದೂರನ್ನು ಅಪ್ಲೋಡ್ ಮಾಡಿದಲ್ಲಿ, ಎಲ್ಲವನ್ನೂ ಪರಿಶೀಲಿಸಿ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳುತ್ತದೆ. ತಪ್ಪಿತಸ್ಥ ಸ್ಪರ್ಧಿಗಳನ್ನು ಅನರ್ಹಗೊಳಿಸಲು ಚುನಾವಣಾ ಆಯೋಗಕ್ಕೆ ಇಲ್ಲಿ ನಿರ್ಣಾಯಕ ಸಾಕ್ಷ್ಯ ಲಭಿಸುತ್ತದೆ.</p>.<p>ಸಾರ್ವಜನಿಕರ ದೂರುಗಳಿಗೆ ಅಧಿಕಾರಿಗಳು 100 ನಿಮಿಷಗಳ ಒಳಗೆ ಕಾರ್ಯಪ್ರವೃತ್ತರಾಗಬೇಕು. ದಾಖಲಾದ ಒಟ್ಟು ಪ್ರಕರಣಗಳ ಪೈಕಿ 887 ಪ್ರಕರಣಗಳನ್ನು ಬೇರೆ ಬೇರೆ ಕಾರಣಗಳಿಗೆ ಚುನಾವಣಾ ಆಯೋಗ ಕೈಬಿಟ್ಟಿದೆ. 78 ಪ್ರಕರಣ ಇತ್ಯರ್ಥವಾಗಲು ಬಾಕಿ ಇವೆ. </p>.<p><strong>ಯಾವ ಜಿಲ್ಲೆಯಲ್ಲಿ ಎಷ್ಟು ದೂರು?</strong></p>.<p>‘ಸಿ ವಿಜಿಲ್‘ ಬಳಸಿ ದೂರು ನೀಡುವುದರಲ್ಲಿ ವಿಜಯಪುರ ಜಿಲ್ಲೆ ಮುಂದಿದ್ದು ಅತಿ ಹೆಚ್ಚು 3,295 ಪ್ರಕರಣ ಮತ್ತು ಅತಿ ಕಡಿಮೆ 12 ಪ್ರಕರಣ ವಿಜಯನಗರ ಜಿಲ್ಲೆಯಲ್ಲಿ ದಾಖಲಾಗಿವೆ.</p>.<p>‘ಈವರೆಗೆ ದಾಖಲಾಗಿರುವ ಪ್ರಕರಣಗಳಲ್ಲಿ ಹೆಚ್ಚಿನವು ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ಬ್ಯಾನರ್, ಬಾವುಟ, ಜನಪ್ರತಿನಿಧಿಗಳ ಹೆಸರುಗಳುಳ್ಳ ಫಲಕ ತೆರವು ಮಾಡಲು ಕೋರಿದ ದೂರುಗಳಾಗಿವೆ. ಚುನಾವಣಾ ಭರಾಟೆ ಜೋರಾದ ಬಳಿಕ ಗಂಭೀರ ಸ್ವರೂಪದ ದೂರುಗಳು ದಾಖಲಾಗಬಹುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><blockquote>ಚುನಾವಣಾ ಆಕ್ರಮಗಳ ಬಗ್ಗೆ ಜನ ಜಾಗೃತರಾಗಬೇಕು. ಅಕ್ರಮ ಕಂಡ ಕೂಡಲೇ ನಿರ್ಲಕ್ಷಿಸದೇ ದೂರುಗಳನ್ನು ದಾಖಲಿಸಬೇಕು. ಈ ಮೂಲಕ ಅಕ್ರಮ ರಹಿತ ಚುನಾವಣೆಗೆ ನೆರವಾಗಬೇಕು –</blockquote><span class="attribution"> ಸಕೀನಾ ಅಹ್ಮದ್ ‘ಸಿ ವಿಜಿಲ್‘ ನೋಡಲ್ ಅಧಿಕಾರಿ ಬಳ್ಳಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>