ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಅಧಿಕಾರಕ್ಕೆ ಬರುವಂತೆ ದೇವರ ಮೊರೆ ಹೋದ ಸಿದ್ದು–ಡಿಕೆಶಿ

Published 9 ಮೇ 2023, 16:27 IST
Last Updated 9 ಮೇ 2023, 16:27 IST
ಅಕ್ಷರ ಗಾತ್ರ

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಮಂಗಳವಾರ ಭೇಟಿ ನೀಡಿದ್ದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚಾಮುಂಡೇಶ್ವರಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್‌ಗಳನ್ನು ಮಲ್ಲಿಗೆ ಕನಕಾಂಬರ ಹೂವಿನ ಹಾರ, ತುಪ್ಪ, ಹಣ್ಣು, ಹಾಗೂ ಸೀರೆಯೊಂದಿಗೆ ಪೂಜಾ ತಟ್ಟೆಯಲ್ಲಿರಿಸಿದ ಡಿ.ಕೆ.ಶಿವಕುಮಾರ್‌, ‘ಕಾಂಗ್ರೆಸ್ ಸರ್ಕಾರ ಬರಲು ಆಶೀರ್ವಾದ ಮಾಡು ತಾಯಿ, ಜನರ ಯೋಜನೆಗಳನ್ನು ಜಾರಿಗೊಳಿಸಲು ಅನುಕೂಲ ಮಾಡಿಕೊಡಬೇಕು’ ಎಂದು ಕೋರಿ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್‌ ಅವರಿಗೆ ನೀಡಿ, ಪ್ರಸಾದ ಪಡೆದರು.ನಂತರ ದೇವಿಯ ಉತ್ಸವ ಮೂರ್ತಿಗೆ ನಮಸ್ಕರಿಸಿದ ಇಬ್ಬರೂ ದೇವಾಲಯದ ಎದುರು ತೆಂಗಿನಕಾಯಿ ಒಡೆದರು ಸಂಕಲ್ಪ ಸಲ್ಲಿಸಿದರು

ಯೂಟ್ಯೂಬ್ ಚಂದಾದಾರರಾಗಿ:    / prajavani   ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT