ಯುವ ಮತದಾರರು ಯಾವುದೇ ರಾಜಕೀಯ ಅಮಲಿನಲ್ಲಿ ತೇಲಬಾರದು. ನಮ್ಮ ಕಣ್ಣಿಗೆ ಕಾಣುತ್ತಿರುವುದಷ್ಟೇ ನಿಜವಲ್ಲ. ರಾಜಕಾರಣಿಗಳ ಭಾಷಣಗಳನ್ನು ವಿಮರ್ಶೆಗೆ ಒಳಪಡಿಸದೆ ಅವರ ಮಾತಿಗೆ ಮರುಳಾಗಬಾರದು. ತಾಳ್ಮೆಯಿಂದ ಅಭ್ಯರ್ಥಿಯ ಹೇಳಿಕೆಗಳ ಸತ್ಯಾಸತ್ಯತೆಯನ್ನು ಅವಲೋಕಿಸಿ ಮತ ಹಾಕಬೇಕು. ಯಾವುದೇ ವ್ಯಕ್ತಿ, ಯಾವುದೇಪಕ್ಷ ದೊಡ್ಡದಲ್ಲ. ತಳವರ್ಗದ ಆಲೋಚನೆಗಳು ಹಾಗೂ ಮೂಲ ಸೌಕರ್ಯಗಳಾದ ಅನ್ನ, ನೀರು, ಪರಿಸರ, ಶಿಕ್ಷಣ, ಆರೋಗ್ಯ ವಿಚಾರಗಳಿಗೆ ಒತ್ತು ನೀಡುವವರಿಗೆ ಮತ ಹಾಕೋಣ.