ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಮಂಗಳವಾರ ಭೇಟಿ ನೀಡಿದ್ದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚಾಮುಂಡೇಶ್ವರಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಕಾಂಗ್ರೆಸ್ನ ಗ್ಯಾರಂಟಿ ಕಾರ್ಡ್ಗಳನ್ನು ಮಲ್ಲಿಗೆ ಕನಕಾಂಬರ ಹೂವಿನ ಹಾರ, ತುಪ್ಪ, ಹಣ್ಣು, ಹಾಗೂ ಸೀರೆಯೊಂದಿಗೆ ಪೂಜಾ ತಟ್ಟೆಯಲ್ಲಿರಿಸಿದ ಡಿ.ಕೆ.ಶಿವಕುಮಾರ್, ‘ಕಾಂಗ್ರೆಸ್ ಸರ್ಕಾರ ಬರಲು ಆಶೀರ್ವಾದ ಮಾಡು ತಾಯಿ, ಜನರ ಯೋಜನೆಗಳನ್ನು ಜಾರಿಗೊಳಿಸಲು ಅನುಕೂಲ ಮಾಡಿಕೊಡಬೇಕು’ ಎಂದು ಕೋರಿ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಅವರಿಗೆ ನೀಡಿ, ಪ್ರಸಾದ ಪಡೆದರು.ನಂತರ ದೇವಿಯ ಉತ್ಸವ ಮೂರ್ತಿಗೆ ನಮಸ್ಕರಿಸಿದ ಇಬ್ಬರೂ ದೇವಾಲಯದ ಎದುರು ತೆಂಗಿನಕಾಯಿ ಒಡೆದರು ಸಂಕಲ್ಪ ಸಲ್ಲಿಸಿದರು