ಈ ನೋಟಿಸ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಯುವ ಸಮುದಾಯ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದೆ. ‘ಚುನಾವಣಾ ಆಯೋಗವು ಮತಚಲಾವಣೆ ಯಂತ್ರದಲ್ಲಿ ನೋಟಾ ಬಟನ್ ಇಟ್ಟಿದೆ. ಆಯೋಗವೇ ನೋಟಾಗೆ ಮತ ನೀಡಲು ಅವಕಾಶ ನೀಡಿದೆ. ನೀರಿನ ಸಮಸ್ಯೆ ಬಗೆಹರಿಸದ ಕಾರಣ ನೋಟಾಗೆ ಮತ ನೀಡುವಂತೆ ಹೇಳಿಕೆ ನೀಡಿದ್ದಾರೆ. ಇದರಲ್ಲಿ ತಪ್ಪೇನಿದೆ. ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಇಲ್ಲವೆ’ ಎಂದು ಯುವ ಸಮುದಾಯ ಅಧಿಕಾರಿಗಳ ನಡೆಯನ್ನು ಪ್ರಶ್ನಿಸುತ್ತಿದೆ.