‘ನಾನು ಸೋತಿದ್ದರಿಂದ ಹೆಚ್ಚು ದುಃಖ ಆಗಲಿಲ್ಲ. ಆದರೆ ಹಲವಾರು ‘ಭಾಗ್ಯ’ಗಳ ಮೂಲಕ ಸಿದ್ದರಾಮಯ್ಯ ಅವರು ಮಾಡಿದ ಜನಪರ ಕೆಲಸಗಳನ್ನು ಜನರು ಗುರುತಿಸಲಿಲ್ಲ ಎಂಬ ಬೇಸರ ಕಾಡುತ್ತಿದೆ. ನನ್ನ ಮನೆಗೆ ಬರುವ ಯಾರೊಬ್ಬರ ಜಾತಿ, ವರ್ಗ, ಪಕ್ಷ ಯಾವುದನ್ನೂ ನೋಡದೇ ನಾನು ಕೆಲಸ ಮಾಡಿದ್ದೇನೆ. ಕೃಷಿ ಹೊಂಡಗಳನ್ನು ನಿರ್ಮಿಸಿದ್ದೇನೆ. 700ಕ್ಕೂ ಅಧಿಕ ಕುಟುಂಬಗಳಿಗೆ 2 ಆಕಳು ಕೊಡಿಸಿದ್ದೇನೆ. ಹೀಗಿದ್ದರೂ ನನ್ನ ಸೋಲಿನ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದರು.