‘ಆನಂದ್ ಸಿಂಗ್, ಅವರ ಮಗ, ವಿಜಯನಗರ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಸಿದ್ದಾರ್ಥ ಸಿಂಗ್ ಹಾಗೂ ಅವರ ಬೆಂಬಲಿಗರೊಂದಿಗೆ ನಗರದ ಪ್ರಿಯದರ್ಶಿನಿ ಪ್ರೈಡ್ ಹೋಟೆಲ್ನಲ್ಲಿ ಚಹಾ ಸೇವಿಸುತ್ತಿದ್ದರು. ಈ ವೇಳೆ ಅಲ್ಲಿಗೆ ವೇಣುಗೋಪಾಲ್ ಬಂದರು. ಅವರನ್ನು ಕಂಡ ಆನಂದ್ ಸಿಂಗ್, ಏನಪ್ಪ ಎಂದು ಕೇಳಿದ್ದಾರೆ. ಅದಕ್ಕೆ ವೇಣುಗೋಪಾಲ್, ‘ಮನೆ ಒಡುಕ’ ಎಂದಿದ್ದಾರೆ. ‘ಹೌದು ನಾನು ಮನೆ ಒಡುಕ’ ಎಂದು ಹೇಳಿದ್ದಾರೆ. ನಂತರ ಮಾತಿಗೆ ಮಾತು ಬೆಳೆದಿದೆ. ಎರಡೂ ಕಡೆಯವರು ಎದುರು ಬದುರಾಗಿ ಪರಿಸ್ಥಿತಿ ಕೈಮೀರಿತ್ತು’ ಎಂದು ಪ್ರತ್ಯದರ್ಶಿಗಳು ತಿಳಿಸಿದ್ದಾರೆ.
ವಿಷಯ ತಿಳಿದು ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು ಗುಂಪನ್ನು ಚದುರಿಸಿ, ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡು ಪರಿಸ್ಥಿತಿಯನ್ನು ನಿಯಂತ್ರಿಸಿದರು