ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುವ ಮತದಾರರು ರಾಜಕೀಯ ಅಮಲಿನಲ್ಲಿ ತೇಲಬೇಡಿ’

ವೋಟ್‌ ಮಾಡೋಣ ಬನ್ನಿ
Last Updated 7 ಏಪ್ರಿಲ್ 2019, 20:23 IST
ಅಕ್ಷರ ಗಾತ್ರ

ಮತ ಹಾಕೋದು ನಮ್ಮೆಲ್ಲರ ಜವಾಬ್ದಾರಿ. ಆದರೆ ಚುನಾವಣೆಯಲ್ಲಿ ಯೋಗ್ಯರನ್ನ ಗುರುತಿಸುವುದು ಕಷ್ಟಕರ. ಸರಿಯಾದ ವ್ಯಕ್ತಿಗೆ ಮತ ಹಾಕದಿದ್ದಲ್ಲಿ ನಮ್ಮ ನಿರ್ಧಾರದಲ್ಲಿ ಎಡವಿದಂತೆ.

ಯುವ ಮತದಾರರು ಯಾವುದೇ ರಾಜಕೀಯ ಅಮಲಿನಲ್ಲಿ ತೇಲಬಾರದು. ನಮ್ಮ ಕಣ್ಣಿಗೆ ಕಾಣುತ್ತಿರುವು‌ದಷ್ಟೇ ನಿಜವಲ್ಲ. ರಾಜಕಾರಣಿಗಳ ಭಾಷಣಗಳನ್ನು ವಿಮರ್ಶೆಗೆ ಒಳಪಡಿಸದೆ ಅವರ ಮಾತಿಗೆ ಮರುಳಾಗಬಾರದು. ತಾಳ್ಮೆಯಿಂದ ಅಭ್ಯರ್ಥಿಯ ಹೇಳಿಕೆಗಳ ಸತ್ಯಾಸತ್ಯತೆಯನ್ನು ಅವಲೋಕಿಸಿ ಮತ ಹಾಕಬೇಕು. ಯಾವುದೇ ವ್ಯಕ್ತಿ, ಯಾವುದೇಪಕ್ಷ ದೊಡ್ಡದಲ್ಲ. ತಳವರ್ಗದ ಆಲೋಚನೆಗಳು ಹಾಗೂ ಮೂಲ ಸೌಕರ್ಯಗಳಾದ ಅನ್ನ, ನೀರು, ಪರಿಸರ, ಶಿಕ್ಷಣ, ಆರೋಗ್ಯ ವಿಚಾರಗಳಿಗೆ ಒತ್ತು ನೀಡುವವರಿಗೆ ಮತ ಹಾಕೋಣ.

– ಜಯತೀರ್ಥ, ಸಿನಿಮಾ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT